Home / ಕಥೆ / ಸಣ್ಣ ಕಥೆ / ಸುಗುಣ ಗಂಭೀರ

ಸುಗುಣ ಗಂಭೀರ

ಬೋಳತಲೆ ಚಾಮರಾಜ ಒಡೆಯರ ಕಾಲದಲ್ಲಿ ಒಡೆಯರ ವಂಶಕ್ಕೆ ಅಧಿಕಾರವು ಹೆಚ್ಚಾಗಿರಲಿಲ್ಲ. ಇವರೂ ನೆರೆಹೊರೆಯಲ್ಲಿದ್ದ ಒಡೆಯರೂ ಪಾಳಯಗಾರರೊಂದಿಗೆ ಸೇರಿಕೊಂಡು ಶ್ರೀರಂಗ ಪಟ್ಟಣ ಅಧಿಕಾರಿಗೆ ಪೊಗದಿ ಕೊಡಬೇಕಾಗಿತ್ತು.

ಶ್ರೀರಂಗಪಟ್ಟಣದಲ್ಲಿ ವಿಜಯನಗರದ ಅಧಿಕಾರಿಯಾಗಿ ರಾಮರಾಯನೆಂಬಾತನಿದ್ದನು. ಸುತ್ತಮುತ್ತಣ ಪಾಳಯಗಾರರನ್ನು ಆಳುತ್ತಿದ್ದ ಆತನು ತೊರೆಮಾವಿನಹಳ್ಳಿಯ ರೇಮಟಿ ವೆಂಕಟಾದ್ರಿ ನಾಯಕನನ್ನು ಮೆಚ್ಚಿ ಆತನಿಗೆ ಹೆಚ್ಚು ಅಧಿಕಾರವನ್ನು ಕೊಟ್ಟನು. ಚಾಮರಾಜ ಒಡೆಯರಿಗೆ ಇದು ಸಹಿಸಲಿಲ್ಲ. ಆದರೆ ರಾಮರಾಯನ ಬೆಂಬಲವನ್ನು ಪಡೆದ ವೆಂಕಟಾದ್ರಿ ನಾಯಕನನ್ನು ಇದಿರಿಸುವುದು ಸುಲಭವಾಗಿರಲ್ಲ. ಬಂದ ಆದಾಯದಲ್ಲಿ ಸಾಕಾದಷ್ಟು ಸೈನ್ಯವನ್ನು ಕೂಡಿಸುವುದಕ್ಕೆ ಆಗಲಿಲ್ಲ; ಮತ್ತು ಮೈಸೂರಿಗೆ ಕೋಟೆ ಕಟ್ಟುವುದಕ್ಕೂ ಅವಕಾಶವಿರಲಿಲ್ಲ. ಏಕೆಂದರೆ ಶ್ರೀರಂಗಪಟ್ಟಣದ ಪ್ರತಿನಿಧಿಯು ಹಾಗೆ ಮಾಡಿದಲ್ಲಿ ಕೋಪಗೊಳ್ಳುತ್ತಿದ್ದನು.

ಆಗ ಚಾಮರಾಜ ಒಡೆಯರು ಉಪಾಯವನ್ನು ಯೋಚಿಸಿದರು. ಹಣವನ್ನುಳಿಸಿ ಕೊಳ್ಳುವುದಕ್ಕೂ ಮೈಸೂರಿಗೆ ಕೋಟೆ ಕಟ್ಟುವುದಕ್ಕೂ ಅನುಕೂಲವಾಗುವ ಹಾಗೆ ರಾಮರಾಯನ ಬಳಿಗೆ “ನಮ್ಮ ಹೊಲಗಳಲ್ಲಿ ಮಗಳ ಅಂಗಳದಲ್ಲಿಯೂ ಕಾಡುಹಂದಿಗಳ ಕಾಟ ಹೆಚ್ಚಾಗಿದೆ. ಕಾಡುಹಂದಿಗಳನ್ನು ತಡೆಯಲು ಊರನ್ನು ಕೋಟೆಯಿಂದ ಭದ್ರಪಡಿಸಬೇಕು; ಅದಕ್ಕೆ ಹಣವೂ ಬೇಕು. ಆದ್ದರಿಂದ ತಾವೂ ನಮ್ಮ ಪೊಗದಿಯ ಹಣವನ್ನು ಮನ್ನಿಸಿ ಕೋಟೆ ಕಟ್ಟಲು ಅನುಮತಿ ಕೊಡಬೇಕು” ಎಂದು ಹೇಳಿ ಕಳುಹಿಸಿದರು. ಆತನು ಒಪ್ಪಲು ಪೊಗದಿಯ ಹಣದಿಂದ ಕೋಟೆಯನ್ನು ಕಟ್ಟಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.

ಬಳಿಕ ಒಂದಾನೊಂದುಸಲ ವೆಂಕಟಪ್ಪ ನಾಯಕನು ದಾಳ, ದಮಾಣ, ಅಂದಳ ಮುಂತಾದವುಗಳಿಂದೊಡಗೂಡಿ ಶ್ರೀರಂಗಪಟ್ಟಣಕ್ಕೆ ಹೋಗುತ್ತಿದ್ದಾಗ ಚಾಮರಾಜ ಒಡೆಯರು ಆತನನ್ನು ಕಾಳಗಕ್ಕೆ ಕರೆದರು. ಮೈಸೂರಿನ ಭಟರು ಚನ್ನಾಗಿ ಕಾದಿ ದಾಳದಮಾಣ ಮುಂತಾದುವನ್ನು ಕಿತ್ತುಕೊಂಡರು. ಅಂದಿನಿಂದ ಚಾಮರಾಜ ಒಡೆಯರು ವೆಂಕಟಾದ್ರಿನಾಯಕನು ಒಪ್ಪಿಸಿ ಕೊಂಡಿದ್ದ “ಸುಗುಣ ಗಂಭೀರ” ನೆಂಬ ಬಿರುದನ್ನು ತಾವೇ ವಹಿಸಿದರು.
*****
[ವಂಶರತ್ನಾಕರ, ಪುಟ ೨೦ ; ವಂಶಾವಳಿ, ಪುಟ ೧೭]

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...