Home / ಕಥೆ / ಸಣ್ಣ ಕಥೆ / ಸುಗುಣ ಗಂಭೀರ

ಸುಗುಣ ಗಂಭೀರ

ಬೋಳತಲೆ ಚಾಮರಾಜ ಒಡೆಯರ ಕಾಲದಲ್ಲಿ ಒಡೆಯರ ವಂಶಕ್ಕೆ ಅಧಿಕಾರವು ಹೆಚ್ಚಾಗಿರಲಿಲ್ಲ. ಇವರೂ ನೆರೆಹೊರೆಯಲ್ಲಿದ್ದ ಒಡೆಯರೂ ಪಾಳಯಗಾರರೊಂದಿಗೆ ಸೇರಿಕೊಂಡು ಶ್ರೀರಂಗ ಪಟ್ಟಣ ಅಧಿಕಾರಿಗೆ ಪೊಗದಿ ಕೊಡಬೇಕಾಗಿತ್ತು.

ಶ್ರೀರಂಗಪಟ್ಟಣದಲ್ಲಿ ವಿಜಯನಗರದ ಅಧಿಕಾರಿಯಾಗಿ ರಾಮರಾಯನೆಂಬಾತನಿದ್ದನು. ಸುತ್ತಮುತ್ತಣ ಪಾಳಯಗಾರರನ್ನು ಆಳುತ್ತಿದ್ದ ಆತನು ತೊರೆಮಾವಿನಹಳ್ಳಿಯ ರೇಮಟಿ ವೆಂಕಟಾದ್ರಿ ನಾಯಕನನ್ನು ಮೆಚ್ಚಿ ಆತನಿಗೆ ಹೆಚ್ಚು ಅಧಿಕಾರವನ್ನು ಕೊಟ್ಟನು. ಚಾಮರಾಜ ಒಡೆಯರಿಗೆ ಇದು ಸಹಿಸಲಿಲ್ಲ. ಆದರೆ ರಾಮರಾಯನ ಬೆಂಬಲವನ್ನು ಪಡೆದ ವೆಂಕಟಾದ್ರಿ ನಾಯಕನನ್ನು ಇದಿರಿಸುವುದು ಸುಲಭವಾಗಿರಲ್ಲ. ಬಂದ ಆದಾಯದಲ್ಲಿ ಸಾಕಾದಷ್ಟು ಸೈನ್ಯವನ್ನು ಕೂಡಿಸುವುದಕ್ಕೆ ಆಗಲಿಲ್ಲ; ಮತ್ತು ಮೈಸೂರಿಗೆ ಕೋಟೆ ಕಟ್ಟುವುದಕ್ಕೂ ಅವಕಾಶವಿರಲಿಲ್ಲ. ಏಕೆಂದರೆ ಶ್ರೀರಂಗಪಟ್ಟಣದ ಪ್ರತಿನಿಧಿಯು ಹಾಗೆ ಮಾಡಿದಲ್ಲಿ ಕೋಪಗೊಳ್ಳುತ್ತಿದ್ದನು.

ಆಗ ಚಾಮರಾಜ ಒಡೆಯರು ಉಪಾಯವನ್ನು ಯೋಚಿಸಿದರು. ಹಣವನ್ನುಳಿಸಿ ಕೊಳ್ಳುವುದಕ್ಕೂ ಮೈಸೂರಿಗೆ ಕೋಟೆ ಕಟ್ಟುವುದಕ್ಕೂ ಅನುಕೂಲವಾಗುವ ಹಾಗೆ ರಾಮರಾಯನ ಬಳಿಗೆ “ನಮ್ಮ ಹೊಲಗಳಲ್ಲಿ ಮಗಳ ಅಂಗಳದಲ್ಲಿಯೂ ಕಾಡುಹಂದಿಗಳ ಕಾಟ ಹೆಚ್ಚಾಗಿದೆ. ಕಾಡುಹಂದಿಗಳನ್ನು ತಡೆಯಲು ಊರನ್ನು ಕೋಟೆಯಿಂದ ಭದ್ರಪಡಿಸಬೇಕು; ಅದಕ್ಕೆ ಹಣವೂ ಬೇಕು. ಆದ್ದರಿಂದ ತಾವೂ ನಮ್ಮ ಪೊಗದಿಯ ಹಣವನ್ನು ಮನ್ನಿಸಿ ಕೋಟೆ ಕಟ್ಟಲು ಅನುಮತಿ ಕೊಡಬೇಕು” ಎಂದು ಹೇಳಿ ಕಳುಹಿಸಿದರು. ಆತನು ಒಪ್ಪಲು ಪೊಗದಿಯ ಹಣದಿಂದ ಕೋಟೆಯನ್ನು ಕಟ್ಟಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.

ಬಳಿಕ ಒಂದಾನೊಂದುಸಲ ವೆಂಕಟಪ್ಪ ನಾಯಕನು ದಾಳ, ದಮಾಣ, ಅಂದಳ ಮುಂತಾದವುಗಳಿಂದೊಡಗೂಡಿ ಶ್ರೀರಂಗಪಟ್ಟಣಕ್ಕೆ ಹೋಗುತ್ತಿದ್ದಾಗ ಚಾಮರಾಜ ಒಡೆಯರು ಆತನನ್ನು ಕಾಳಗಕ್ಕೆ ಕರೆದರು. ಮೈಸೂರಿನ ಭಟರು ಚನ್ನಾಗಿ ಕಾದಿ ದಾಳದಮಾಣ ಮುಂತಾದುವನ್ನು ಕಿತ್ತುಕೊಂಡರು. ಅಂದಿನಿಂದ ಚಾಮರಾಜ ಒಡೆಯರು ವೆಂಕಟಾದ್ರಿನಾಯಕನು ಒಪ್ಪಿಸಿ ಕೊಂಡಿದ್ದ “ಸುಗುಣ ಗಂಭೀರ” ನೆಂಬ ಬಿರುದನ್ನು ತಾವೇ ವಹಿಸಿದರು.
*****
[ವಂಶರತ್ನಾಕರ, ಪುಟ ೨೦ ; ವಂಶಾವಳಿ, ಪುಟ ೧೭]

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...