Home / ಕಥೆ / ಕಾದಂಬರಿ / ವಾಗೇವಿ – ೧

ವಾಗೇವಿ – ೧

“ಅವಳ್ಯಾರು ವಾಗ್ದೇವಿಯೇ? ಆಹಾ! ಸಾಕ್ಷಾತ್‌ ಅಜನರಾಣಿಯೇ ಸರಿ.”

“ಪರಾಕೆ! ಅಜನರಾಣಿಗಾದರೂ ನಾಸಿಕನಾಸ್ತಿ. ವಾಗ್ದೇವಿಗೆ ಆ ಅಂಗವು ಸಂಪೂರ್ಣತೆಯುಳ್ಳದ್ದಾಗಿದೆ ಆದಕಾರಣ ಬೊಮ್ಮನ ಪತ್ನಿಗಿಂತ ವಾಗ್ದೇವಿಯೇ ಹೆಚ್ಚು ರೂಪವತಿಯೆಂದು ನನ್ನ ಅಭಿಪ್ರಾಯ.”

“ಪೂರ್ವಾಶ್ರಮದಲ್ಲಿ ನಮ್ಮ ಆಣ್ಣಗೆ ಇವಳು ನಾದಿನಿ. ನಾವು ಸನ್ಯಾಸ ಪಡಕೊಂಡ ತರುವಾಯ ಅವಳನ್ನು ಇದು ಮೊದಲು ನೋಡಲಿಲ್ಲವು. ಇವಳ ರೂಪಲಾವಣ್ಯವನ್ನು ಈಗ ನೋಡಿದರೆ, ಷಡ್ವೈರಿಗಳನ್ನು ನಿಗ್ರಹಮಾಡಿದ ಯತಿಯಾದರೂ ಸೋಥೋಗನೇ?”

“ಪರಾಕೆ! ಸೃಷ್ಟಿಸ್ಥಿಲಯಕ್ಕೆ ಕಾರಣಭೂತರಾದ ಅಜ ಹರಿ ರುದ್ರ– ಇವರೇ ಒಬೊಬ್ಬರನ್ನು ಕಟ್ಟಿಕೊಂಡ ಮೇಲೆ, ಮಾನನ ಜನ್ಮದಲ್ಲಿ ಹುಟ್ಟಿ ದವನ ಪಾಡೇನು?”

ಈ ಸಂಭಾಷಣೆಯು ಕುಮುದಪುರದಲ್ಲಿ ಕಾಳಿಕಾ ನದಿಯ ತೀರದಲ್ಲಿ ಸ್ವಾನವನ್ನು ಗೈದು, ಶುಚಿರ್ಭೂತರಾಗಿರುತ್ತಿದ್ದ ಚಂಚಲನೇತ್ರ ಶ್ರೀಪಾದಂ ಗಳಿಗೂ ಅವರ ಅಚ್ಚುಮೆಚ್ಚಿನ ಪಾರುಪತ್ಯಗಾರ ವೆಂಕಟಪತಿಯಾಚಾರ್ಯಗೂ ನಡೆಯುತ್ತಲಿತ್ತು. ಪರಿಚಾರಕನಾದ ಹಯಗ್ರೀವಮಾಣಿಯು ಒಂದು ಶಬ್ದ ವಾದರೂ ಕಿವಿಗೆ ಕೇಳದವನಂತೆ ಅತ್ತಿತ್ತ ನೋಡುತ್ತಾ ನಿಂತುಕೊಂಡಿದ್ದನು. ಅವನನ್ನು ನೋಡಿ ವೆಂಕಟಪತಿಯು ಶ್ರೀಪಾದಂಗಳೊಡನೆ, “ಪರಾಕೆ! ಹುಟ್ಟು ಕಿವುಡನಾದ ಈ ಮಾಣಿಯ ಅವಸ್ಥೆಯು ನಿಜವಾಗಿ ಕನಿಕರಪಡಲಿಕ್ಕೆ ಯೋಗ್ಯವಾದ್ದೇ. ನಾವು ಏನೇನು ಮಾತಾಡಿವೆನೆಂದು ಅವನಿಗೆ ಸ್ವಲ್ಪವಾದರೂ ಗೊತ್ತಾಯಿತೇ? ಶ್ರೀಹರಿ! ನಿನ್ನ ಮಹಿಮೆಯು ಅಪಾರವಾದದ್ದು. ಇಷ್ಟು ಒಳ್ಳೇ ಹುಡುಗನಿಗೆ ಕರ್ಣದೋಷವನ್ನು ನೀನು ಕೊಟ್ಟ ದೆಸೆಯಿಂದ ಅವನ ಜನ್ಮವೇ ವ್ಯರ್ಧವಾಯಿತು” ಎಂದನು. “ಇಂಧಾ ಕುಂದು ಈ ಯೌವನ ನಸ್ಥನಿಗೆ ಇದ್ದಿಲ್ಲವಾದರೆ ಈಗ ನಮ್ಮಿಬ್ಬರಿಗಾದ ಸಂಭಾಷಣೆಯನ್ನು ಅವನು ಊರಲ್ಲೆಲ್ಲಾ ಲವಮಾತ್ರದಲ್ಲಿ ಪ್ರಕಟಪಡಿಸಿ ನಾಚಿಗೆಗೇಡು ಮಾಡಿಬಿಡುತಿದ್ದ ನಲ್ಲವೇ? ಇವನಂತಿರುವ ಚಾಕರನು ದೇವರ ದಯದಿಂದಲೇ ನಮಗೆ ದೊರಕಿ ದನು” ಎಂದು ಚಂಚಲನೇತ್ರರು ಹೇಳಿದರು. ಆಗ ವೆಂಕಟಪತಿಯು “ಸತ್ಯ ಸತ್ಯ ತ್ರಿವಾಚಾ” ಎಂದು ಉದ್ದಂಡ ನಮಸ್ಕಾರ ಮಾಡಿದನು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...