Home / ಕಥೆ / ಕಾದಂಬರಿ / ವಾಗೇವಿ – ೧

ವಾಗೇವಿ – ೧

“ಅವಳ್ಯಾರು ವಾಗ್ದೇವಿಯೇ? ಆಹಾ! ಸಾಕ್ಷಾತ್‌ ಅಜನರಾಣಿಯೇ ಸರಿ.”

“ಪರಾಕೆ! ಅಜನರಾಣಿಗಾದರೂ ನಾಸಿಕನಾಸ್ತಿ. ವಾಗ್ದೇವಿಗೆ ಆ ಅಂಗವು ಸಂಪೂರ್ಣತೆಯುಳ್ಳದ್ದಾಗಿದೆ ಆದಕಾರಣ ಬೊಮ್ಮನ ಪತ್ನಿಗಿಂತ ವಾಗ್ದೇವಿಯೇ ಹೆಚ್ಚು ರೂಪವತಿಯೆಂದು ನನ್ನ ಅಭಿಪ್ರಾಯ.”

“ಪೂರ್ವಾಶ್ರಮದಲ್ಲಿ ನಮ್ಮ ಆಣ್ಣಗೆ ಇವಳು ನಾದಿನಿ. ನಾವು ಸನ್ಯಾಸ ಪಡಕೊಂಡ ತರುವಾಯ ಅವಳನ್ನು ಇದು ಮೊದಲು ನೋಡಲಿಲ್ಲವು. ಇವಳ ರೂಪಲಾವಣ್ಯವನ್ನು ಈಗ ನೋಡಿದರೆ, ಷಡ್ವೈರಿಗಳನ್ನು ನಿಗ್ರಹಮಾಡಿದ ಯತಿಯಾದರೂ ಸೋಥೋಗನೇ?”

“ಪರಾಕೆ! ಸೃಷ್ಟಿಸ್ಥಿಲಯಕ್ಕೆ ಕಾರಣಭೂತರಾದ ಅಜ ಹರಿ ರುದ್ರ– ಇವರೇ ಒಬೊಬ್ಬರನ್ನು ಕಟ್ಟಿಕೊಂಡ ಮೇಲೆ, ಮಾನನ ಜನ್ಮದಲ್ಲಿ ಹುಟ್ಟಿ ದವನ ಪಾಡೇನು?”

ಈ ಸಂಭಾಷಣೆಯು ಕುಮುದಪುರದಲ್ಲಿ ಕಾಳಿಕಾ ನದಿಯ ತೀರದಲ್ಲಿ ಸ್ವಾನವನ್ನು ಗೈದು, ಶುಚಿರ್ಭೂತರಾಗಿರುತ್ತಿದ್ದ ಚಂಚಲನೇತ್ರ ಶ್ರೀಪಾದಂ ಗಳಿಗೂ ಅವರ ಅಚ್ಚುಮೆಚ್ಚಿನ ಪಾರುಪತ್ಯಗಾರ ವೆಂಕಟಪತಿಯಾಚಾರ್ಯಗೂ ನಡೆಯುತ್ತಲಿತ್ತು. ಪರಿಚಾರಕನಾದ ಹಯಗ್ರೀವಮಾಣಿಯು ಒಂದು ಶಬ್ದ ವಾದರೂ ಕಿವಿಗೆ ಕೇಳದವನಂತೆ ಅತ್ತಿತ್ತ ನೋಡುತ್ತಾ ನಿಂತುಕೊಂಡಿದ್ದನು. ಅವನನ್ನು ನೋಡಿ ವೆಂಕಟಪತಿಯು ಶ್ರೀಪಾದಂಗಳೊಡನೆ, “ಪರಾಕೆ! ಹುಟ್ಟು ಕಿವುಡನಾದ ಈ ಮಾಣಿಯ ಅವಸ್ಥೆಯು ನಿಜವಾಗಿ ಕನಿಕರಪಡಲಿಕ್ಕೆ ಯೋಗ್ಯವಾದ್ದೇ. ನಾವು ಏನೇನು ಮಾತಾಡಿವೆನೆಂದು ಅವನಿಗೆ ಸ್ವಲ್ಪವಾದರೂ ಗೊತ್ತಾಯಿತೇ? ಶ್ರೀಹರಿ! ನಿನ್ನ ಮಹಿಮೆಯು ಅಪಾರವಾದದ್ದು. ಇಷ್ಟು ಒಳ್ಳೇ ಹುಡುಗನಿಗೆ ಕರ್ಣದೋಷವನ್ನು ನೀನು ಕೊಟ್ಟ ದೆಸೆಯಿಂದ ಅವನ ಜನ್ಮವೇ ವ್ಯರ್ಧವಾಯಿತು” ಎಂದನು. “ಇಂಧಾ ಕುಂದು ಈ ಯೌವನ ನಸ್ಥನಿಗೆ ಇದ್ದಿಲ್ಲವಾದರೆ ಈಗ ನಮ್ಮಿಬ್ಬರಿಗಾದ ಸಂಭಾಷಣೆಯನ್ನು ಅವನು ಊರಲ್ಲೆಲ್ಲಾ ಲವಮಾತ್ರದಲ್ಲಿ ಪ್ರಕಟಪಡಿಸಿ ನಾಚಿಗೆಗೇಡು ಮಾಡಿಬಿಡುತಿದ್ದ ನಲ್ಲವೇ? ಇವನಂತಿರುವ ಚಾಕರನು ದೇವರ ದಯದಿಂದಲೇ ನಮಗೆ ದೊರಕಿ ದನು” ಎಂದು ಚಂಚಲನೇತ್ರರು ಹೇಳಿದರು. ಆಗ ವೆಂಕಟಪತಿಯು “ಸತ್ಯ ಸತ್ಯ ತ್ರಿವಾಚಾ” ಎಂದು ಉದ್ದಂಡ ನಮಸ್ಕಾರ ಮಾಡಿದನು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...