Home / ಕವನ / ಕವಿತೆ / ಆಡು ಕನ್ನಡ

ಆಡು ಕನ್ನಡ

ಆಡು ಕನ್ನಡ ಹಾಡು ಕನ್ನಡ
ಮಾತಾಡು ಕನ್ನಡವೇ

ಪಂಪನ ಪೆಂಪಿನ ಗೊಟ್ಟಿಯಲಂಪಿನ
ಮೃದು ಪದಬಂಧದ ಚಂದದ ಕನ್ನಡ
ಆದಿ ಕಾವ್ಯದಲೆ ಅನಾದಿ ಕಂಡ ಕನ್ನಡ
ಮಹಾ ಕನ್ನಡ

ರನ್ನನ ಜನ್ನನ ಪೊನ್ನನ ಹೊನ್ನಿನ
ರಾಘವ ಲಕ್ಷ್ಮೀಶ ಕುಮಾರವ್ಯಾಸರ
ಗಟ್ಟಿ ಕನ್ನಡ ಬಟ್ಟ ಕನ್ನಡ
ಅಚ್ಚಕನ್ನಡ ಮಿಶ್ರಕನ್ನಡ
ಆಳ ಕನ್ನಡ ವಿಶಾಲ ಕನ್ನಡ
ಆಲದಂತೆ ಊರ್ಧ್ವಮುಖಿ
ಅಧಃ ಶಾಖ
ಆಡು ಕನ್ನಡ

ಕಿಸುವೊಲ ಪೊಳಲ ಕನ್ನಡ
ಪುಲಿಗೆರೆಯ ತಿರುಳ ಕನ್ನಡ
ಬನವಾಸಿಯ ಕರುಳ ಕನ್ನಡ
ಕವಿಶೈಲದ ಡಿಂಡಿಮ ಕನ್ನಡ
ಸಾಧನ ಕೇರಿಯ ಭೇರಿ ಕನ್ನಡ
ಅಕ್ಕನ ಅಣ್ಣ ಕನ್ನಡ
ಕೂಡಲಸಂಗಮ ದೇವ ಕನ್ನಡ
ಶ್ರೀಗಂಧದ ಕಂಪು ಕನ್ನಡ

ಸಹ್ಯಾದ್ರಿಯ ತಂಪು ಕನ್ನಡ
ಹಂಪಿಯ ನೋಂಪಿಯ ಸಮಸ್ತ ಕನ್ನಡ

ಚಂಪು ಕನ್ನಡ ಷಟ್ಪದಿ ಕನ್ನಡ
ವಚನ ಕನ್ನಡ ಛಂದ ಕನ್ನಡ
ಬಂಧಮುಕ್ತ ಹೊಸ ಅಂದ ಕನ್ನಡ

ದೇಸಿ ಕನ್ನಡ ಮಾರ್ಗ ಕನ್ನಡ
ಆ ಕನ್ನಡ ಈ ಕನ್ನಡ ಓ ಕನ್ನಡ
ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಕನ್ನಡ

ಅರಿತ ಕನ್ನಡ ಮರೆತ ಕನ್ನಡ ನಿರತ ಕನ್ನಡ ಎಲ್ಲ ಕನ್ನಡ
ಆಡು ಕನ್ನಡ ಹಾಡು ಕನ್ನಡ
ಮಾತಾಡು ಕನ್ನಡವೇ

ಸುಖ ಕನ್ನಡ ಶುಭ ಕನ್ನಡ ಕ್ರಾಂತಿ ಕನ್ನಡ ಶಾಂತಿ ಕನ್ನಡ
ಆಡು ಕನ್ನಡ ಹಾಡು ಕನ್ನಡ
ಮಾತಾಡು ಕನ್ನಡವೇ

ಅಮಿತ ಕನ್ನಡ ಅಮೃತ ಕನ್ನಡ ಅನವರತ ಕನ್ನಡ
ಆಡು ಕನ್ನಡ ಹಾಡು ಕನ್ನಡ
ಮಾತಾಡು ಕನ್ನಡವೇ

ಮಾತಾಡು ಕನ್ನಡವೇ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...