Home / ಕವನ / ಕವಿತೆ / ತಂದೇ ಪಾಲಿಸೋ

ತಂದೇ ಪಾಲಿಸೋ

ತಂದೆ ಶ್ರೀ ವಿಶ್ವಕರ್ಮ ಪಾಲಿಸೊ | ವಂದೇ ಶ್ರೀಪರ ಬೊಮ್ಮ || ಪ ||

ಹರಿಹರ ನೀ ವಿಶ್ವಕರ್ಮಾ ವಿಶ್ವದ ಎಲ್ಲ ಧರ್ಮಗಳ ಮರ್ಮಾ || ಅ.ಪ. ||

ಸೃಷ್ಟಿಯ ಶಕ್ತಿಗೆ ಮೂಲಾ ವಿಧವಿಧ | ಸೃಷ್ಟಿಸ್ಥಿತಿ ಲಯ ಜಾಲಾ
ಆತ್ಮದ | ಅಗಣಿತ ರೂಪ ಸಲೀಲಾ
ಮಾನಸ ಲೋಕದ ಮತಿಯ ಮಂದಿರದಿ | ನೀನೇ ನೀನಾಗಿ ತುಂಬಿ
ಮೆರೆವಂಥ | ನಿರ್ಮಾಯ ನಿರಾವಲಂಬಿ || ೧ ||

ಹಂಸಾ ನಾಥಾ ಆದೀ ನಾಥಾ | ಚಿದಂಬರಾ ಜಿನದೇವಾ
ಜೈನರು | ನೆನೆಯುವ ನಿರ್ವಾಣ ಭಾವಾ
ಮಾರಾರಿ ಮಾಯಾರಿ ಶೂನ್ಯದಿ ಸಂಚಾರಿ | ಬುದ್ಧನ ಬುದ್ಧಿಗೆ ಹೊಳೆದೆ
ಮಿಂಚಂತೆ | ಇದ್ದವನಿದ್ದಲ್ಲೆ ಇಳಿದೆ || ೨ ||

ಇಹದಲ್ಲಿ ನಿನ್ನಯ ಪ್ರೇಮದ ಸಲಿಲವ | ಹರಿಸಿದ ಕ್ರೈಸ್ತನ ಪ್ರಭುವೆ
ಸಮತೆಯ ಲೋಕವ ತೆರೆದಂಥ ವಿಭುವೆ
ಗುಡ್ಡದ ಗವಿಯಲಿ ಪೈಗಂಬರನಿಗೆ | ಕಾಣಿಸಿ ಕಣ್ಣಾದ ಅಲ್ಲಾ
ಈಶ್ವರ | ಮುಸ್ಲಿಂ ಧರ್ಮದ ಬೆಲ್ಲಾ || ೩ ||

ರಾಮನ ಕೃಷ್ಣನ ಹತ್ತವತಾರದ | ವಿಷ್ಟು ನಾರಾಯಣ ವಂದೇ
ಸಂತರ | ಭಕ್ತರ ಪೊರೆಯುವ ತಂದೇ
ಶಿವಶಿವ ಹರಹರ ಶಂಭೋಶಂಕರ | ಗಿರಿಜಾಧವನೆಂದು ಕರೆವೆ
ಶೈವರ | ವಿಶ್ವೇಶ್ವರನೆಂಬ ವರವೇ || ೪ ||

ಆದಿಶಕ್ತಿ ಆದಿಮಾಯೆ ಸರ್ವೇಶ್ವರಿ | ಶಾಂಭವಿ ಪಾರ್ವತಿ ಲಕುಮೀ
ಶಾರದೆ | ದೇವಿಯ ರೂಪದ ಸ್ವಾಮಿ
ಸರ್ವಧರ್ಮ ಸಮಲೋಚನ ಸರ್ವೇಶ | ಸರ್ವಾಗಮ ವಂದ್ಯ ಬಂಧು
ದೇವನೆ | ದೇಶಕಾಲಾತೀತ ಸಿಂಧು || ೫ ||

ಸಕಲ ನಿಷ್ಕಲ ರೂಪ ಸಕಲ ಕಲಾಧೀಶ | ಸಕಲಾತ್ಮ ಪರಿಪೂರ್ಣಶಿಲ್ಪಿ
ವಿಶ್ವದ | ರಚನೆಯ ಮಾಡಿದ ಶಿಲ್ಪಿ
ವೇದಾಗಮಗಳೆ ಹೊಗಳಲರಿಯದ ನಿನ್ನ | ಬಣ್ಣಿಸ ಹೋಗುವ ಮರುಳ
ಅಲ್ಪನು | ಅರಿಯನು ನಿನ್ನಯ ತಿರುಳ || ೬ ||

ಬೈಬಲು ಭಗವದ್ ಗೀತೆ ಕುರಾನು | ಎಲ್ಲವು ಹಾಡಿದ ಗುರುವೆ
ಮನಗಳ | ಮಂದಿರಗಳಲೆಲ್ಲ ಇರುವೆ
ಸಣ್ಣ ದೇವರುಗಳು ನೂರಾರು ಇರುವಾಗ | ಸಣ್ಣದಾಯಿತು ಮನವು ತಂದೇ
ತೋರಿಸು | ಎಲ್ಲರ ದೇವರು ಒಂದೇ || ೭ ||

ವಿಶ್ವ ವಿಶ್ವಗಳನ್ನೆ ತುಂಬಿ ತೋರುವ ನಿನ್ನ| ವಿಶ್ವರೂಪವ ತೋರು ದೇವಾ
ಸೃಷ್ಟಿಯ ಪ್ರತಿರೂಪ ನಿನ್ನ ಪ್ರಭಾವ || ೮ ||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...