Home / ಕವನ / ಕವಿತೆ / ತಂದೇ ಪಾಲಿಸೋ

ತಂದೇ ಪಾಲಿಸೋ

ತಂದೆ ಶ್ರೀ ವಿಶ್ವಕರ್ಮ ಪಾಲಿಸೊ | ವಂದೇ ಶ್ರೀಪರ ಬೊಮ್ಮ || ಪ ||

ಹರಿಹರ ನೀ ವಿಶ್ವಕರ್ಮಾ ವಿಶ್ವದ ಎಲ್ಲ ಧರ್ಮಗಳ ಮರ್ಮಾ || ಅ.ಪ. ||

ಸೃಷ್ಟಿಯ ಶಕ್ತಿಗೆ ಮೂಲಾ ವಿಧವಿಧ | ಸೃಷ್ಟಿಸ್ಥಿತಿ ಲಯ ಜಾಲಾ
ಆತ್ಮದ | ಅಗಣಿತ ರೂಪ ಸಲೀಲಾ
ಮಾನಸ ಲೋಕದ ಮತಿಯ ಮಂದಿರದಿ | ನೀನೇ ನೀನಾಗಿ ತುಂಬಿ
ಮೆರೆವಂಥ | ನಿರ್ಮಾಯ ನಿರಾವಲಂಬಿ || ೧ ||

ಹಂಸಾ ನಾಥಾ ಆದೀ ನಾಥಾ | ಚಿದಂಬರಾ ಜಿನದೇವಾ
ಜೈನರು | ನೆನೆಯುವ ನಿರ್ವಾಣ ಭಾವಾ
ಮಾರಾರಿ ಮಾಯಾರಿ ಶೂನ್ಯದಿ ಸಂಚಾರಿ | ಬುದ್ಧನ ಬುದ್ಧಿಗೆ ಹೊಳೆದೆ
ಮಿಂಚಂತೆ | ಇದ್ದವನಿದ್ದಲ್ಲೆ ಇಳಿದೆ || ೨ ||

ಇಹದಲ್ಲಿ ನಿನ್ನಯ ಪ್ರೇಮದ ಸಲಿಲವ | ಹರಿಸಿದ ಕ್ರೈಸ್ತನ ಪ್ರಭುವೆ
ಸಮತೆಯ ಲೋಕವ ತೆರೆದಂಥ ವಿಭುವೆ
ಗುಡ್ಡದ ಗವಿಯಲಿ ಪೈಗಂಬರನಿಗೆ | ಕಾಣಿಸಿ ಕಣ್ಣಾದ ಅಲ್ಲಾ
ಈಶ್ವರ | ಮುಸ್ಲಿಂ ಧರ್ಮದ ಬೆಲ್ಲಾ || ೩ ||

ರಾಮನ ಕೃಷ್ಣನ ಹತ್ತವತಾರದ | ವಿಷ್ಟು ನಾರಾಯಣ ವಂದೇ
ಸಂತರ | ಭಕ್ತರ ಪೊರೆಯುವ ತಂದೇ
ಶಿವಶಿವ ಹರಹರ ಶಂಭೋಶಂಕರ | ಗಿರಿಜಾಧವನೆಂದು ಕರೆವೆ
ಶೈವರ | ವಿಶ್ವೇಶ್ವರನೆಂಬ ವರವೇ || ೪ ||

ಆದಿಶಕ್ತಿ ಆದಿಮಾಯೆ ಸರ್ವೇಶ್ವರಿ | ಶಾಂಭವಿ ಪಾರ್ವತಿ ಲಕುಮೀ
ಶಾರದೆ | ದೇವಿಯ ರೂಪದ ಸ್ವಾಮಿ
ಸರ್ವಧರ್ಮ ಸಮಲೋಚನ ಸರ್ವೇಶ | ಸರ್ವಾಗಮ ವಂದ್ಯ ಬಂಧು
ದೇವನೆ | ದೇಶಕಾಲಾತೀತ ಸಿಂಧು || ೫ ||

ಸಕಲ ನಿಷ್ಕಲ ರೂಪ ಸಕಲ ಕಲಾಧೀಶ | ಸಕಲಾತ್ಮ ಪರಿಪೂರ್ಣಶಿಲ್ಪಿ
ವಿಶ್ವದ | ರಚನೆಯ ಮಾಡಿದ ಶಿಲ್ಪಿ
ವೇದಾಗಮಗಳೆ ಹೊಗಳಲರಿಯದ ನಿನ್ನ | ಬಣ್ಣಿಸ ಹೋಗುವ ಮರುಳ
ಅಲ್ಪನು | ಅರಿಯನು ನಿನ್ನಯ ತಿರುಳ || ೬ ||

ಬೈಬಲು ಭಗವದ್ ಗೀತೆ ಕುರಾನು | ಎಲ್ಲವು ಹಾಡಿದ ಗುರುವೆ
ಮನಗಳ | ಮಂದಿರಗಳಲೆಲ್ಲ ಇರುವೆ
ಸಣ್ಣ ದೇವರುಗಳು ನೂರಾರು ಇರುವಾಗ | ಸಣ್ಣದಾಯಿತು ಮನವು ತಂದೇ
ತೋರಿಸು | ಎಲ್ಲರ ದೇವರು ಒಂದೇ || ೭ ||

ವಿಶ್ವ ವಿಶ್ವಗಳನ್ನೆ ತುಂಬಿ ತೋರುವ ನಿನ್ನ| ವಿಶ್ವರೂಪವ ತೋರು ದೇವಾ
ಸೃಷ್ಟಿಯ ಪ್ರತಿರೂಪ ನಿನ್ನ ಪ್ರಭಾವ || ೮ ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...