ತಂದೇ ಪಾಲಿಸೋ

ತಂದೆ ಶ್ರೀ ವಿಶ್ವಕರ್ಮ ಪಾಲಿಸೊ | ವಂದೇ ಶ್ರೀಪರ ಬೊಮ್ಮ || ಪ ||

ಹರಿಹರ ನೀ ವಿಶ್ವಕರ್ಮಾ ವಿಶ್ವದ ಎಲ್ಲ ಧರ್ಮಗಳ ಮರ್ಮಾ || ಅ.ಪ. ||

ಸೃಷ್ಟಿಯ ಶಕ್ತಿಗೆ ಮೂಲಾ ವಿಧವಿಧ | ಸೃಷ್ಟಿಸ್ಥಿತಿ ಲಯ ಜಾಲಾ
ಆತ್ಮದ | ಅಗಣಿತ ರೂಪ ಸಲೀಲಾ
ಮಾನಸ ಲೋಕದ ಮತಿಯ ಮಂದಿರದಿ | ನೀನೇ ನೀನಾಗಿ ತುಂಬಿ
ಮೆರೆವಂಥ | ನಿರ್ಮಾಯ ನಿರಾವಲಂಬಿ || ೧ ||

ಹಂಸಾ ನಾಥಾ ಆದೀ ನಾಥಾ | ಚಿದಂಬರಾ ಜಿನದೇವಾ
ಜೈನರು | ನೆನೆಯುವ ನಿರ್ವಾಣ ಭಾವಾ
ಮಾರಾರಿ ಮಾಯಾರಿ ಶೂನ್ಯದಿ ಸಂಚಾರಿ | ಬುದ್ಧನ ಬುದ್ಧಿಗೆ ಹೊಳೆದೆ
ಮಿಂಚಂತೆ | ಇದ್ದವನಿದ್ದಲ್ಲೆ ಇಳಿದೆ || ೨ ||

ಇಹದಲ್ಲಿ ನಿನ್ನಯ ಪ್ರೇಮದ ಸಲಿಲವ | ಹರಿಸಿದ ಕ್ರೈಸ್ತನ ಪ್ರಭುವೆ
ಸಮತೆಯ ಲೋಕವ ತೆರೆದಂಥ ವಿಭುವೆ
ಗುಡ್ಡದ ಗವಿಯಲಿ ಪೈಗಂಬರನಿಗೆ | ಕಾಣಿಸಿ ಕಣ್ಣಾದ ಅಲ್ಲಾ
ಈಶ್ವರ | ಮುಸ್ಲಿಂ ಧರ್ಮದ ಬೆಲ್ಲಾ || ೩ ||

ರಾಮನ ಕೃಷ್ಣನ ಹತ್ತವತಾರದ | ವಿಷ್ಟು ನಾರಾಯಣ ವಂದೇ
ಸಂತರ | ಭಕ್ತರ ಪೊರೆಯುವ ತಂದೇ
ಶಿವಶಿವ ಹರಹರ ಶಂಭೋಶಂಕರ | ಗಿರಿಜಾಧವನೆಂದು ಕರೆವೆ
ಶೈವರ | ವಿಶ್ವೇಶ್ವರನೆಂಬ ವರವೇ || ೪ ||

ಆದಿಶಕ್ತಿ ಆದಿಮಾಯೆ ಸರ್ವೇಶ್ವರಿ | ಶಾಂಭವಿ ಪಾರ್ವತಿ ಲಕುಮೀ
ಶಾರದೆ | ದೇವಿಯ ರೂಪದ ಸ್ವಾಮಿ
ಸರ್ವಧರ್ಮ ಸಮಲೋಚನ ಸರ್ವೇಶ | ಸರ್ವಾಗಮ ವಂದ್ಯ ಬಂಧು
ದೇವನೆ | ದೇಶಕಾಲಾತೀತ ಸಿಂಧು || ೫ ||

ಸಕಲ ನಿಷ್ಕಲ ರೂಪ ಸಕಲ ಕಲಾಧೀಶ | ಸಕಲಾತ್ಮ ಪರಿಪೂರ್ಣಶಿಲ್ಪಿ
ವಿಶ್ವದ | ರಚನೆಯ ಮಾಡಿದ ಶಿಲ್ಪಿ
ವೇದಾಗಮಗಳೆ ಹೊಗಳಲರಿಯದ ನಿನ್ನ | ಬಣ್ಣಿಸ ಹೋಗುವ ಮರುಳ
ಅಲ್ಪನು | ಅರಿಯನು ನಿನ್ನಯ ತಿರುಳ || ೬ ||

ಬೈಬಲು ಭಗವದ್ ಗೀತೆ ಕುರಾನು | ಎಲ್ಲವು ಹಾಡಿದ ಗುರುವೆ
ಮನಗಳ | ಮಂದಿರಗಳಲೆಲ್ಲ ಇರುವೆ
ಸಣ್ಣ ದೇವರುಗಳು ನೂರಾರು ಇರುವಾಗ | ಸಣ್ಣದಾಯಿತು ಮನವು ತಂದೇ
ತೋರಿಸು | ಎಲ್ಲರ ದೇವರು ಒಂದೇ || ೭ ||

ವಿಶ್ವ ವಿಶ್ವಗಳನ್ನೆ ತುಂಬಿ ತೋರುವ ನಿನ್ನ| ವಿಶ್ವರೂಪವ ತೋರು ದೇವಾ
ಸೃಷ್ಟಿಯ ಪ್ರತಿರೂಪ ನಿನ್ನ ಪ್ರಭಾವ || ೮ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಡು ಕನ್ನಡ
Next post ಜೈ MONEY ಭಾರತ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…