ದ್ರೋಣ ಕೆನ್ನೆಗೆ ಕೈಹೊತ್ತು ಕುಳಿತ
ದೇವತೆಗಳು ಬಂದು ಕರೆದರೂ
ದೇವ ಸಭೆಯಲ್ಲಿ ತನ್ನ
ಕರ್ಮ ವಿಮರ್ಶೆಯಾಗಲಿದೆ ಎಂದು
ಹೊಳೆದರೂ, ಕಡಿಮೆಯಾಗಲಿಲ್ಲ
ಯೋಚನೆಗಳ ಏರಿಳಿತ
ಕೃಷ್ಣ ಬಂದಿದ್ದಾಗ ಮಣಿದು, ಕೈ ಮುಗಿದು
‘ನಿನ್ನ ಸಖರೈವರನು ನೋಯಿಸಿ’ನೆಂದು
ಮನದಲ್ಲಿ ಮಾಡಿದ್ದ ದೃಢ
ಉಪಕೃತಿಯಾಗಿ ಇಲ್ಲಿ ಬರಿಸಿದೆ
ಸ್ವರ್ಗ ಪದವಿಯ ಭಾಗ್ಯ ತರಿಸಿದೆ
ಒಂದಲ್ಲ, ಹಲವು ಸಲ
ನೊಂದು ಕುಲಜಾತಿಗಳ ಮಾತೆತ್ತಿ
ವೀರನನು ಒಡೆಯನ ಸ್ನೇಹಿಯನು ದಾನಶೂರನನು
ನೋಯಿಸಿದ, ಘಾಸಿಗೊಳಿಸಿದ ಛಲ,
ದಲಿತ, ಬಡಪಾಯಿ, ಕಲಿಸದೆಯೆ
ಕಲಿತ ವಿದ್ಯೆಯನ್ನು ಬೇಡಿ
ಕಸಿದುಕೊಂಡ ಖಳ, ನಾನು –
ಮಗನ ಮೋಹವೆ ಮುಂದು
ಪತಿಯವಸರ ಹಿಂದು, ಹಿಂದಾಗಿ
ಹೋರುವುದ ಮರೆತು
ತೊರೆದ ಹರಣಕೆ ಇಂದು ಮಾನ – ಸನ್ಮಾನ
ಇದು ಅವಮಾನ!
ಅರ್ಹನಲ್ಲ ನಾನಿದಕೆ
ನನ್ನ ಓಝತ್ವಕ್ಕಿಲ್ಲ ಸಾತ್ವಿಕೆ
ಭೇದಭಾವದ ಶಿಕ್ಷಣವ ಒರೆದಾತ
ತನ್ನ ಬಡತನದ ಸಿಟ್ಟಿನಲ್ಲಿ ಹುಟ್ಟಿದ
ಮಾನಹಾನಿಯ ಸೇಡಿಗೆ ಬಲಿಕೊಟ್ಟ
ಬಂಧುಗಳೆ ಬಡಿದಾಡಿ
ಒಂದು ಕುಲದ, ಒಂದು ಬಲದ
ಒಂದು ತತ್ವದ ಕೊಲೆಗೆ
ಹೇತುವಾದಾತ ಒಲ್ಲ
ಸಗ್ಗಸುಖ ನನಗೆ ಸಲ್ಲ.
*****
Related Post
ಸಣ್ಣ ಕತೆ
-
ವಲಯ
ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…
-
ಮಿಂಚಿನ ದೀಪ
ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…
-
ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ
ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್ಗೆ ಕಾಲ್ಚೆಂಡು ಆಟ… Read more…
-
ಜಡ
ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…
-
ಕರೀಮನ ಪಿಟೀಲು
ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…