ಸ್ವಗತ

ದ್ರೋಣ ಕೆನ್ನೆಗೆ ಕೈಹೊತ್ತು ಕುಳಿತ
ದೇವತೆಗಳು ಬಂದು ಕರೆದರೂ
ದೇವ ಸಭೆಯಲ್ಲಿ ತನ್ನ
ಕರ್ಮ ವಿಮರ್ಶೆಯಾಗಲಿದೆ ಎಂದು
ಹೊಳೆದರೂ, ಕಡಿಮೆಯಾಗಲಿಲ್ಲ
ಯೋಚನೆಗಳ ಏರಿಳಿತ
ಕೃಷ್ಣ ಬಂದಿದ್ದಾಗ ಮಣಿದು, ಕೈ ಮುಗಿದು
‘ನಿನ್ನ ಸಖರೈವರನು ನೋಯಿಸಿ’ನೆಂದು
ಮನದಲ್ಲಿ ಮಾಡಿದ್ದ ದೃಢ
ಉಪಕೃತಿಯಾಗಿ ಇಲ್ಲಿ ಬರಿಸಿದೆ
ಸ್ವರ್ಗ ಪದವಿಯ ಭಾಗ್ಯ ತರಿಸಿದೆ
ಒಂದಲ್ಲ, ಹಲವು ಸಲ
ನೊಂದು ಕುಲಜಾತಿಗಳ ಮಾತೆತ್ತಿ
ವೀರನನು ಒಡೆಯನ ಸ್ನೇಹಿಯನು ದಾನಶೂರನನು
ನೋಯಿಸಿದ, ಘಾಸಿಗೊಳಿಸಿದ ಛಲ,
ದಲಿತ, ಬಡಪಾಯಿ, ಕಲಿಸದೆಯೆ
ಕಲಿತ ವಿದ್ಯೆಯನ್ನು ಬೇಡಿ
ಕಸಿದುಕೊಂಡ ಖಳ, ನಾನು –
ಮಗನ ಮೋಹವೆ ಮುಂದು
ಪತಿಯವಸರ ಹಿಂದು, ಹಿಂದಾಗಿ
ಹೋರುವುದ ಮರೆತು
ತೊರೆದ ಹರಣಕೆ ಇಂದು ಮಾನ – ಸನ್ಮಾನ
ಇದು ಅವಮಾನ!
ಅರ್ಹನಲ್ಲ ನಾನಿದಕೆ
ನನ್ನ ಓಝತ್ವಕ್ಕಿಲ್ಲ ಸಾತ್ವಿಕೆ
ಭೇದಭಾವದ ಶಿಕ್ಷಣವ ಒರೆದಾತ
ತನ್ನ ಬಡತನದ ಸಿಟ್ಟಿನಲ್ಲಿ ಹುಟ್ಟಿದ
ಮಾನಹಾನಿಯ ಸೇಡಿಗೆ ಬಲಿಕೊಟ್ಟ
ಬಂಧುಗಳೆ ಬಡಿದಾಡಿ
ಒಂದು ಕುಲದ, ಒಂದು ಬಲದ
ಒಂದು ತತ್ವದ ಕೊಲೆಗೆ
ಹೇತುವಾದಾತ ಒಲ್ಲ
ಸಗ್ಗಸುಖ ನನಗೆ ಸಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀ ನಗಲೇನು ಮನವೆ
Next post ಗಸ್ತು ಪಹರೆಯೊಳಿನ್ನೆಷ್ಟು ದಿನ ಜೀವನವೋ?

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…