ದ್ರೋಣ ಕೆನ್ನೆಗೆ ಕೈಹೊತ್ತು ಕುಳಿತ
ದೇವತೆಗಳು ಬಂದು ಕರೆದರೂ
ದೇವ ಸಭೆಯಲ್ಲಿ ತನ್ನ
ಕರ್ಮ ವಿಮರ್ಶೆಯಾಗಲಿದೆ ಎಂದು
ಹೊಳೆದರೂ, ಕಡಿಮೆಯಾಗಲಿಲ್ಲ
ಯೋಚನೆಗಳ ಏರಿಳಿತ
ಕೃಷ್ಣ ಬಂದಿದ್ದಾಗ ಮಣಿದು, ಕೈ ಮುಗಿದು
‘ನಿನ್ನ ಸಖರೈವರನು ನೋಯಿಸಿ’ನೆಂದು
ಮನದಲ್ಲಿ ಮಾಡಿದ್ದ ದೃಢ
ಉಪಕೃತಿಯಾಗಿ ಇಲ್ಲಿ ಬರಿಸಿದೆ
ಸ್ವರ್ಗ ಪದವಿಯ ಭಾಗ್ಯ ತರಿಸಿದೆ
ಒಂದಲ್ಲ, ಹಲವು ಸಲ
ನೊಂದು ಕುಲಜಾತಿಗಳ ಮಾತೆತ್ತಿ
ವೀರನನು ಒಡೆಯನ ಸ್ನೇಹಿಯನು ದಾನಶೂರನನು
ನೋಯಿಸಿದ, ಘಾಸಿಗೊಳಿಸಿದ ಛಲ,
ದಲಿತ, ಬಡಪಾಯಿ, ಕಲಿಸದೆಯೆ
ಕಲಿತ ವಿದ್ಯೆಯನ್ನು ಬೇಡಿ
ಕಸಿದುಕೊಂಡ ಖಳ, ನಾನು –
ಮಗನ ಮೋಹವೆ ಮುಂದು
ಪತಿಯವಸರ ಹಿಂದು, ಹಿಂದಾಗಿ
ಹೋರುವುದ ಮರೆತು
ತೊರೆದ ಹರಣಕೆ ಇಂದು ಮಾನ – ಸನ್ಮಾನ
ಇದು ಅವಮಾನ!
ಅರ್ಹನಲ್ಲ ನಾನಿದಕೆ
ನನ್ನ ಓಝತ್ವಕ್ಕಿಲ್ಲ ಸಾತ್ವಿಕೆ
ಭೇದಭಾವದ ಶಿಕ್ಷಣವ ಒರೆದಾತ
ತನ್ನ ಬಡತನದ ಸಿಟ್ಟಿನಲ್ಲಿ ಹುಟ್ಟಿದ
ಮಾನಹಾನಿಯ ಸೇಡಿಗೆ ಬಲಿಕೊಟ್ಟ
ಬಂಧುಗಳೆ ಬಡಿದಾಡಿ
ಒಂದು ಕುಲದ, ಒಂದು ಬಲದ
ಒಂದು ತತ್ವದ ಕೊಲೆಗೆ
ಹೇತುವಾದಾತ ಒಲ್ಲ
ಸಗ್ಗಸುಖ ನನಗೆ ಸಲ್ಲ.
*****
Related Post
ಸಣ್ಣ ಕತೆ
-
ಮಂಜುಳ ಗಾನ
ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…
-
ದೇವರು
ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…
-
ಸ್ವಯಂಪ್ರಕಾಶ
ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…
-
ಪ್ರಕೃತಿಬಲ
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…
-
ಮುದುಕನ ಮದುವೆ
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…