ಭರತವಾಕ್ಯ

ಹೊಸತೆ ಇರಲಿ, ಹಳತೆ ಇರಲಿ,
ಒಳಿತು ಯಾವುದೊ, ಬಾಳ್ಗೆ ಬರಲಿ!
ಮೂಡಲೇನು, ಪಡುವಲೇನು?
ಬೆಳಕ ಬದುಕಿಗೆ ಹೂಡಿ ತರಲಿ !
ಹಳ್ಳ-ತಿಟ್ಟು ಸರಿಯಲಿ-
ಒಳ್ಳೆ ದಾರಿ ಸಮೆಯಲಿ! ೧

ಸೃಷ್ಟಿ ದೇವಿ ಕೊಟ್ಟ ಪಯಿರ
ಒಟ್ಟು ಗೂಡುತಲೆಲ್ಲರೊಕ್ಕಲಿ!
ಕೊಟ್ಟುಕೊಂಡು ಎಲ್ಲರುಂಡು
ಹೊಟ್ಟೆಯುರಿಯನು ತಿಕ್ಕಿ ಮುಕ್ಕಲಿ!
ದುಡಿದು ಒಡಲು ಸೊಕ್ಕಲಿ-
ಅಲಸಿಕೆಯದು ಬಿಕ್ಕಲಿ! ೨

ಇದ್ದ ಜನರ ಕೊಡುವ ಕೈಯಿ
ಇಲ್ಲದವರನು ಬಳಿಗೆ ಕರೆಯಲಿ!
ಬಿದ್ದ ಜನರು ಮೇಲಕೆದ್ದು
ಮುಂದೆ ಇದ್ದವರನ್ನು ಬೆರೆಯಲಿ!
ಶ್ರದ್ಧೆ ಸ್ನೇಹ ಮರೆಯಲಿ-
ಇಗ್ಗು ನೆಲವ ಹೊರೆಯಲಿ! ೩

ದನಿಯನೆತ್ತಿ ಕೊಳಲು ವೀಣೆ
ಇನಿದು ಗಾನವ ಬಿಡದ ಮಾಡಲಿ!
ಜನರು ಜಗಳ-ವಾದವುಳಿದು
ಸರಸ ಕವನವ ಸತತ ಹಾಡಲಿ !
ಧರೆಯೆ ಸ್ವರ್‍ಗವಾಗಲಿ-
ನರರೆ ಅಮರರಾಗಲಿ! ೪
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪರಾಧದ ಒಂದು ಮುಖವಾಗಬಲ್ಲ – ವೈವಾಹಿಕ ಅತ್ಯಾಚಾರ
Next post ತ್ಯಾವಣನಾಯಕ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys