Home / ಕವನ / ಕವಿತೆ / ತ್ಯಾವಣನಾಯಕ

ತ್ಯಾವಣನಾಯಕ

(೧)

ಇದೊ! ನನ್ನ ಸ್ಮತಿಪಧದಿ ಎಸದನೀ ನಾಯಕನ
ಹಾಳುಹಂಪೆಯಲಿರುವ ಮೂಲಗುಂಪೆಯನೊಂದ
ಶೋಧಿಸುತ ನಡೆದಿರಲು ಹಾಳು ದೇಗುಲವೊಂದ
ಕಂಡೆ ಜನರಗಿಯುತಿಹುದನು ಅವರ ಕಾಯಕವ-
ನೀಕ್ಷಿಸುತ ನಿಂತಿರಲು ಗುಡಿಯ ಕಲ್ಲಂಬದಡಿ-
ಗಿರುವ ಗುಹೆಯೊಂದರಲಿ ಓರ್‍ವ ವ್ಯಕ್ತಿಯ ಕಂಡೆ,
ಸುತ್ತುವರಿದಿರೆ ಜನರ ಸಂದಣಿಯು, ಏನೆಂಬೆ!
ಅಂಕುರಿಸಿತೆನ್ನೆದೆಯೊಳನುರಾಗದೊಂದು ಮಿಡಿ

ಆಗ ಬಂದಿತು ಮುಂದೆ ವ್ಯಕ್ತಿ ಮತ್ತೆಂದಿತದು!
ಮೂರು ಶತಮಾನದಾಚೆಗೆ ಜೀವಿಸಿದ ಬೊಂಬೆ-
ಯೆನಬೇಡಿ! ಮಾನಿಸನೆ ನಾನಿಹೆನು ಕಂದಿತದು
ವಿಜಯನಗರದ ವೆಂಪು ಆ ಬನಸಿರಿಯ ರೆಂಬೆ
ನಾನೊರ್‍ವನುಳಿದಿಹೆನು, ಅದರ ಸಂದೇಶವನು
ತಂದು ಮುಟ್ಟಿಸಲೆಂದು ನಿಮ್ಮ ಹೃದ್ದೇಶವನು!

(೨)

ತಾಳಿಕೋಟೆಯ ರಣದಿ ಕಣಕಣವು ಸಹ ಹೋಗಿ
ಸಾಮ್ರಾಜ್ಯವಳಿದಿರುವ ಪರಿಯ ನಾ ಧೇನಿಸಿದೆ
ನರಪತಿಯನುಳಿಸಲೆಂದತಿಯಾಗಿ ಹವಣಿಸಿದೆ
ಮಾಡಲೇನಹುದಿನ್ನು, ಕಾಲಬಂದಿರೆ ಮಾಗಿ
ಅಸಹಾಯನಾಗಿರಲು ಇಂಥ ವೇದನೆ ತಾಗಿ
ರಾಜಧಾನಿಗೆ ಮರಳಿ ಕ್ಲೇಶವನು ಗಮನಿನದ
ರಾಣಿವಾಸವನುಳುಹಿ ಕ್ಲೇಶವನು ಸಮನಿಸಿದೆ.
ಅಂದಿನಿಂದಿನ್ನುವರಗಿರುವೆ ನಾ ಬೈರಾಗಿ!

ವಿಜಯನಗರದಿ ಮೂರು ದಿನವು ನಡದಿಹ ಕೊಲೆಯ
ನೋಡಲೆಂದವಿತು ಕುಳಿತಿದ್ದೆ ನೆಲಮನೆಯೊಳಕೆ!
ಅಂತ ನಿಮ್ಮನು ನಾನು ಕಾಂಬುದಕೆ ಕಾರಣನು!
ಅದಕಂತೆ ಕಾಯ್ದು ಕೊಂಡಿದ್ದೆ ನನ್ನಯ ತಲೆಯ.
ಇನಿತು ದಿನವಿರಲಿಲ್ಲವೆನಗೆ ಜನತೆಯ ಬಳಕೆ!
ಇಂದು ನಿಂತಿಹೆ ಬಂದು ನಿಮ್ಮೆದುರು,-ತ್ಯಾವಣನು!

(೩)

ಅಡಗಿದೆನು ಮೂರು ದಿನವೀ ಗುಹಾಭಾಗದಲಿ,
ತುಂಗಭದ್ರೆಯು ಹರಿದು ರಕ್ತಾನುರಕ್ತೆಯಿರ,
ಯವನನೇನೆಗೆ ಯಮನ ಸೇವೆಯಾಸಕ್ತಿಯಿರ
ಬಾಳಿದೆನು ಬಲು ಬಳಲಿ ನಾ ಭೀತಿರೋಗದಲಿ
ಆ ಮೇಲೆ ಬಂದು ಸುತ್ತೆಲ್ಲ ದಿಟ್ಟಿಯ ಚೆಲ್ಲೆ
ಸೂರ್‍ಯಾಸ್ತವಾಗಿತ್ತು ವರರಾಜ ಹಸ್ತವದು
ರಾಜ್ಯರಮೆಗಿಹ ದುಕೂಲವ ಸೆಳೆಯೆ, ಗ್ರಸ್ತವದು
ಅಭಿಮಾನಧನವೆಂದು ಒರಲಿದಳು ಆ ನಲ್ಲೆ!

ವಿಜಯನಗರವದಂದು ಅಪಜಯನಗರವಾಗಿ
ಸುಖಕಿರುವ ನೆಲೆವೀಡು ದುಃಖದಾಗರವಾಗಿ
ಕೆನ್ನೀರು ಕಣ್ಣೀರು ನಿಲಲು ಸಾಗರವಾಗಿ,
ಮನದಿ ಮಲ್ಲಳಿಗೊಂಡೆ: ಎಲೆ! ಸ್ಮಶಾನವಿದೇನು?
ಕನ್ನಡದ ಮೈಸಿರಿಯು ಬತ್ತಲಾಗಿಹುದೇನು?
ಕೊನೆವರೆಗು ನಮ್ಮ ನಾಡಿನಲ್ಲಿ ದುರ್‍ಗತಿಯೇನು?

(೪)

ಇಂತಲ್ಲ ಹೊಸತೊಂದು ಸ್ಫೂರ್ತಿಯದು ಜನಿಸುವದು
ನಾಡಿನೊಳು, ಹೊಸತೊಂದು ಸಾಮ್ರಾಜ್ಯವೇಳುವದು
ಕನ್ನಡಕೆ ಹೃದಯವಿರುವನಕ ನೆರೆ ಬಾಳುವದು
ನಾಡ ಹಸುಮಕ್ಕಳಿಗೆ ಇದು ಕಾರ್‍ಯವೆನಿಸುವದು
ನಾಡಿನವರೆದೆಯಲ್ಲಿ ಹೊನ್ನಕ್ಕರದಿ ಬರದು
ಬಾಳುವರು ಕಬ್ಬಿಗರು, ತಮ್ಮ ಸಾಹಸಗಳನು
ಅವರ ಸುಖ ದುಃಖವನು, ಉಮ್ಮಳುಲ್ಲಸಗಳನು
ನೆನೆಯುವರು ನೆರೆನಾಡಿನವರು ತಮ್ಮನು ಮರೆದು

ಅದಕಂತ ಕರುನಾಡ ತುಂಬೆಲ್ಲ ಸಂಚರಿಸುವೆನು
ಹಿಂದಿನವರೆಸಕ ತಣಿಸದಿಹ ಬೆಂತರದಂತೆ
ಇಂದಿನವರನು ಕನಸಿನಲಿ ಹೋಗಿ ಹರಸುವನು
ಅವರೆದೆಯು ಪುಟಿಯುವದ ನೋಡಿ ತುಂತುರದಂತೆ
ಹಿಂದಿನಿರವನು ನೆನೆದು ಮುಂದಿಹುದ ಸ್ಮರಿಸುವೆನು
ಕಂಡುಬರುತಿಹುದೊಂದು ಯುಗ-ಯುಗಾಂತರದಂತೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...