Home / ಕವನ / ಕವಿತೆ / ತ್ಯಾವಣನಾಯಕ

ತ್ಯಾವಣನಾಯಕ

(೧)

ಇದೊ! ನನ್ನ ಸ್ಮತಿಪಧದಿ ಎಸದನೀ ನಾಯಕನ
ಹಾಳುಹಂಪೆಯಲಿರುವ ಮೂಲಗುಂಪೆಯನೊಂದ
ಶೋಧಿಸುತ ನಡೆದಿರಲು ಹಾಳು ದೇಗುಲವೊಂದ
ಕಂಡೆ ಜನರಗಿಯುತಿಹುದನು ಅವರ ಕಾಯಕವ-
ನೀಕ್ಷಿಸುತ ನಿಂತಿರಲು ಗುಡಿಯ ಕಲ್ಲಂಬದಡಿ-
ಗಿರುವ ಗುಹೆಯೊಂದರಲಿ ಓರ್‍ವ ವ್ಯಕ್ತಿಯ ಕಂಡೆ,
ಸುತ್ತುವರಿದಿರೆ ಜನರ ಸಂದಣಿಯು, ಏನೆಂಬೆ!
ಅಂಕುರಿಸಿತೆನ್ನೆದೆಯೊಳನುರಾಗದೊಂದು ಮಿಡಿ

ಆಗ ಬಂದಿತು ಮುಂದೆ ವ್ಯಕ್ತಿ ಮತ್ತೆಂದಿತದು!
ಮೂರು ಶತಮಾನದಾಚೆಗೆ ಜೀವಿಸಿದ ಬೊಂಬೆ-
ಯೆನಬೇಡಿ! ಮಾನಿಸನೆ ನಾನಿಹೆನು ಕಂದಿತದು
ವಿಜಯನಗರದ ವೆಂಪು ಆ ಬನಸಿರಿಯ ರೆಂಬೆ
ನಾನೊರ್‍ವನುಳಿದಿಹೆನು, ಅದರ ಸಂದೇಶವನು
ತಂದು ಮುಟ್ಟಿಸಲೆಂದು ನಿಮ್ಮ ಹೃದ್ದೇಶವನು!

(೨)

ತಾಳಿಕೋಟೆಯ ರಣದಿ ಕಣಕಣವು ಸಹ ಹೋಗಿ
ಸಾಮ್ರಾಜ್ಯವಳಿದಿರುವ ಪರಿಯ ನಾ ಧೇನಿಸಿದೆ
ನರಪತಿಯನುಳಿಸಲೆಂದತಿಯಾಗಿ ಹವಣಿಸಿದೆ
ಮಾಡಲೇನಹುದಿನ್ನು, ಕಾಲಬಂದಿರೆ ಮಾಗಿ
ಅಸಹಾಯನಾಗಿರಲು ಇಂಥ ವೇದನೆ ತಾಗಿ
ರಾಜಧಾನಿಗೆ ಮರಳಿ ಕ್ಲೇಶವನು ಗಮನಿನದ
ರಾಣಿವಾಸವನುಳುಹಿ ಕ್ಲೇಶವನು ಸಮನಿಸಿದೆ.
ಅಂದಿನಿಂದಿನ್ನುವರಗಿರುವೆ ನಾ ಬೈರಾಗಿ!

ವಿಜಯನಗರದಿ ಮೂರು ದಿನವು ನಡದಿಹ ಕೊಲೆಯ
ನೋಡಲೆಂದವಿತು ಕುಳಿತಿದ್ದೆ ನೆಲಮನೆಯೊಳಕೆ!
ಅಂತ ನಿಮ್ಮನು ನಾನು ಕಾಂಬುದಕೆ ಕಾರಣನು!
ಅದಕಂತೆ ಕಾಯ್ದು ಕೊಂಡಿದ್ದೆ ನನ್ನಯ ತಲೆಯ.
ಇನಿತು ದಿನವಿರಲಿಲ್ಲವೆನಗೆ ಜನತೆಯ ಬಳಕೆ!
ಇಂದು ನಿಂತಿಹೆ ಬಂದು ನಿಮ್ಮೆದುರು,-ತ್ಯಾವಣನು!

(೩)

ಅಡಗಿದೆನು ಮೂರು ದಿನವೀ ಗುಹಾಭಾಗದಲಿ,
ತುಂಗಭದ್ರೆಯು ಹರಿದು ರಕ್ತಾನುರಕ್ತೆಯಿರ,
ಯವನನೇನೆಗೆ ಯಮನ ಸೇವೆಯಾಸಕ್ತಿಯಿರ
ಬಾಳಿದೆನು ಬಲು ಬಳಲಿ ನಾ ಭೀತಿರೋಗದಲಿ
ಆ ಮೇಲೆ ಬಂದು ಸುತ್ತೆಲ್ಲ ದಿಟ್ಟಿಯ ಚೆಲ್ಲೆ
ಸೂರ್‍ಯಾಸ್ತವಾಗಿತ್ತು ವರರಾಜ ಹಸ್ತವದು
ರಾಜ್ಯರಮೆಗಿಹ ದುಕೂಲವ ಸೆಳೆಯೆ, ಗ್ರಸ್ತವದು
ಅಭಿಮಾನಧನವೆಂದು ಒರಲಿದಳು ಆ ನಲ್ಲೆ!

ವಿಜಯನಗರವದಂದು ಅಪಜಯನಗರವಾಗಿ
ಸುಖಕಿರುವ ನೆಲೆವೀಡು ದುಃಖದಾಗರವಾಗಿ
ಕೆನ್ನೀರು ಕಣ್ಣೀರು ನಿಲಲು ಸಾಗರವಾಗಿ,
ಮನದಿ ಮಲ್ಲಳಿಗೊಂಡೆ: ಎಲೆ! ಸ್ಮಶಾನವಿದೇನು?
ಕನ್ನಡದ ಮೈಸಿರಿಯು ಬತ್ತಲಾಗಿಹುದೇನು?
ಕೊನೆವರೆಗು ನಮ್ಮ ನಾಡಿನಲ್ಲಿ ದುರ್‍ಗತಿಯೇನು?

(೪)

ಇಂತಲ್ಲ ಹೊಸತೊಂದು ಸ್ಫೂರ್ತಿಯದು ಜನಿಸುವದು
ನಾಡಿನೊಳು, ಹೊಸತೊಂದು ಸಾಮ್ರಾಜ್ಯವೇಳುವದು
ಕನ್ನಡಕೆ ಹೃದಯವಿರುವನಕ ನೆರೆ ಬಾಳುವದು
ನಾಡ ಹಸುಮಕ್ಕಳಿಗೆ ಇದು ಕಾರ್‍ಯವೆನಿಸುವದು
ನಾಡಿನವರೆದೆಯಲ್ಲಿ ಹೊನ್ನಕ್ಕರದಿ ಬರದು
ಬಾಳುವರು ಕಬ್ಬಿಗರು, ತಮ್ಮ ಸಾಹಸಗಳನು
ಅವರ ಸುಖ ದುಃಖವನು, ಉಮ್ಮಳುಲ್ಲಸಗಳನು
ನೆನೆಯುವರು ನೆರೆನಾಡಿನವರು ತಮ್ಮನು ಮರೆದು

ಅದಕಂತ ಕರುನಾಡ ತುಂಬೆಲ್ಲ ಸಂಚರಿಸುವೆನು
ಹಿಂದಿನವರೆಸಕ ತಣಿಸದಿಹ ಬೆಂತರದಂತೆ
ಇಂದಿನವರನು ಕನಸಿನಲಿ ಹೋಗಿ ಹರಸುವನು
ಅವರೆದೆಯು ಪುಟಿಯುವದ ನೋಡಿ ತುಂತುರದಂತೆ
ಹಿಂದಿನಿರವನು ನೆನೆದು ಮುಂದಿಹುದ ಸ್ಮರಿಸುವೆನು
ಕಂಡುಬರುತಿಹುದೊಂದು ಯುಗ-ಯುಗಾಂತರದಂತೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...