ದೀಪಿಕಾ ಸೃಷ್ಟಿ

ದೀಪಿಕಾ
ನಿನ್ನ ನಗೆಯೆಂದರೆ
ನಿನ್ನ ಬಗೆಯಂಥದು;
ನಿನ್ನ ಬಗೆಯೆಂದರೆ
ಮಲ್ಲಿಗೆ ಧಗೆಯಂಥದು;
ಮೈಯನ್ನ ಕೆರಳಿಸಿ ಕೊರಗಿಸಿ
ಒಳಗಿನ ಕಣ್ಣನ್ನು ತೆರೆಸುವ
ನಿನ್ನ ಚೆಲುವು ನವಿಲುಗರಿಯ ಪತ್ರದಂಥದು,
ಕತ್ತಲೆ ಬಾನಿನ ಚುಕ್ಕಿಯ ಛತ್ರಿಯಂಥದು
ನನ್ನೊಳಗಿನ ಪದರ ಪದರಗಳು ಸೀಳಿ ಎದ್ದು ಬರುವ
ನೀನೂ ನಾನೇ ಎಂದರೆ ಒಗಟುಮಾತೆ ಹೇಳು?

ನನ್ನ ರತಿವಿರತಿಯನ್ನ ನೆನಪಿನಲ್ಲಿ ಕಚ್ಚಿ
ಹುಗಿದ ಕಾಮನೆಯನ್ನೆ ಕನಸಿನಲ್ಲಿ ಬಿಚ್ಚಿ
ತಕ್ಕ ಮಾತಿಗೆ ತಡಕಿ
ನಡುಕ ಗದ್ಗದದಲ್ಲಿ ಬಡಬಡಿಸುವಾಗ,
ಮೆಲ್ಲಗೇಳುತ್ತೀಯ ಮಲ್ಲಿಗೆ ಪರಿಮಳಿಸುತ್ತ
ಸುತ್ತ ತೆರೆಯುತ್ತ ಶೃಂಗಾರಲೋಕ;
ಬೆಳಕಿಗೆ ಮಂಜನ್ನು ಬೆರೆಸಿ
ಬಿಸಿಲಿಗೆ ತಂಪನ್ನು ಕಲೆಸಿ
ಬಾಳನ್ನೇ ಹೋಳಿ ಎನಿಸುತ್ತ ದೀಪಿಕಾ.
*****
ದೀಪಿಕಾ ಕವನಗುಚ್ಛ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಾಭ
Next post ಬಿಸಿಲ ಕಾಲವು ಬಂದಿತೆ ?

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys