ದೀಪಿಕಾ ಸೃಷ್ಟಿ

ದೀಪಿಕಾ
ನಿನ್ನ ನಗೆಯೆಂದರೆ
ನಿನ್ನ ಬಗೆಯಂಥದು;
ನಿನ್ನ ಬಗೆಯೆಂದರೆ
ಮಲ್ಲಿಗೆ ಧಗೆಯಂಥದು;
ಮೈಯನ್ನ ಕೆರಳಿಸಿ ಕೊರಗಿಸಿ
ಒಳಗಿನ ಕಣ್ಣನ್ನು ತೆರೆಸುವ
ನಿನ್ನ ಚೆಲುವು ನವಿಲುಗರಿಯ ಪತ್ರದಂಥದು,
ಕತ್ತಲೆ ಬಾನಿನ ಚುಕ್ಕಿಯ ಛತ್ರಿಯಂಥದು
ನನ್ನೊಳಗಿನ ಪದರ ಪದರಗಳು ಸೀಳಿ ಎದ್ದು ಬರುವ
ನೀನೂ ನಾನೇ ಎಂದರೆ ಒಗಟುಮಾತೆ ಹೇಳು?

ನನ್ನ ರತಿವಿರತಿಯನ್ನ ನೆನಪಿನಲ್ಲಿ ಕಚ್ಚಿ
ಹುಗಿದ ಕಾಮನೆಯನ್ನೆ ಕನಸಿನಲ್ಲಿ ಬಿಚ್ಚಿ
ತಕ್ಕ ಮಾತಿಗೆ ತಡಕಿ
ನಡುಕ ಗದ್ಗದದಲ್ಲಿ ಬಡಬಡಿಸುವಾಗ,
ಮೆಲ್ಲಗೇಳುತ್ತೀಯ ಮಲ್ಲಿಗೆ ಪರಿಮಳಿಸುತ್ತ
ಸುತ್ತ ತೆರೆಯುತ್ತ ಶೃಂಗಾರಲೋಕ;
ಬೆಳಕಿಗೆ ಮಂಜನ್ನು ಬೆರೆಸಿ
ಬಿಸಿಲಿಗೆ ತಂಪನ್ನು ಕಲೆಸಿ
ಬಾಳನ್ನೇ ಹೋಳಿ ಎನಿಸುತ್ತ ದೀಪಿಕಾ.
*****
ದೀಪಿಕಾ ಕವನಗುಚ್ಛ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಾಭ
Next post ಬಿಸಿಲ ಕಾಲವು ಬಂದಿತೆ ?

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys