Home / ಕಥೆ / ಕಿರು ಕಥೆ / ಅರಿವು

ಅರಿವು

ಒಬ್ಬ ಗೃಹಸ್ಥ ಸಂಸಾರ ಸಾಗರದಲ್ಲಿ ಮುಳಗಿದ್ದ. ಅವನು ಅಪಾರ ಸಂಪತ್ತು ಗಳಿಸಿ ಇಟ್ಟಿದ್ದ. ಅವನಿಗೆ ಹೆಂಡತಿ, ಮಕ್ಕಳು, ಮನೆಮಠ, ಹಣದಿಂದ ಶಾಂತಿ ದೊರೆಯಲಿಲ್ಲ. ಅವನ ಮನೆಗೆ ಒಂದು ದಿನ ಒಬ್ಬ ಸಾಧು ಬಂದಾಗ, ಗೃಹಸ್ಥ ತನ್ನ ಸ್ಥಿತಿಯನ್ನು ಬಿನ್ನವಿಸಿ ಕೂಂಡ.

ಸಾಧು ಹೇಳಿದ- “ನೋಡು ನಿನಗೆ ಎರಡು ಇಲಿಗಳನ್ನು ಕೊಟ್ಟು ಹೋಗುತ್ತೇನೆ. ಒಂದು ಕಪ್ಪು ಇನ್ನೊಂದು ಬಿಳಿ, ಇದನ್ನು ಒಂದು ವರ್ಷ ಕಾಲ ಸಾಕು. ನಾನು ಮತ್ತೆ ತಿರುಗಿ ಬರುತ್ತೇನೆ. ನೀನು ಹೇಗೆ ಇರುವೆ ಎಂದು ಹೇಳು” ಎಂದರು.

ಅದಕ್ಕೆ ಗೃಹಸ್ಥ ಒಪ್ಪಿಕೊಂಡ.

ಒಂದು ವರ್ಷವಾಯಿತು. ಸಾಧು ತಿರುಗಿ ಬಂದರು. ಗೃಹಸ್ಥ ಈಗ ಸನ್ಯಾಸಿಯಂತೆ ಕಾವಿಬಟ್ಟೆ ಉಟ್ಟು ನಿಂತಿದ್ದನು. ಸಾಧು ಕೇಳಿದ- “ಈಗ ಶಾಂತಿ ಇಂದ ಇರುವೆಯಾ?” ಎಂದು. ನೀವು ಕೊಟ್ಟ ಬಿಳಿ ಇಲಿ ಹಗಲಿನಲ್ಲಿ ಸಂಸಾರದ ಎಳೆಯನ್ನು ಕಡೆಯಿತು. ನೀವು ಕೊಟ್ಟ ಕರಿ ಇಲಿ ರಾತ್ರಿಯ ಕತ್ತಲಲ್ಲಿ ನನ್ನ ಹಣದ ನೋಟುಗಳನ್ನೆಲ್ಲಾ ತಿಂದು ಹಾಕಿತು. ಈಗ ನಾನು ನಿಮ್ಮಂತೆ ಶಾಂತಿ ಪಡೆದು ಸನ್ಯಾಸಿಯಾಗಿದ್ದೇನೆ.” ಎಂದ.
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...