ಅರಿವು

ಒಬ್ಬ ಗೃಹಸ್ಥ ಸಂಸಾರ ಸಾಗರದಲ್ಲಿ ಮುಳಗಿದ್ದ. ಅವನು ಅಪಾರ ಸಂಪತ್ತು ಗಳಿಸಿ ಇಟ್ಟಿದ್ದ. ಅವನಿಗೆ ಹೆಂಡತಿ, ಮಕ್ಕಳು, ಮನೆಮಠ, ಹಣದಿಂದ ಶಾಂತಿ ದೊರೆಯಲಿಲ್ಲ. ಅವನ ಮನೆಗೆ ಒಂದು ದಿನ ಒಬ್ಬ ಸಾಧು ಬಂದಾಗ, ಗೃಹಸ್ಥ ತನ್ನ ಸ್ಥಿತಿಯನ್ನು ಬಿನ್ನವಿಸಿ ಕೂಂಡ.

ಸಾಧು ಹೇಳಿದ- “ನೋಡು ನಿನಗೆ ಎರಡು ಇಲಿಗಳನ್ನು ಕೊಟ್ಟು ಹೋಗುತ್ತೇನೆ. ಒಂದು ಕಪ್ಪು ಇನ್ನೊಂದು ಬಿಳಿ, ಇದನ್ನು ಒಂದು ವರ್ಷ ಕಾಲ ಸಾಕು. ನಾನು ಮತ್ತೆ ತಿರುಗಿ ಬರುತ್ತೇನೆ. ನೀನು ಹೇಗೆ ಇರುವೆ ಎಂದು ಹೇಳು” ಎಂದರು.

ಅದಕ್ಕೆ ಗೃಹಸ್ಥ ಒಪ್ಪಿಕೊಂಡ.

ಒಂದು ವರ್ಷವಾಯಿತು. ಸಾಧು ತಿರುಗಿ ಬಂದರು. ಗೃಹಸ್ಥ ಈಗ ಸನ್ಯಾಸಿಯಂತೆ ಕಾವಿಬಟ್ಟೆ ಉಟ್ಟು ನಿಂತಿದ್ದನು. ಸಾಧು ಕೇಳಿದ- “ಈಗ ಶಾಂತಿ ಇಂದ ಇರುವೆಯಾ?” ಎಂದು. ನೀವು ಕೊಟ್ಟ ಬಿಳಿ ಇಲಿ ಹಗಲಿನಲ್ಲಿ ಸಂಸಾರದ ಎಳೆಯನ್ನು ಕಡೆಯಿತು. ನೀವು ಕೊಟ್ಟ ಕರಿ ಇಲಿ ರಾತ್ರಿಯ ಕತ್ತಲಲ್ಲಿ ನನ್ನ ಹಣದ ನೋಟುಗಳನ್ನೆಲ್ಲಾ ತಿಂದು ಹಾಕಿತು. ಈಗ ನಾನು ನಿಮ್ಮಂತೆ ಶಾಂತಿ ಪಡೆದು ಸನ್ಯಾಸಿಯಾಗಿದ್ದೇನೆ.” ಎಂದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಂಥನವಿಲ್ಲದದೆಂತು ಮೌಲ್ಯವರ್‍ಧನೆಯಪ್ಪುದೋ?
Next post ಇರವು-ಅರಿವು

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…