Home / ಕಥೆ / ಕಿರು ಕಥೆ / ಹಿತ್ತಾಳೆ ಕಿವಿ

ಹಿತ್ತಾಳೆ ಕಿವಿ

ಬಿಜ್ಜಳ ಮಹಾರಾಜರ ಬಳಿ ಅಣ್ಣ ಬಸವಣ್ಣನವರು ಮಹಾ ಮಂತ್ರಿಯಾದ ಹೊಸದರಲ್ಲಿ ಕಲ್ಯಾಣ ನಗರಿಯಲ್ಲಿದ್ದ ಚಾಡಿ ಕೋರರಾದ ಮಲ್ಲಪ್ಪ ಶೆಟ್ಟಿ ಕೊಂಡಿ ಮಂಚಣ್ಣ ಮುಂತಾದವರೆಲ್ಲ ಸೇರಿಕೊಂಡು ಒಮ್ಮೆ ಅಣ್ಣ ಬಸವಣ್ಣನವರು ಏಕಾಂತವಾಗಿದ್ದಾಗ ಅಲ್ಲಿಗೆ ಬಂದರು.

‘ಬಿಜ್ಜಳ ಮಹಾರಾಜರು ನಿಮ್ಮ ಬಗ್ಗೆ ಮೊನ್ನೆ ದಿನ ಎಲ್ಲರ ಎದುರಿಗೆ ನಿಮ್ಮನ್ನು ಕೇವಲವಾಗಿ ನಿಂದಿಸಿದರು!’ ಎಂದು ಬಂದವರು ಪೀಠಿಕೆ ಹಾಕಿ ಮಾತಿಗೆ ಮಾತು ಪೋಣಿಸುತ್ತಾ ಕುಳಿತರು.

“ನೀವು ಬಿಜ್ಜಳ ಮಹಾರಾಜರ ಮಾತುಗಳನ್ನು ಸತ್ಯವೆಂದು ನಂಬುವಿರೇನು ? ಅವರು ನಮ್ಮ ಬಗ್ಗೆ ಪ್ರೀತಿಯಿರುವವರು. ನಿಮ್ಮ ಮನಸ್ಥಿತಿ ಹಾಗೆ ಆಲೋಚಿಸಿರಬಹುದು. ಇಲ್ಲವೆ ನೀವು ಪೂರ್‍ವಗ್ರಹ ಪೀಡಿತರಿರಬಹುದು. ನಿಮಗೆ ಯಾವುದು ಸತ್ಯವೆನಿಸುವುದು?” ಅಣ್ಣ ಬಸವಣ್ಣನವರು ಬಂದಿದ್ದವರನ್ನು ಪ್ರಶ್ನಿಸಿ ಅವರ ಮುಖ ನೋಡುತ್ತಾ ಕುಳಿತರು.

ಅಲ್ಲಿದ್ದವರೆಲ್ಲ ಬೆವರ ತೊಡಗಿದರು. ತೊದಲ ತೊಡಗಿದರು.

‘ಮಹಾ ಮಂತ್ರಿಗಳೇ… ಬಿಜ್ಜಳ ಮಹಾರಾಜರು ಏನೆಂದು ನಮಗೇನು ತಿಳಿಯದು. ಸತ್ಯಾಸತ್ಯತೆ ಕುರಿತು ನಾವು ಆಲೋಚಿಸಿಲ್ಲ. ನಿಮ್ಮ ಬಗ್ಗೆ ಹಾಗೆ ಅಂದಿದ್ದನ್ನು ಹೇಳಲು ಬಂದಿದ್ದೆವು’ ಎಂದರು.

“ನಿಮ್ಮ ಚಾಡಿ ಮಾತುಗಳಿಂದೇನು ಲಾಭವಿಲ್ಲ. ಕಲ್ಯಾಣದ ಜನತೆಗೆ ಬಿಜ್ಜಳ ಮಹಾರಾಜರ ಬೊಕ್ಕಸ ತುಂಬಿಸಲು ಚಿಂತಿಸಿ, ಮಹಾರಾಜರ ಜನರ ತಲೆ ತುಂಬಿಸಿ ನೀವೂ ಹಾಳಾಗಬೇಡಿ ! ನೀವು ಮೊದಲು ಹೊರಡಿ. ಇನ್ನೆಂದು ನನ್ನ ಬಳಿ ಅವರಿವರ ಸುದ್ದಿ ತಂದು ನನ್ನ ಸಮಯ ವ್ಯರ್‍ಥ ಮಾಡಬೇಡಿ’ ಎಂದು ಅಣ್ಣ ಬಸವಣ್ಣನವರು ಖಾರವಾಗಿ ಪ್ರತಿಕ್ರಿಯಿಸಿದರು.

‘ನಾವು ನಿಮಗೆ ಉಪಕಾರ ಮಾಡಲು ಬಂದಿದ್ದೆವು. ನೀವು ನಮ್ಮನ್ನು ಅವಮಾನಿಸಿ ಕಳಿಸಿದ್ದು ಸರಿಯಿಲ್ಲ. ಇದರ ಪ್ರತಿಫಲ ಉಂಡೇ ಉಣ್ಣುವಿರಿ…’ ಎಂದು ಬಂದಿದ್ದವರು ಕೂಗಾಡಿದರು.

ಅಣ್ಣ ಬಸವಣ್ಣನವರು ಬಂದಿದ್ದವರನ್ನು ಮೌನ ವ್ರತದಿ ಸಾಗ ಹಾಕಿದರು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...