Home / ಕಥೆ / ಕಿರು ಕಥೆ / ಹಿತ್ತಾಳೆ ಕಿವಿ

ಹಿತ್ತಾಳೆ ಕಿವಿ

ಬಿಜ್ಜಳ ಮಹಾರಾಜರ ಬಳಿ ಅಣ್ಣ ಬಸವಣ್ಣನವರು ಮಹಾ ಮಂತ್ರಿಯಾದ ಹೊಸದರಲ್ಲಿ ಕಲ್ಯಾಣ ನಗರಿಯಲ್ಲಿದ್ದ ಚಾಡಿ ಕೋರರಾದ ಮಲ್ಲಪ್ಪ ಶೆಟ್ಟಿ ಕೊಂಡಿ ಮಂಚಣ್ಣ ಮುಂತಾದವರೆಲ್ಲ ಸೇರಿಕೊಂಡು ಒಮ್ಮೆ ಅಣ್ಣ ಬಸವಣ್ಣನವರು ಏಕಾಂತವಾಗಿದ್ದಾಗ ಅಲ್ಲಿಗೆ ಬಂದರು.

‘ಬಿಜ್ಜಳ ಮಹಾರಾಜರು ನಿಮ್ಮ ಬಗ್ಗೆ ಮೊನ್ನೆ ದಿನ ಎಲ್ಲರ ಎದುರಿಗೆ ನಿಮ್ಮನ್ನು ಕೇವಲವಾಗಿ ನಿಂದಿಸಿದರು!’ ಎಂದು ಬಂದವರು ಪೀಠಿಕೆ ಹಾಕಿ ಮಾತಿಗೆ ಮಾತು ಪೋಣಿಸುತ್ತಾ ಕುಳಿತರು.

“ನೀವು ಬಿಜ್ಜಳ ಮಹಾರಾಜರ ಮಾತುಗಳನ್ನು ಸತ್ಯವೆಂದು ನಂಬುವಿರೇನು ? ಅವರು ನಮ್ಮ ಬಗ್ಗೆ ಪ್ರೀತಿಯಿರುವವರು. ನಿಮ್ಮ ಮನಸ್ಥಿತಿ ಹಾಗೆ ಆಲೋಚಿಸಿರಬಹುದು. ಇಲ್ಲವೆ ನೀವು ಪೂರ್‍ವಗ್ರಹ ಪೀಡಿತರಿರಬಹುದು. ನಿಮಗೆ ಯಾವುದು ಸತ್ಯವೆನಿಸುವುದು?” ಅಣ್ಣ ಬಸವಣ್ಣನವರು ಬಂದಿದ್ದವರನ್ನು ಪ್ರಶ್ನಿಸಿ ಅವರ ಮುಖ ನೋಡುತ್ತಾ ಕುಳಿತರು.

ಅಲ್ಲಿದ್ದವರೆಲ್ಲ ಬೆವರ ತೊಡಗಿದರು. ತೊದಲ ತೊಡಗಿದರು.

‘ಮಹಾ ಮಂತ್ರಿಗಳೇ… ಬಿಜ್ಜಳ ಮಹಾರಾಜರು ಏನೆಂದು ನಮಗೇನು ತಿಳಿಯದು. ಸತ್ಯಾಸತ್ಯತೆ ಕುರಿತು ನಾವು ಆಲೋಚಿಸಿಲ್ಲ. ನಿಮ್ಮ ಬಗ್ಗೆ ಹಾಗೆ ಅಂದಿದ್ದನ್ನು ಹೇಳಲು ಬಂದಿದ್ದೆವು’ ಎಂದರು.

“ನಿಮ್ಮ ಚಾಡಿ ಮಾತುಗಳಿಂದೇನು ಲಾಭವಿಲ್ಲ. ಕಲ್ಯಾಣದ ಜನತೆಗೆ ಬಿಜ್ಜಳ ಮಹಾರಾಜರ ಬೊಕ್ಕಸ ತುಂಬಿಸಲು ಚಿಂತಿಸಿ, ಮಹಾರಾಜರ ಜನರ ತಲೆ ತುಂಬಿಸಿ ನೀವೂ ಹಾಳಾಗಬೇಡಿ ! ನೀವು ಮೊದಲು ಹೊರಡಿ. ಇನ್ನೆಂದು ನನ್ನ ಬಳಿ ಅವರಿವರ ಸುದ್ದಿ ತಂದು ನನ್ನ ಸಮಯ ವ್ಯರ್‍ಥ ಮಾಡಬೇಡಿ’ ಎಂದು ಅಣ್ಣ ಬಸವಣ್ಣನವರು ಖಾರವಾಗಿ ಪ್ರತಿಕ್ರಿಯಿಸಿದರು.

‘ನಾವು ನಿಮಗೆ ಉಪಕಾರ ಮಾಡಲು ಬಂದಿದ್ದೆವು. ನೀವು ನಮ್ಮನ್ನು ಅವಮಾನಿಸಿ ಕಳಿಸಿದ್ದು ಸರಿಯಿಲ್ಲ. ಇದರ ಪ್ರತಿಫಲ ಉಂಡೇ ಉಣ್ಣುವಿರಿ…’ ಎಂದು ಬಂದಿದ್ದವರು ಕೂಗಾಡಿದರು.

ಅಣ್ಣ ಬಸವಣ್ಣನವರು ಬಂದಿದ್ದವರನ್ನು ಮೌನ ವ್ರತದಿ ಸಾಗ ಹಾಕಿದರು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...