ಬಿಸಿಲ ಕಾಲವು ಬಂದಿತೆ ?

ಎಲೆಯ ಮೇಲೆ ಎಲೆಯು ಉರುಳಿವೆ
ಬಿಸಿಲ ಕಾಲವು ಬಂದಿತೆ

ಹಕ್ಕಿ ಗೂಡು ಒಣಗಿ ಹೋಗಿದೆ
ಮುಗಿಲು ಕೆಂಡವ ಕಾರಿತೆ

ಎಲ್ಲಿ ಹೋಯಿತು ಹಸಿರು ಹೂಬನ
ಎಲ್ಲಿ ಅಡಗಿತು ಕೂಜನ

ಎಲ್ಲಿ ಮುಳುಗಿತು ಮಳೆಯ ಠಂಠಣ
ತಂಪು ಹನಿಗಳ ಸಿಂಚನ

ನೆಲಕೆ ಹೊಲಕೆ ಜಲಕೆ ಸುರಿದಿವೆ
ಬರಿಯ ಬಣಬಣ ಎಲೆಗಳು

ಬೆಂಕಿ ಬಿದ್ದರೆ ಬಗ್ಗನುರಿವವು
ಬಯಲು ಬಾನಿನ ನೆಲೆಗಳು

ಬಣ್ಣ ಬಣ್ಣದ ದಿಡುಗು ಗುಡುಗಿಗೆ
ಕಡೆಗೆ ಬಂದಿತೆ ಈ ಗತಿ

ಯೌವನೋತ್ಸವ ಹರ್ಷಹಾಡಿಗೆ
ಕಡೆಗೆ ತಿರುಗಿತೆ ಈ ಮತಿ
ಮತ್ತೆ ನಗುವಳೆ ವಸುಮತಿಽಽಽಽ
ಮತ್ತೆ ತರುವಳೆ ರಸಗತಿಽಽಽಽ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀಪಿಕಾ ಸೃಷ್ಟಿ
Next post ಕಾವ್ಯ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…