ಬಿಸಿಲ ಕಾಲವು ಬಂದಿತೆ ?

ಎಲೆಯ ಮೇಲೆ ಎಲೆಯು ಉರುಳಿವೆ
ಬಿಸಿಲ ಕಾಲವು ಬಂದಿತೆ

ಹಕ್ಕಿ ಗೂಡು ಒಣಗಿ ಹೋಗಿದೆ
ಮುಗಿಲು ಕೆಂಡವ ಕಾರಿತೆ

ಎಲ್ಲಿ ಹೋಯಿತು ಹಸಿರು ಹೂಬನ
ಎಲ್ಲಿ ಅಡಗಿತು ಕೂಜನ

ಎಲ್ಲಿ ಮುಳುಗಿತು ಮಳೆಯ ಠಂಠಣ
ತಂಪು ಹನಿಗಳ ಸಿಂಚನ

ನೆಲಕೆ ಹೊಲಕೆ ಜಲಕೆ ಸುರಿದಿವೆ
ಬರಿಯ ಬಣಬಣ ಎಲೆಗಳು

ಬೆಂಕಿ ಬಿದ್ದರೆ ಬಗ್ಗನುರಿವವು
ಬಯಲು ಬಾನಿನ ನೆಲೆಗಳು

ಬಣ್ಣ ಬಣ್ಣದ ದಿಡುಗು ಗುಡುಗಿಗೆ
ಕಡೆಗೆ ಬಂದಿತೆ ಈ ಗತಿ

ಯೌವನೋತ್ಸವ ಹರ್ಷಹಾಡಿಗೆ
ಕಡೆಗೆ ತಿರುಗಿತೆ ಈ ಮತಿ
ಮತ್ತೆ ನಗುವಳೆ ವಸುಮತಿಽಽಽಽ
ಮತ್ತೆ ತರುವಳೆ ರಸಗತಿಽಽಽಽ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀಪಿಕಾ ಸೃಷ್ಟಿ
Next post ಕಾವ್ಯ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys