ಪಂಚಭೂತ

ಈ ಭೂಮಿ ನಮ್ಮದು ಆಕಾಶ ನಮ್ಮದು
ಗಾಳಿ ನೀರು ಬೆಂಕಿ ಕೂಡಿ ಪಂಚಭೂತ ನಮ್ಮದು ||

ನಮ್ಮ ಭೂಮಿ ಗರ್ಭದಲ್ಲಿ
ಭ್ರೂಣಗಳ ಕೊಂದರು
ಆಕಾಶದ ಅನಂತವನ್ನು
ಆಪೋಶನೆಗೊಂಡರು
ಬೀಸೊ ಗಾಳಿ ಎದುರು ನಿಂತು
ಗಾಳ ಹಾಕಿ ಹಿಡಿದರು
ಕುಡಿವ ನೀರ ಕಣ್ಣ ಕಳೆದು
ಕುರುಡಾಗಿಸಿಬಿಟ್ಟರು
ಬೆಂಕಿ ಹಿಡಿದು ಎಗರಿ ಕುಣಿದು
ಕನಸುಗಳ ಸುಟ್ಟರು ||

ಬಿರುಕು ಬಿಟ್ಟ ಭೂಮಿಯಲ್ಲಿ
ನಿಟ್ಟುಸಿರು ನರಳಿದೆ
ಆಕಾಶದ ಅಳುವಿನಲ್ಲಿ
ಇತಿಹಾಸದ ಕೊರಗಿದೆ
ಗಾಳದಲ್ಲಿ ಸಿಲುಕಿ ನಿಂತ
ಗಾಳಿ ಗೂಳಿ ಆಗಲಿದೆ
ನೀರು ಹರಿದು ನೆಲದ ತುಂಬ
ಕನಸ ಕಣ್ಣು ಮೂಡಲಿದೆ
ಬೆಂಕಿ ಸುತ್ತ ಸೆಟೆದು ನಿಂತು
ಕನಸುಗಳ ಕಾಯಲಿದೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಿಡ್ನಿ ಕತೆ
Next post ಮರದ ಆಶ್ವಾಸನೆ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys