ಕಿಡ್ನಿ ಕತೆ

ದೇವರು ದೊಡ್ಡವನು. ಮನುಷ್ಯನಿಗೆ ಅನುಕೂಲವಾಗಲೆಂದೇ ಎರಡು ಕಿಡ್ನಿಗಳನ್ನು ನೀಡಿದ್ದಾನೆ!

ಚೀನಾದ ಬೀಜಿಂಗ್‌ನ ಜಿನ್‌ಹುವಾ ನಗರದ ದೊನ್‌ಗ್ಯಾಂಗ್ ಪೀಪಲ್ಸ್ ಆಸ್ಪತ್ರೆಯಲ್ಲಿ ದಿನಾಂಕ ೨೮.೦೭.೨೦೧೫ರಂದು ಮಂಗಳವಾರ ದಿನದಂದು ಸತತವಾಗಿ ಎರಡು ತಾಸುಗಳವರೆಗೆ ನಡೆದ ತುರ್ತು ಶಸ್ತ್ರಚಿಕಿತ್ಸೆಯಲ್ಲಿ ಹೇ ಡಾಂಗ್ ಎಂಬ ವ್ಯಕ್ತಿಯ ಎಡಬದಿಯ ಕಿಡ್ನಿಯಿಂದ ಸುಮಾರು ೪೨೦ ಕಲ್ಲುಗಳನ್ನು ವೈದ್ಯರು ಹೊರತೆಗೆದು ವ್ಯಕ್ತಿಯನ್ನು ಬದುಕಿಸಿದ್ದಾರೆ.

ಈ ವ್ಯಕ್ತಿ ಹೆಚ್ಚು ಜಿಪ್ಸಂ ಟೊಪು ಖಾದ್ಯ (ಬರೀ ಖನಿಜಯುಕ್ತ ಆಹಾರವನ್ನು) ಸೇವಿಸುತ್ತಿದ್ದ ಹಾಗೂ ನೀರು ಕುಡಿಯುವ ಹವ್ಯಾಸವೇ ಇರಲಿಲ್ಲ..!

“ಈ ಸೋಯಾ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇರುತ್ತದೆ. ಜಿಪ್ಸಂ ಟೊಪು ಸಹ ಅದರಿಂದಲೇ ತಯಾರಾಗುತ್ತಿದ್ದು ಹೆಚ್ಚಿನ ನೀರು ಕುಡಿದು ಬೆವರು ಭಸಿಯುವ ಕೆಲಸ ಮಾಡುವುದರಿಂದ ಮಾತ್ರ ಈ ಥರದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯ…” ಎಂದು ವೈದ್ಯರಾದ ವೈಯುಬಿನ್ ಅವರು ವಿವರಿಸಿದ್ದಾರೆ.

ಹೇ ಡಾಂಗ್‌ಂಗೆ ತೀವ್ರ ಹೊಟ್ಟೆ ನೋವು ಕಾಣಿಸಿದ್ದರಿಂದ ಸಿಟಿ ಸ್ಕ್ಯಾನ್ ಮಾಡಲಾಯಿತು. ಕಿಡ್ನಿಯಲ್ಲಿ ಅಪಾರ ಪ್ರಮಾಣದಲ್ಲಿ ಕಲ್ಲುಗಳು ತುಂಬಿ ತುಂಬಿ ಹೋಗಿದ್ದವು! ಆಗ ಸತತವಾಗಿ ಎರಡು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ೪೫ ನಿಮಿಷಗಳಲ್ಲಿ ಕಲ್ಲುಗಳನ್ನು ಹೊರತೆಗೆಯಲಾಯಿತು. ಅಷ್ಟೊಂದು ಕಲ್ಲುಗಳನ್ನು ತೆಗೆದು ನನ್ನ ಕೈ ಹಾಗೂ ಬೆರಳುಗಳು ಮರಗಟ್ಟಿದ್ದವು…. ಎಂದು ವೈದ್ಯರು ಅಲ್ಲಿ ಸೇರಿದ್ದ ಜನರಿಗೆ ವಿವರಿಸಿದರು.

ಆದ್ದರಿಂದ ಪ್ರತಿಯೊಬ್ಬರು ಪ್ರತಿನಿತ್ಯ ೨-೩ ಲೀಟರ್ ನೀರನ್ನು ಕಡಿಮೆ ಎಂದರೂ ಕುಡಿಯಲೇಬೇಕು. ದೇಹದಲ್ಲಿನ ಕಲ್ಮಶವನ್ನು ಹೊರಹಾಕಲು ಕಿಡ್ನಿಗಳು ಸರಿಯಾಗಿ ಕೆಲಸ ಮಾಡಲು ನೀರು ಬೇಕೇಬೇಕು.

ಆದ್ದರಿಂದ ಹೆಚ್ಚು ಹೆಚ್ಚು ದ್ರವರೂಪದ ಆಹಾರ ಸೇವಿಸಲೇ ಬೇಕು. ಏನಂತಿರಾ?! ಹೌದು ಅಂತೀರಿ. ಅನ್ನಲೇಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಯಿ
Next post ಪಂಚಭೂತ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys