ಮರದ ಆಶ್ವಾಸನೆ

ಅವಳಿಗೆ ಬಾಳಿನಲ್ಲಿ ಬೇಸರ ತಡೆಯಲಾಗಲಿಲ್ಲ. ತನ್ನ ಪ್ರಿಯಕರನ ತೋಳಲ್ಲಿ ಬೇರೆಯ ಹುಡುಗಿಯನ್ನು ಕಂಡಾಗ ಅವಳ ಹೃದಯ ನಿಂತಂತಾಯಿತು. ಬಾಳಲ್ಲಿ ಕತ್ತಲೆ ಕವಿದು ತೋಟದ ಮರಕ್ಕೆ ನೇಣು ಹಾಕಿಕೊಳ್ಳಲು ಹೊರಟಾಗ ಮರ ತನ್ನ ಭಾಷೆಯಲ್ಲಿ ನೂರುಬಾರಿ ಸಂತೈಸಿ ಹೇಳಿತು “ನೀ ಪ್ರಿಯಕರನಿಂದ ದೂರವಾದಿ ಎಂದು ಉಸಿರಾಡದಂತೆ ಕತ್ತನ್ನು ಹಿಸುಕು ಎಂದು ನನ್ನ ಕೇಳಬೇಡ, ನನ್ನ ರೆಂಬೆ ಕೈಗಳಿಂದ ಹತ್ಯೆ ಮಾಡಿಸಬೇಡ, ನಿನಗೆ ನಾನು ನಿನ್ನ ಬಾಳು ಪೂರ್‍ತಿ ನೆಮ್ಮದಿಯ ಉಸಿರಾಡಲು, ಸುಖ, ಸಂತಸ ದಿಂದ ಬಾಳಲು ಜೀವದ ಉಸಿರು, ಚೈತನ್ಯ ಕೊಡುವೆ” ಎಂದಿತು. ಮರದ ಆಶ್ವಾಸನೆಯಿಂದ ನೇಣು ಸಡಲಿಸಿ ಅವಳು ಕಣ್ಣು ಒರಸಿಕೊಂಡಳು. ಹಸಿರು ಕೊಟ್ಟ ಬಾಳಿನಲ್ಲಿ ಸುಖಿಸಿದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಂಚಭೂತ
Next post ದೇವಾ ನಿನ್ನ ನಾಮಾಮೃತವ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

cheap jordans|wholesale air max|wholesale jordans|wholesale jewelry|wholesale jerseys