Home / ಕಥೆ / ಸಣ್ಣ ಕಥೆ / ಬೆಟ್ಟದ ಒಡೆಯರು

ಬೆಟ್ಟದ ಒಡೆಯರು

ಬೋಳತಲೆ ಚಾಮರಾಜ ಒಡೆಯರರ ತರುವಾಯ ಬೆಟ್ಟದ ಒಡೆಯರೆಂದು ಪ್ರಸಿದ್ಧರಾದ ಒಡೆಯರು ಪಟ್ಟಕ್ಕೆ ಬಂದರು. ಇವರು ಶೂರರಾಗಿದ್ದರು; ಆದರೆ ಮುಂದಾಲೋಚನೆಯಿಲ್ಲದೆ ದುಡುಕುತ್ತಿದ್ದರು. ಮೃದು ಸ್ವಭಾವವಿದ್ದರೂ ನಿದಾನವಿರಲಿಲ್ಲ. ಇವರು ಎರಡು ವರ್ಷಗಳಾಳ್ವಿಕೆಯಲ್ಲಿ ಬೊಕ್ಕಸದಲ್ಲಿದ್ದ ಹಣವೆಲ್ಲವನ್ನೂ ವೆಚ್ಚ ಮಾಡಿಬಿಟ್ಟರು. ಶ್ರೀರಂಗಪಟ್ಟಣಕ್ಕೆ ಸಲ್ಲಬೇಕಾಗಿದ್ದ ಪೊಗದಿಯು, ಹಾಗೆಯೇ ಉಳಿದುಹೋಯಿತು. ಆಗ ಅರಮನೆಯ ಹಿರಿಯರು ಬೆಟ್ಟದ ಒಡೆಯರನ್ನು ಪಟ್ಟದಿಂದ ತಪ್ಪಿಸಿ ರಾಜ ಒಡೆಯರಿಗೆ ಪಟ್ಟವನ್ನು ಕಟ್ಟುವ ಆಲೋಚನೆ ಮಾಡಿದರು. ದುರಾಲೋಚನಾ ಪರರಾದ ರಾಜ ಒಡೆಯರು ಸಾಲ ತೀರುವಂತೆಯು ಹಣ ಬರವಂತೆಯೂ ಮುಖ್ಯಸ್ಥರಿಂದ ಮಾತು ತೆಗೆದುಕೊಂಡು ಪಟ್ಟಕ್ಕೊಪ್ಪಿದರು.

ಬೆಟ್ಟದ ಒಡೆದುರನ್ನು ಕೊಲೆಮಾಡಿಸಬೇಕೆಂದು ಯಾರೂ ಆಲೋಚಿಸಲಿಲ್ಲ. ರಾಜ ಒಡೆಯರಿಗೆ ಪಟ್ಟ ಕಟ್ಟುವ ನಿಶ್ಚಯವು ನಡೆಯುತ್ತಿದ್ದಾಗಲೇ ಬೆಟ್ಟದ ಒಡೆಯರು ಅಲ್ಲಿಗೆ ಬಂದರು. ಅಲ್ಲಿಯ ಪರಿವಾರದವರು ಕೂಡಲೆ ವಿನೀತರಾಗಿ ಆ ನಿಶ್ಚಯವನ್ನು ಅರಿಕೆ ಮಾಡಿ “ದೇಶದ ಸಾಲವನ್ನು ತೀರಿಸಲು ಈ ನಿಶ್ಚಯವು ಅವಶ್ಯವಾಯಿತು. ಇದರಿಂದ ತಾವು ಖಿನ್ನರಾಗಬಾರದು. ತಾವು ಶ್ರೀರಂಗಪಟ್ಟಣದಲ್ಲಿ ರಾಜಪ್ರತಿನಿಧಿಯ ಸಭೆಯಲ್ಲಿ ಮೈಸೂರಿನ ಗೌರವವನ್ನುಳಿಸುತ್ತ ಇರಬಹುದು ; ಅಧವಾ ತಮಗೆ ಸ್ವತಂತ್ರವಾಗಿರಲು ಇಷ್ಟವಾದರೆ ಮೈಸೂರಿನಲ್ಲಿಯೇ ತಾವೂ ಇರಬಹುದು” ಎಂದು ಸೂಚಿಸಿದರು. ಆಗ ಬೆಟ್ಟದ ಒಡೆಯರಿಗೆ ಕೋಪ ಬಂದಿತು. “ನಾವು ಶ್ರೀರಂಗಪಟ್ಟಣದಲ್ಲಿ ಇರುವುದಿಲ್ಲ, ಮೈಸೂರಿನಲ್ಲಿಯೂ ಇರುವುದಿಲ್ಲ. ನಮಗೇನೂ ಬೇಡ” ಎಂದುಬಿಟ್ಟು ಆ ಸ್ಥಳದಿಂದ ಹೊರಟುಹೋದರು.

ಈ ಸಮಾಚಾರವನ್ನು ಕೇಳಿದಕೂಡಲೆ ಕಾರುಗಹಳ್ಳಿಯ ಪಾಳೆಯಗಾರನು ತನಗೆ ಒಳ್ಳೆ ಸಮಯ ಬಂದಿತೆಂದು ನೆನೆದು ಸೈನ್ಯವನ್ನು ನಡೆಸಿಕೊಂಡು ಮೈಸೂರಿನಮೇಲೆ ಅಕಸ್ಮಾತ್ತಾಗಿ ದಂಡೆತ್ತಿ ಬಂದು ಮುತ್ತಿದನು. ಬೆಟ್ಟದ ಒಡೆಯರು ಎಲ್ಲವನ್ನೂ ಬಿಟ್ಟವರಂತೆ ತಿರಸ್ಕಾರಭಾವದಿಂದ ಒಂದೆಡೆಯಲ್ಲಿ ಶತಪಥ ತಿರುಗುತ್ತಿದ್ದರು. ಕೋಟೆಯ ಒಳಗೆ ಗಜಿಬಿಜಿ, ಕೋಟೆಯು ಹೊರಗಡೆ ಶತ್ರುಗಳ ಹಾವಳಿ. ಆದರೂ ಬೆಟ್ಟದ ಒಡೆಯರು ತಟಸ್ಥರಾಗಿದ್ದರನ್ನು ಕಂಡು ಹೆಂಗಸೊಬ್ಬಳು ಹತ್ತಿರ ಹೋಗಿ “ಇದೇನು ಈ ಕಾಲದಲ್ಲಿಯೂ ಒಡೆಯರ ವಂಶದಲ್ಲಿ ಹುಟ್ಟಿದವರು ತಟಸ್ಟರಾಗಿರುವದೇ!” ಎಂದು ಮೂದಲಿಸಿದಳು. ತಕ್ಷಣವೇ ಬೆಟ್ಟದ ಒಡೆಯರು ಒಂದು ಗಂಡು ಕೊಡಲಿಯನ್ನು ಎತ್ತಿಕೊಂಡು ತನ್ನ ಸೈನ್ಯವನ್ನು ಕೂಗಿ ಒಟ್ಟು ಕೂಡಿಸಿ” ಹಿಂದೆ ಬನ್ನಿ ಎಂದು ಕೋಟೆಯ ಬಾಗಿಲ ಕಡೆಗೆ ನುಗ್ಗಿದರು. ಬಾಗಿಲ ಆಗಣಿ ಹಾಕಿತ್ತು. ಬೆಟ್ಟದ ಒಡೆಯರು ತಮ್ಮ ಕೊಡಲಿಯಿಂದ ಒಂದೇ ಏಟು ಹೊಡೆದರು. ಬಾಗಿಲು ತೆರೆಯಿತು. ತರುವಾಯ ಒಡೆಯರು ತಮ್ಮ ಭಟರೊಡನೆ ಶತ್ರುಗಳ ಮಧ್ಯೆ ನುಗ್ಗಿದರು, ವೀರಾವೇಶದಿಂದ ಯುದ್ದ ಮಾಡಿ ಅವರನ್ನು ಸೋಲಿಸಿ ಅಟ್ಟಿ ಬಿಟ್ಟರು. ಈ ರೀತಿಯಲ್ಲಿ ಮುತ್ತಲು ಬಂದ ಶತ್ರುಗಳು ತಾವೇ ಸೋತು ಪಲಾಯನರಾದರು.
*****
[ವಿಲ್ಕ್ಸ್‌ ಸಂ೧; ಪುಟ ೨೫]

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...