ಕಾವ್ಯ

ಅನಾದಿಯ ವಯಸ್ಸಲ್ಲಿ ಒಮ್ಮೆ
ಕಾವ್ಯ ಬಂದಿತ್ತು ನನ್ನನ್ನು ಹುಡುಕಿಕೊಂಡು.
ಗೊತಿಲ್ಲ, ನನಗೆ ಗೊತಿಲ್ಲ
ಎಲ್ಲಿಂದ ಬಂತೋ, ನದಿಯಿಂದಲೋ, ಚಳಿಯಿಂದಲೋ,
ಹೇಗೆ ಬಂತೋ ಯಾವಾಗ ಬಂತೋ ಗೊತಿಲ್ಲ.
ದಿನಗಳಿರಲಿಲ್ಲ, ಶಬ್ಬಗಳಿರಲಿಲ್ಲ, ನಿಶ್ಯಬ್ದವಿರಲಿಲ್ಲ.
ಬೀದಿಯಲ್ಲಿದ್ದ ನನ್ನನ್ನು ಕರೆಯಿತು.
ಕತ್ತಲ ಕೊಂಬೆಗೆ ಜೋತುಬಿದ್ದವನನ್ನು,
ಬೆಂಕಿಯುರಿಯಲ್ಲಿದ್ದವನನ್ನು,
ಒಬ್ಬನೇ ವಾಪಸ್ಸು ಹೋಗುತ್ತಿದ್ದವನನ್ನು,
ಸಾವಿರ ಜನರಲ್ಲಿ ಒಬ್ಬನಾಗಿ ಮುಖವಿಲ್ಲದಿದ್ದವನನ್ನು,
ಕರೆದು ಮೈದಡವಿತು.

ಏನು ಹೇಳಲಿ? ತಿಳಿಯಲಿಲ್ಲ,
ನಾಲಗೆಯಲ್ಲಿಶಬ್ದವಿರಲಿಲ್ಲ, ಕಣ್ಣಲ್ಲಿ ಬೆಳಕಿರಲಿಲ್ಲ.
ಜ್ವರವೋ, ಹಾರಲು ಮರೆತ ರೆಕ್ಕೆಗಳೋ
ನನ್ನ ಮನಸ್ಸಿನೊಳಗೇನೋ ಚಲನೆ.

ಒಳಗಿನ ಕಿಡಿಯ ಬೆಳಕಿನಲ್ಲಿ
ಒಂದಿಷ್ಟು ದಾರಿಮಾಡಿಕೊಂಡೆ.
ಮೊದಲ ಸಾಲು ಬರೆದೆ.
ಅಸ್ಪಷ್ಟ, ಅರ್ಥಹೀನ, ಅಶಕ್ತಸಾಲು,
ಏನೇನೂ ಗೊತ್ತಿಲ್ಲದವನ
ಶುದ್ಧ ವ್ಯರ್‍ಥಾಲಾಪ, ಶುದ್ಧ ಜ್ಞಾನ.

ತಟ್ಟನೆ ಆಕಾಶದ ಚಿಲಕ ತೆಗೆದು
ಗ್ರಹ ತಾರೆಗಳು ಮೈದೆರೆದು
ಸುತ್ತಿಕೊಂಡ ಕತ್ತಲಲ್ಲಿ
ಜಗದ ಮೇಲೆ
ಬಾಣ, ಬೆಂಕಿ, ಹೂಗಳ ಒಗಟು ತೂರುವ
ನೆರಳ ರಂಧ್ರಗಳು.
ನಾನು, ಅಣುವಿನಣುವಿನಣುವಾದ ನಾನು
ನಕ್ಷತ್ರ ಖಚಿತ ಮಹಾ ಶೂನ್ಯವನ್ನು
ಅಗಾಧ ರಹಸ್ಯದ ಬಿಂಬವನ್ನು ಹೀರಿ
ಪರಿಶುದ್ಧ ಬಯಲ ಅಂಶವಾಗಿ
ನಕ್ಷತ್ರಗಳೊಡನೆ ಹೊರಳಿದೆ.
ನನ್ನೆದೆ ಭಾವ ಗಾಳಿಯೊಡನೆ ತೇಲಿತು.
*****
ಮೂಲ: ಪಾಬ್ಲೋ ನೆರುಡಾ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಸಿಲ ಕಾಲವು ಬಂದಿತೆ ?
Next post ವಿಧಾನಸೌಧ ಎಂಬ ಮಾಯಾಬಜಾರ್

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…