ಕಾವ್ಯ

ಅನಾದಿಯ ವಯಸ್ಸಲ್ಲಿ ಒಮ್ಮೆ
ಕಾವ್ಯ ಬಂದಿತ್ತು ನನ್ನನ್ನು ಹುಡುಕಿಕೊಂಡು.
ಗೊತಿಲ್ಲ, ನನಗೆ ಗೊತಿಲ್ಲ
ಎಲ್ಲಿಂದ ಬಂತೋ, ನದಿಯಿಂದಲೋ, ಚಳಿಯಿಂದಲೋ,
ಹೇಗೆ ಬಂತೋ ಯಾವಾಗ ಬಂತೋ ಗೊತಿಲ್ಲ.
ದಿನಗಳಿರಲಿಲ್ಲ, ಶಬ್ಬಗಳಿರಲಿಲ್ಲ, ನಿಶ್ಯಬ್ದವಿರಲಿಲ್ಲ.
ಬೀದಿಯಲ್ಲಿದ್ದ ನನ್ನನ್ನು ಕರೆಯಿತು.
ಕತ್ತಲ ಕೊಂಬೆಗೆ ಜೋತುಬಿದ್ದವನನ್ನು,
ಬೆಂಕಿಯುರಿಯಲ್ಲಿದ್ದವನನ್ನು,
ಒಬ್ಬನೇ ವಾಪಸ್ಸು ಹೋಗುತ್ತಿದ್ದವನನ್ನು,
ಸಾವಿರ ಜನರಲ್ಲಿ ಒಬ್ಬನಾಗಿ ಮುಖವಿಲ್ಲದಿದ್ದವನನ್ನು,
ಕರೆದು ಮೈದಡವಿತು.

ಏನು ಹೇಳಲಿ? ತಿಳಿಯಲಿಲ್ಲ,
ನಾಲಗೆಯಲ್ಲಿಶಬ್ದವಿರಲಿಲ್ಲ, ಕಣ್ಣಲ್ಲಿ ಬೆಳಕಿರಲಿಲ್ಲ.
ಜ್ವರವೋ, ಹಾರಲು ಮರೆತ ರೆಕ್ಕೆಗಳೋ
ನನ್ನ ಮನಸ್ಸಿನೊಳಗೇನೋ ಚಲನೆ.

ಒಳಗಿನ ಕಿಡಿಯ ಬೆಳಕಿನಲ್ಲಿ
ಒಂದಿಷ್ಟು ದಾರಿಮಾಡಿಕೊಂಡೆ.
ಮೊದಲ ಸಾಲು ಬರೆದೆ.
ಅಸ್ಪಷ್ಟ, ಅರ್ಥಹೀನ, ಅಶಕ್ತಸಾಲು,
ಏನೇನೂ ಗೊತ್ತಿಲ್ಲದವನ
ಶುದ್ಧ ವ್ಯರ್‍ಥಾಲಾಪ, ಶುದ್ಧ ಜ್ಞಾನ.

ತಟ್ಟನೆ ಆಕಾಶದ ಚಿಲಕ ತೆಗೆದು
ಗ್ರಹ ತಾರೆಗಳು ಮೈದೆರೆದು
ಸುತ್ತಿಕೊಂಡ ಕತ್ತಲಲ್ಲಿ
ಜಗದ ಮೇಲೆ
ಬಾಣ, ಬೆಂಕಿ, ಹೂಗಳ ಒಗಟು ತೂರುವ
ನೆರಳ ರಂಧ್ರಗಳು.
ನಾನು, ಅಣುವಿನಣುವಿನಣುವಾದ ನಾನು
ನಕ್ಷತ್ರ ಖಚಿತ ಮಹಾ ಶೂನ್ಯವನ್ನು
ಅಗಾಧ ರಹಸ್ಯದ ಬಿಂಬವನ್ನು ಹೀರಿ
ಪರಿಶುದ್ಧ ಬಯಲ ಅಂಶವಾಗಿ
ನಕ್ಷತ್ರಗಳೊಡನೆ ಹೊರಳಿದೆ.
ನನ್ನೆದೆ ಭಾವ ಗಾಳಿಯೊಡನೆ ತೇಲಿತು.
*****
ಮೂಲ: ಪಾಬ್ಲೋ ನೆರುಡಾ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಸಿಲ ಕಾಲವು ಬಂದಿತೆ ?
Next post ವಿಧಾನಸೌಧ ಎಂಬ ಮಾಯಾಬಜಾರ್

ಸಣ್ಣ ಕತೆ

  • ರಾಜಕೀಯ ಮುಖಂಡರು

    ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…