Home / ಕವನ / ಅನುವಾದ / ಕಾವ್ಯ

ಕಾವ್ಯ

ಅನಾದಿಯ ವಯಸ್ಸಲ್ಲಿ ಒಮ್ಮೆ
ಕಾವ್ಯ ಬಂದಿತ್ತು ನನ್ನನ್ನು ಹುಡುಕಿಕೊಂಡು.
ಗೊತಿಲ್ಲ, ನನಗೆ ಗೊತಿಲ್ಲ
ಎಲ್ಲಿಂದ ಬಂತೋ, ನದಿಯಿಂದಲೋ, ಚಳಿಯಿಂದಲೋ,
ಹೇಗೆ ಬಂತೋ ಯಾವಾಗ ಬಂತೋ ಗೊತಿಲ್ಲ.
ದಿನಗಳಿರಲಿಲ್ಲ, ಶಬ್ಬಗಳಿರಲಿಲ್ಲ, ನಿಶ್ಯಬ್ದವಿರಲಿಲ್ಲ.
ಬೀದಿಯಲ್ಲಿದ್ದ ನನ್ನನ್ನು ಕರೆಯಿತು.
ಕತ್ತಲ ಕೊಂಬೆಗೆ ಜೋತುಬಿದ್ದವನನ್ನು,
ಬೆಂಕಿಯುರಿಯಲ್ಲಿದ್ದವನನ್ನು,
ಒಬ್ಬನೇ ವಾಪಸ್ಸು ಹೋಗುತ್ತಿದ್ದವನನ್ನು,
ಸಾವಿರ ಜನರಲ್ಲಿ ಒಬ್ಬನಾಗಿ ಮುಖವಿಲ್ಲದಿದ್ದವನನ್ನು,
ಕರೆದು ಮೈದಡವಿತು.

ಏನು ಹೇಳಲಿ? ತಿಳಿಯಲಿಲ್ಲ,
ನಾಲಗೆಯಲ್ಲಿಶಬ್ದವಿರಲಿಲ್ಲ, ಕಣ್ಣಲ್ಲಿ ಬೆಳಕಿರಲಿಲ್ಲ.
ಜ್ವರವೋ, ಹಾರಲು ಮರೆತ ರೆಕ್ಕೆಗಳೋ
ನನ್ನ ಮನಸ್ಸಿನೊಳಗೇನೋ ಚಲನೆ.

ಒಳಗಿನ ಕಿಡಿಯ ಬೆಳಕಿನಲ್ಲಿ
ಒಂದಿಷ್ಟು ದಾರಿಮಾಡಿಕೊಂಡೆ.
ಮೊದಲ ಸಾಲು ಬರೆದೆ.
ಅಸ್ಪಷ್ಟ, ಅರ್ಥಹೀನ, ಅಶಕ್ತಸಾಲು,
ಏನೇನೂ ಗೊತ್ತಿಲ್ಲದವನ
ಶುದ್ಧ ವ್ಯರ್‍ಥಾಲಾಪ, ಶುದ್ಧ ಜ್ಞಾನ.

ತಟ್ಟನೆ ಆಕಾಶದ ಚಿಲಕ ತೆಗೆದು
ಗ್ರಹ ತಾರೆಗಳು ಮೈದೆರೆದು
ಸುತ್ತಿಕೊಂಡ ಕತ್ತಲಲ್ಲಿ
ಜಗದ ಮೇಲೆ
ಬಾಣ, ಬೆಂಕಿ, ಹೂಗಳ ಒಗಟು ತೂರುವ
ನೆರಳ ರಂಧ್ರಗಳು.
ನಾನು, ಅಣುವಿನಣುವಿನಣುವಾದ ನಾನು
ನಕ್ಷತ್ರ ಖಚಿತ ಮಹಾ ಶೂನ್ಯವನ್ನು
ಅಗಾಧ ರಹಸ್ಯದ ಬಿಂಬವನ್ನು ಹೀರಿ
ಪರಿಶುದ್ಧ ಬಯಲ ಅಂಶವಾಗಿ
ನಕ್ಷತ್ರಗಳೊಡನೆ ಹೊರಳಿದೆ.
ನನ್ನೆದೆ ಭಾವ ಗಾಳಿಯೊಡನೆ ತೇಲಿತು.
*****
ಮೂಲ: ಪಾಬ್ಲೋ ನೆರುಡಾ

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...