Home / ಲೇಖನ / ವಿಜ್ಞಾನ / ಮುಂಬರುವ ಕಾಯಿಲೆ ತಿಳಿಸುವ ಚಿಪ್

ಮುಂಬರುವ ಕಾಯಿಲೆ ತಿಳಿಸುವ ಚಿಪ್

ಮುಂಬರುವ ಕಾಯಿಲೆ ಯಾವುದೆಂಬುಂದನ್ನು ತಿಳಿದರೆ ಅದರ ಹುಟ್ಟನ್ನು ಅಡಗಿಸಬಹುದು ಅಥವಾ ಮುನ್ನಚ್ಚರಿಕೆಯ ಕ್ರಮವನ್ನು ಅನುಸರಿಸಿ ಯಾವುದೇ ಕಾಯಿಲೆ ಬರದಂತೆ ನೋಡಿಕೊಳ್ಳಬಹುದು. ಈ ವ್ಯವಸ್ಥೆ ಇದುವರೆಗೆ ಲಭ್ಯವಿರಲಿಲ್ಲ. ಆದರೆ ಸದ್ಯದಲ್ಲಿಯೇ ಮುಂಬರುವ ಕಾಯಿಲೆಯನ್ನು ಕಂಡು ಹಿಡಿಯಬಲ್ಲ ಕಂಪ್ಯೂಟರ್ ಚಿಪ್‌ಗಳು ಬರಲಿವೆ. ವ್ಯಕ್ತಿಯ ಅಂಗಾಂಗದ ಒಂದು ಕೋಶ ಒಳಗೆ ಇರುವ ಜೀನ್ ಅನ್ನು ಪರೀಕ್ಷಿಸಿ ಮುಂದೆ ಕ್ಯಾನ್ಸರ್ ಬರಲಿದೆಯೇ, ಹೃದ್ರೋಗಕ್ಕೆ ಒಳಗಾಗುವ ಸಾಧ್ಯತೆಗಳಿವೆಯೇ? ಎಂದು ಈ ಚಿಪ್‌ನಿಂದ ನಿಖರವಾಗಿ ಹೇಳಬಹುದು.

ನಿರ್ದಿಷ್ಟ ಅನುಕ್ರಮದ D.N.A.ಎಳೆಯನ್ನು ಕಂಪ್ಯೂಟರ್ ಭಾಷೆಯಲ್ಲಿ ಈ ಚಿಪ್‌ನಲ್ಲಿ ಬರೆದಿಡಲಾಗುತ್ತದೆ. ದೇಹದ ಕೋಶ ಒಂದರಲ್ಲಿ ಇರುವ ಡಿ.ಎನ್.ಎ ಎಳೆಯನ್ನು ಅದರೊಂದಿಗೆ ಹೋಲಿಸಿ ನೋಡಿ, ಯಾವ ಜೀನ್ ನ್ಯೂನ್ಯತೆಯಿಂದ ಕೂಡಿದೆ, ಎಂದು ಕ್ಷಣಾರ್ಧದೊಳಗೆ ಕಂಡು ಹಿಡಿದು ಈ ಚಿಪ್‌ನ ಸಹಾಯದಿಂದ ಯಾವ ಕಾಯಿಲೆ ಬರುತ್ತದೆಂದು ತಿಳಿಯಬಹುದು. ಒಂದು ವೇಳೆ ದೇಹದಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾದರೆ ಅದು ಯಾವ ಹಂತದಲ್ಲಿದೆ. ದೇಹದ ಯಾವೆಲ್ಲ ಭಾಗಕ್ಕೆ ಈಗಾಗಲೇ ಹರಡಿದೆ? ಎಂಬುವುದು ಕ್ಯಾನ್ಸರ್‌ಗೆ ತುತ್ತಾದ ಕೋಶಗಳು ಕಾಯಿಲೆಗಳು ಗಂಭೀರತೆಗನುಗುಣವಾಗಿ ಬೆಳಕನ್ನು ಹೊರ ಸೂಸುವ
ಮೂಲಕ ತಿಳಿಸುತ್ತವೆ.

ಎಷ್ಟೊ ಸಲ ಕೆಲವೊಂದು ಕಾಯಿಲೆಗಳು ವೈದ್ಯರು ಪರೀಕ್ಷಿಸಿ ನೋಡಿ ಮದ್ದುಕೊಟ್ಟರೂ ಗುಣವಾಗದಿರುವುದು ಉಂಟು. ವೈದ್ಯರ ಪ್ರಕಾರ ಇದು ಸಾಮಾನ್ಯ ಕಾಯಿಲೆ ಆಗಿರಬಹುದು. ಆದರೆ ಅದು ಗುಣವಾಗದಿರುವುಕ್ಕೂ ದೇಹದ ಜೀನ್‌ಗಳಿಗೂ ಪರಸ್ಪರ ಸಂಬಂಧ ಇರುತ್ತದೆ. ಯಾವ ಜೀನ್ ನ್ಯೂನ್ಯತೆಗೊಳಗಾಗಿದೆ ಎಂದು ನಿಖರವಾಗಿ ಪತ್ತೆಹಚ್ಚಿ ಅದಕ್ಕನುಗುಣವಾಗಿ ಸೂಕ್ತ ಚಿಕಿತ್ಸೆ ಕೊಟ್ಟಾಗಲಷ್ಟೇ ಆ ವ್ಯಕ್ತಿ ಗುಣಮುಖವಾಗಲು ಸಾಧ್ಯ ಎಂದು ಕಂಡು ಹಿಡಿಯಲಾಗಿದೆ.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...