Home / ಲೇಖನ / ವಿಜ್ಞಾನ / ಮುಂಬರುವ ಕಾಯಿಲೆ ತಿಳಿಸುವ ಚಿಪ್

ಮುಂಬರುವ ಕಾಯಿಲೆ ತಿಳಿಸುವ ಚಿಪ್

ಮುಂಬರುವ ಕಾಯಿಲೆ ಯಾವುದೆಂಬುಂದನ್ನು ತಿಳಿದರೆ ಅದರ ಹುಟ್ಟನ್ನು ಅಡಗಿಸಬಹುದು ಅಥವಾ ಮುನ್ನಚ್ಚರಿಕೆಯ ಕ್ರಮವನ್ನು ಅನುಸರಿಸಿ ಯಾವುದೇ ಕಾಯಿಲೆ ಬರದಂತೆ ನೋಡಿಕೊಳ್ಳಬಹುದು. ಈ ವ್ಯವಸ್ಥೆ ಇದುವರೆಗೆ ಲಭ್ಯವಿರಲಿಲ್ಲ. ಆದರೆ ಸದ್ಯದಲ್ಲಿಯೇ ಮುಂಬರುವ ಕಾಯಿಲೆಯನ್ನು ಕಂಡು ಹಿಡಿಯಬಲ್ಲ ಕಂಪ್ಯೂಟರ್ ಚಿಪ್‌ಗಳು ಬರಲಿವೆ. ವ್ಯಕ್ತಿಯ ಅಂಗಾಂಗದ ಒಂದು ಕೋಶ ಒಳಗೆ ಇರುವ ಜೀನ್ ಅನ್ನು ಪರೀಕ್ಷಿಸಿ ಮುಂದೆ ಕ್ಯಾನ್ಸರ್ ಬರಲಿದೆಯೇ, ಹೃದ್ರೋಗಕ್ಕೆ ಒಳಗಾಗುವ ಸಾಧ್ಯತೆಗಳಿವೆಯೇ? ಎಂದು ಈ ಚಿಪ್‌ನಿಂದ ನಿಖರವಾಗಿ ಹೇಳಬಹುದು.

ನಿರ್ದಿಷ್ಟ ಅನುಕ್ರಮದ D.N.A.ಎಳೆಯನ್ನು ಕಂಪ್ಯೂಟರ್ ಭಾಷೆಯಲ್ಲಿ ಈ ಚಿಪ್‌ನಲ್ಲಿ ಬರೆದಿಡಲಾಗುತ್ತದೆ. ದೇಹದ ಕೋಶ ಒಂದರಲ್ಲಿ ಇರುವ ಡಿ.ಎನ್.ಎ ಎಳೆಯನ್ನು ಅದರೊಂದಿಗೆ ಹೋಲಿಸಿ ನೋಡಿ, ಯಾವ ಜೀನ್ ನ್ಯೂನ್ಯತೆಯಿಂದ ಕೂಡಿದೆ, ಎಂದು ಕ್ಷಣಾರ್ಧದೊಳಗೆ ಕಂಡು ಹಿಡಿದು ಈ ಚಿಪ್‌ನ ಸಹಾಯದಿಂದ ಯಾವ ಕಾಯಿಲೆ ಬರುತ್ತದೆಂದು ತಿಳಿಯಬಹುದು. ಒಂದು ವೇಳೆ ದೇಹದಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾದರೆ ಅದು ಯಾವ ಹಂತದಲ್ಲಿದೆ. ದೇಹದ ಯಾವೆಲ್ಲ ಭಾಗಕ್ಕೆ ಈಗಾಗಲೇ ಹರಡಿದೆ? ಎಂಬುವುದು ಕ್ಯಾನ್ಸರ್‌ಗೆ ತುತ್ತಾದ ಕೋಶಗಳು ಕಾಯಿಲೆಗಳು ಗಂಭೀರತೆಗನುಗುಣವಾಗಿ ಬೆಳಕನ್ನು ಹೊರ ಸೂಸುವ
ಮೂಲಕ ತಿಳಿಸುತ್ತವೆ.

ಎಷ್ಟೊ ಸಲ ಕೆಲವೊಂದು ಕಾಯಿಲೆಗಳು ವೈದ್ಯರು ಪರೀಕ್ಷಿಸಿ ನೋಡಿ ಮದ್ದುಕೊಟ್ಟರೂ ಗುಣವಾಗದಿರುವುದು ಉಂಟು. ವೈದ್ಯರ ಪ್ರಕಾರ ಇದು ಸಾಮಾನ್ಯ ಕಾಯಿಲೆ ಆಗಿರಬಹುದು. ಆದರೆ ಅದು ಗುಣವಾಗದಿರುವುಕ್ಕೂ ದೇಹದ ಜೀನ್‌ಗಳಿಗೂ ಪರಸ್ಪರ ಸಂಬಂಧ ಇರುತ್ತದೆ. ಯಾವ ಜೀನ್ ನ್ಯೂನ್ಯತೆಗೊಳಗಾಗಿದೆ ಎಂದು ನಿಖರವಾಗಿ ಪತ್ತೆಹಚ್ಚಿ ಅದಕ್ಕನುಗುಣವಾಗಿ ಸೂಕ್ತ ಚಿಕಿತ್ಸೆ ಕೊಟ್ಟಾಗಲಷ್ಟೇ ಆ ವ್ಯಕ್ತಿ ಗುಣಮುಖವಾಗಲು ಸಾಧ್ಯ ಎಂದು ಕಂಡು ಹಿಡಿಯಲಾಗಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...