ಪುಸ್ತಕ ಪ್ರೀತಿ

ಪುಸ್ತಕ ಪ್ರೀತಿ

ಚಿತ್ರ: ಅಲೆಕ್ಸಾಂಡರ್‍ ಸ್ಟಾಕ್ಮಾರ್‍

ಪ್ರಿಯ ಸಖಿ,

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದಮಣಿ. ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಪುಸ್ತಕ ಜ್ಞಾನವು ಬಹಿರಂಗ ವ್ಯಾಪ್ತಿಯಲ್ಲಿ ಬರುವುದು. ಚಿಂತನೆ ಜನ್ಯವಾದ ಜ್ಞಾನವು ಅಂತರಂಗ ವ್ಯಾಪ್ತಿಯಾದುದು. ನಿಜವೇ ಆದರೆ ಚಿಂತನಶೀಲತೆ ಬೆಳೆಯುವುದು ಪುಸ್ತಕಗಳ ಸಂಪರ್ಕದಿಂದ. ಆದ್ದರಿಂದ ಪುಸ್ತಕಗಳ ಪ್ರಯೋಜನವು ಅಂತರಂಗ ಚೈತನ್ಯದ ಸಾಧನೆಗೆ ಮೊದಲ ಮೆಟ್ಟಿಲು ಎನ್ನಬಹುದು.

ಪುಸ್ತಕಗಳು ಹಲವಾರು ಮಹಾತ್ಮರ ಜೀವನವನ್ನು ರೂಪಿಸಿವೆ. ಹಲವರ ಬದುಕಿನಲ್ಲಿ ಪ್ರಭಾವ ಬೀರಿವೆ. ಕ್ರಾಂತಿಯುಂಟು ಮಾಡಿವೆ. ಬದಲಾವಣೆ ತಂದಿವೆ. ಹೊಸ ವಿಚಾರಗಳನ್ನು ಮೊಳೆಸಿವೆ, ಬೆಳೆಸಿವೆ. ಉತ್ತಮ ಪುಸ್ತಕವನ್ನು ಓದುವವರು ಇರುವವರೆಗೂ
ಈ ಪ್ರಕ್ರಿಯೆಗಳು ಸಾಗುತ್ತಿರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಓದುತ್ತಿರುವವರು ಕಡಿಮೆಯಾಗುತ್ತಿದ್ದಾರೆ ಎಂಬ ದೂರು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಇದಕ್ಕೆ ಹಲವಾರು ಕಾರಣಗಳೂ ಇವೆ.

ಬದಲಾದ ನಮ್ಮ ಜೀವನ ಶೈಲಿಯಿಂದ ಅವಸರದ ಈ ಯುಗದಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಹಾಗೇ ದೃಶ್ಯ ಮಾಧ್ಯಮಗಳ ಹಾವಳಿಯೂ ಈ ಹವ್ಯಾಸಕ್ಕೆ ನೇರ ಪೆಟ್ಟು ಕೊಟ್ಟಿದೆ. ಹಣವನ್ನು ಮಾಡುವುದೇ ಜೀವನದ ಪ್ರಮುಖ ಗುರಿಯೆಂಬ ಭೂತ ಮಿದುಳನ್ನು ಹೊಕ್ಕಂದಿನಿಂದ ಯಾವ ಹವ್ಯಾಸಗಳಿಗೂ ಈಗ ಜನರಿಗೆ ಬಿಡುವಿಲ್ಲ. ಫ್ಯಾಷನ್, ಐಷಾರಾಮದ ಬದುಕು, ಪಂಚತಾರಾ ಸಂಸ್ಕೃತಿಯೆಡೆಗೆ ಹೆಚ್ಚು ವಾಲುತ್ತಿರುವ ನಮಗೆ ಓದುವುದು, ಗಂಭೀರವಾಗಿ ಯೋಚಿಸುವುದು, ಚಿಂತಿಸುವುದು, ಓದಿದ್ದನ್ನು ಮನನ ಮಾಡುವುದು ಎಲ್ಲವೂ ಬೋರ್ ಎನ್ನಿಸುತ್ತದೆ.

ಪ್ರಿಯ ಸಖಿ, ಆದರೆ ಬೇರೆ ಯಾವ ಮಾಧ್ಯಮವೂ ನೀಡಲಾಗದಂತಹ ಸಂತೋಷವನ್ನು, ಆತ್ಮ ತೃಪ್ತಿಯನ್ನು ಪುಸ್ತಕದ ಓದು ನೀಡುತ್ತದೆ. ಉತ್ತಮ ಪುಸ್ತಕದ ಓದಿನಿಂದ ಮನಸ್ಸು ಅರಳುತ್ತದೆ. ಇದೇ ಓದಿನಿಂದ ನಮಗೆ ದೊರೆಯುವ ಪ್ರತಿಫಲ. ಹಾಗೇ ಎಲ್ಲ ಮಾಧ್ಯಮಗಳಿಗೂ ಮೂಲ ಪುಸ್ತಕಗಳೇ ಎನ್ನುವುದನ್ನು ನಾವು ಮರೆಯುವಂತಿಲ್ಲ. ಅಧ್ಯಾತ್ಮ, ಧಾರ್ಮಿಕ, ತಾತ್ವಿಕ, ಸಾಮಾಜಿಕ, ನೈತಿಕ, ಕೌಟುಂಬಿಕ,
ರಾಜಕೀಯ ಹೀಗೆ ಯಾವುದೇ ವಿಭಾಗದ ಪುಸ್ತಕವಿರಲಿ ಆ ಅಭಿರುಚಿಯಿರುವ ಓದುಗನಿಗೆ ನೆಮ್ಮದಿಯನ್ನು ನೀಡುತ್ತದೆ. ಹೊಸ ಬೆಳಕನ್ನು ಮೂಡಿಸುತ್ತದೆ.

ಸಖಿ, ಪುಸ್ತಕಕ್ಕೆ ಒಂದು ಜನಾಂಗದ ಕಣ್ಣು ತೆರೆಸುವ ಶಕ್ತಿಯಿದೆ. ಆದ್ದರಿಂದಲೇ ನಮ್ಮಲ್ಲಿ ಪುಸ್ತಕ ಪ್ರೀತಿ ಎಷ್ಟು ಬೇಗ ಮೊಳೆಯುತ್ತದೋ ಅಷ್ಟೂ ಒಳ್ಳೆಯದು. ಆ ಪ್ರೀತಿಯಿಂದ ನಾವು ಹೆಚ್ಚು ಹೆಚ್ಚು ಓದುವಂತಾಗಲಿ, ತಿಳಿಯುವಂತಾಗಲಿ, ಆರಳುವಂತಾಗಲಿ, ನೆಮ್ಮದಿ ಕಾಣುವಂತಾಗಲಿ.


Previous post ಹೊಳೆಸಾಲಿನ ಮರ
Next post ಸಂಸಾರ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

cheap jordans|wholesale air max|wholesale jordans|wholesale jewelry|wholesale jerseys