Home / ಕವನ / ಕವಿತೆ / ಹೊಳೆಸಾಲಿನ ಮರ

ಹೊಳೆಸಾಲಿನ ಮರ

ಹೊಳೆಸಾಲಿನ ಮರಕ್ಕೆ
ನಿಂತ ನೆಲವೇ ವರ ;
ಇಳಿಸುತ್ತದೆ ಬೇರನ್ನು
ಅಳಕ್ಕೆ, ಅಗಲಕ್ಕೆ
ನೀರಿನ ಯೋಚನೆ ಎಲ್ಲಿದೆ ಅದಕ್ಕೆ ?

ಹೊಳೆಸಾಲಿನ ಮರದ
ತಲೆತುಂಬ ಫಳಫಳ ಎಲೆ,
ಕೆಳಗೆ ನದಿಯುದ್ದ ಏರಿಳಿಯುವ
ಜುಳು ಜುಳು ಅಲೆ.
ನೀರಿನ ವಿಶಾಲ ಕನ್ನಡಿ
ಹೊಳೆಯುತ್ತ ಬಿದ್ದಿದೆ ಕೆಳಗಡೆ,
ಸೂರ್ಯ ಚಿಕ್ಕೆ ಚಂದ್ರಮರ ಬಿಂಬ
ಒರೆಸಿಟ್ಟಂತೆ ಅದರ ತುಂಬ;
ನಡುವೆ ದೊಡ್ಡದಾಗಿ ತನ್ನ ನೆರಳು
ಇದ್ದರೆ ಏನನಿಸಬೇಡ ಪಾಪ, ಮರುಳು !
ಆದರೂ ಗೊತ್ತಿದೆ ಮರಕ್ಕೆ
ಇದು ಅಯಾಚಿತ ಭಾಗ್ಯ;
ಹೇಳಿಕೊಳ್ಳುತ್ತದೆ ತನ್ನಲ್ಲೇ
ನಾನಲ್ಲ ಇದಕ್ಕೆ ಯೋಗ್ಯ.

ಹೊಳೆಸಾಲಿನ ಮರದ
ರೀತಿ ರಿವಾಜೇ ಬೇರೆ.
ಮೈ ತುಂಬ ಎಲೆ ಟಸಿಲು ಎದ್ದು
ಎಳೆ ಬಿಸಿಲಿನ ಬೆಚ್ಚನೆ ಶಾಲು ಹೊದ್ದು

ಎಲೆ ಎಲೆಯೂ ಹಕ್ಕಿ ದನಿ ಚಿಮ್ಮಿ
ಏನೋ ಮೋದ ನರನರದಲ್ಲೂ ಹೊಮ್ಮಿ
ಹೊಳೆ ಮೇಲಿನ ಗಾಳಿ
ಒಳಗೆಲ್ಲ ನುಗ್ಗಾಡಿ
ಮರಕ್ಕೆ ಮರವೇ ಬೀಗಿ
ತಾರಶ್ರುತಿಗೆ ಹಾಡಿ
ಆಗುತ್ತದೆ ಒಮ್ಮೊಮ್ಮೆ
ತುಳುಕುವ ಹಾಡಿನ ಕಿನ್ನರಿ
ನೋಡಲು ನೀವೂ ಒಮ್ಮೆ
ಹೊಳದಂಡೆಗೆ ಬನ್ನಿರಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...