Home / ಕವನ / ಕವಿತೆ / ಹೊಳೆಸಾಲಿನ ಮರ

ಹೊಳೆಸಾಲಿನ ಮರ

ಹೊಳೆಸಾಲಿನ ಮರಕ್ಕೆ
ನಿಂತ ನೆಲವೇ ವರ ;
ಇಳಿಸುತ್ತದೆ ಬೇರನ್ನು
ಅಳಕ್ಕೆ, ಅಗಲಕ್ಕೆ
ನೀರಿನ ಯೋಚನೆ ಎಲ್ಲಿದೆ ಅದಕ್ಕೆ ?

ಹೊಳೆಸಾಲಿನ ಮರದ
ತಲೆತುಂಬ ಫಳಫಳ ಎಲೆ,
ಕೆಳಗೆ ನದಿಯುದ್ದ ಏರಿಳಿಯುವ
ಜುಳು ಜುಳು ಅಲೆ.
ನೀರಿನ ವಿಶಾಲ ಕನ್ನಡಿ
ಹೊಳೆಯುತ್ತ ಬಿದ್ದಿದೆ ಕೆಳಗಡೆ,
ಸೂರ್ಯ ಚಿಕ್ಕೆ ಚಂದ್ರಮರ ಬಿಂಬ
ಒರೆಸಿಟ್ಟಂತೆ ಅದರ ತುಂಬ;
ನಡುವೆ ದೊಡ್ಡದಾಗಿ ತನ್ನ ನೆರಳು
ಇದ್ದರೆ ಏನನಿಸಬೇಡ ಪಾಪ, ಮರುಳು !
ಆದರೂ ಗೊತ್ತಿದೆ ಮರಕ್ಕೆ
ಇದು ಅಯಾಚಿತ ಭಾಗ್ಯ;
ಹೇಳಿಕೊಳ್ಳುತ್ತದೆ ತನ್ನಲ್ಲೇ
ನಾನಲ್ಲ ಇದಕ್ಕೆ ಯೋಗ್ಯ.

ಹೊಳೆಸಾಲಿನ ಮರದ
ರೀತಿ ರಿವಾಜೇ ಬೇರೆ.
ಮೈ ತುಂಬ ಎಲೆ ಟಸಿಲು ಎದ್ದು
ಎಳೆ ಬಿಸಿಲಿನ ಬೆಚ್ಚನೆ ಶಾಲು ಹೊದ್ದು

ಎಲೆ ಎಲೆಯೂ ಹಕ್ಕಿ ದನಿ ಚಿಮ್ಮಿ
ಏನೋ ಮೋದ ನರನರದಲ್ಲೂ ಹೊಮ್ಮಿ
ಹೊಳೆ ಮೇಲಿನ ಗಾಳಿ
ಒಳಗೆಲ್ಲ ನುಗ್ಗಾಡಿ
ಮರಕ್ಕೆ ಮರವೇ ಬೀಗಿ
ತಾರಶ್ರುತಿಗೆ ಹಾಡಿ
ಆಗುತ್ತದೆ ಒಮ್ಮೊಮ್ಮೆ
ತುಳುಕುವ ಹಾಡಿನ ಕಿನ್ನರಿ
ನೋಡಲು ನೀವೂ ಒಮ್ಮೆ
ಹೊಳದಂಡೆಗೆ ಬನ್ನಿರಿ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...