ಗಿಳಿಯ ಪುಣ್ಯ

ಗಿಳಿಯ ಪುಣ್ಯ

ಸುಮಾರು ಇನ್ನೂರು ವರ್‍ಷಗಳ ಹಿಂದಿನ ಕಥೆಯಿದು. ಬಲು ಸುಂದರ ನಾಡು ಕೇರಳದ ಕೊಚ್ಚಿನ್‌ನಲ್ಲಿ ಒಬ್ಬ ನಂಬೂದಿರಿ ಪಾಡ್ ವಾಸವಾಗಿದ್ದ.

ಈತ ಸರಳ ಸಜ್ಜನ ಉದಾರಿ ದಯಾಪರ ಸೌಮ್ಯ ವ್ಯಕ್ತಿಯಾಗಿದ್ದ. ಈತ ಒಂದು ಸುಂದರವಾದ ಗಿಳಿಯೊಂದನ್ನು ಸಾಕಿದ್ದ. ಈ ಗಿಳಿಯೊಂದಿಗೆ ಮೂರು ಹೊತ್ತು ಮಾತನಾಡುವುದು, ಕಾಲ ಕಳೆಯುವುದು, ಆಟ ಆಡುತ್ತಾ ಕಾಲ ಕಳೆಯುತ್ತಿದ್ದ.

ಗಿಳಿಯು ಮಾತನಾಡುವುದನ್ನು ಕೇಳಿ, ಹಾಡುವುದನ್ನು ಕೇಳಿ ನಲಿನಲಿದಾಡುವುದನ್ನು ಕಂಡು, ಮನೆಯ ಯಜಮಾನನೇನು ನೆರೆಹೊರೆಯವರೂ ಗಿಳಿಯ ವರ್‍ತನೆಗೆ ಮಾರು ಹೋಗಿದ್ದರು.

ಗಿಳಿಯನ್ನು ಬಿಟ್ಟು ಮನೆಯವರು, ಮನೆಯವರನ್ನು ಬಿಟ್ಟು ಗಿಳಿಯು ಅರೆಘಳಿಗೆ ಇರುತ್ತಿರಲಿಲ್ಲ. ಗಿಳಿಗೆ ನಿತ್ಯ ಬಾಳೆಹಣ್ಣು, ದ್ರಾಕ್ಷಿ, ಸೇಬು, ಸೀಬೆ, ಸಪೋಟ, ಮೂಸಂಬಿ, ಕಿತ್ತಲೆ, ಮಾವು, ಹಲಸು…. ಹೀಗೆ ನಾನಾ ತರತರದ ಹಣ್ಣುಹಂಪಲು ನೀರು ಇತ್ತು ಅದನ್ನು ಕಣ್ಣಲ್ಲಿ ಕಣ್ಣಿಟ್ಟು ಎಲ್ಲರೂ ನೋಡಿಕೊಳ್ಳುತ್ತಿದ್ದರು.

ಹೀಗಿರಲಾಗಿ… ಒಂದು ದಿನ ಕಳ್ಳಬೆಕ್ಕೊಂದು ಉಪಾಯ ಮಾಡಿ ಮುದ್ದಿನ ಸುಂದರವಾದ ಗಿಳಿಯನ್ನು ರಾತ್ರೋರಾತ್ರಿ ಕೊಂದು ತಿಂದುಬಿಟ್ಟಿತು. ಮನೆಯ ಯಜಮಾನ ನಂಬೂದಿರಿ ಪಾಡ್ ಮೊದಲುಗೊಂಡು ಮನೆಯ ಜನರೂ ನೆರೆಹೊರೆಯವರೂ ಅತ್ತರು. ಕಳ್ಳ ಬೆಕ್ಕನ್ನು ಜಗ್ಗ ಶಪಿಸಿದರು. “ಚೆಂದದಿ ಅಂದದಿ ಸಾಕಿದ್ದ ಗಿಳಿಯನ್ನು ಕಳ್ಳ ಬೆಕ್ಕಿಗೆ ಕೊಟ್ಟು ಬಿಟ್ಟೆವಲ್ಲಾ….?” ಎಂದು ಎರಡು ಮೂರು ದಿನ ರೋಧಿಸಿದರು.

ಆ ಗಿಳಿಯ ಹೆಸರಿನಲ್ಲಿ ಸಂತಾಪಸಭೆ ಜರುಗಿಸಿದರು. ಮೂರು ದಿನದ ತಿಥಿ, ಹಾಗೂ ಶ್ರಾದ್ಧವನ್ನು ಹಮ್ಮಿಕೊಂಡರು. ಶಾಸ್ತ್ರೋಕ್ತವಾಗಿ ಗಿಳಿಗೆ ವಿಧಿವಿಧಾನದಂತೆ ೧೬ ಜನ ಬ್ರಾಹ್ಮಣರಿಗೆ ಊಟ ಬಡಿಸಿದರು.

ಇದು ಪ್ರತಿ ವರ್‍ಷ ಗಿಳಿಯ ಹೆಸರಿನಲ್ಲಿ ಶ್ರಾದ್ಧ ಏರ್‍ಪಡಿಸಿ ಊಟ ಬಡಿಸುವ ಪರಂಪರೆ, ಸಂಪ್ರದಾಯ, ವಿಧಿವಿಧಾನ ಇಂದಿಗೂ ಮುಂದುವರೆದು ಕೊಂಡು ಬಂದಿದೆ.

ಗಿಳಿ ಶ್ರಾದ್ಧವನ್ನು ಇಂದಿಗೂ ಕೈಬಿಟ್ಟಿಲ್ಲ. ಈಗ ಎರಡು ಜನ ಬ್ರಾಹ್ಮಣರಿಗೆ ಮಾತ್ರ ಊಟ ಬಡಿಸುವ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿರುವರು.

ಪ್ರಾಣಿ-ಪಕ್ಷಿ-ಮನುಷ್ಯರೆಲ್ಲ ಒಂದೇ! ಮಾನವೀಯ ಸಂಬಂಧ ಮುಖ್ಯ ಅಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಫಲ
Next post ಈದ್ ಮುಬಾರಕ್

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…