Home / ಲೇಖನ / ಇತರೆ / ಗಿಳಿಯ ಪುಣ್ಯ

ಗಿಳಿಯ ಪುಣ್ಯ

ಸುಮಾರು ಇನ್ನೂರು ವರ್‍ಷಗಳ ಹಿಂದಿನ ಕಥೆಯಿದು. ಬಲು ಸುಂದರ ನಾಡು ಕೇರಳದ ಕೊಚ್ಚಿನ್‌ನಲ್ಲಿ ಒಬ್ಬ ನಂಬೂದಿರಿ ಪಾಡ್ ವಾಸವಾಗಿದ್ದ.

ಈತ ಸರಳ ಸಜ್ಜನ ಉದಾರಿ ದಯಾಪರ ಸೌಮ್ಯ ವ್ಯಕ್ತಿಯಾಗಿದ್ದ. ಈತ ಒಂದು ಸುಂದರವಾದ ಗಿಳಿಯೊಂದನ್ನು ಸಾಕಿದ್ದ. ಈ ಗಿಳಿಯೊಂದಿಗೆ ಮೂರು ಹೊತ್ತು ಮಾತನಾಡುವುದು, ಕಾಲ ಕಳೆಯುವುದು, ಆಟ ಆಡುತ್ತಾ ಕಾಲ ಕಳೆಯುತ್ತಿದ್ದ.

ಗಿಳಿಯು ಮಾತನಾಡುವುದನ್ನು ಕೇಳಿ, ಹಾಡುವುದನ್ನು ಕೇಳಿ ನಲಿನಲಿದಾಡುವುದನ್ನು ಕಂಡು, ಮನೆಯ ಯಜಮಾನನೇನು ನೆರೆಹೊರೆಯವರೂ ಗಿಳಿಯ ವರ್‍ತನೆಗೆ ಮಾರು ಹೋಗಿದ್ದರು.

ಗಿಳಿಯನ್ನು ಬಿಟ್ಟು ಮನೆಯವರು, ಮನೆಯವರನ್ನು ಬಿಟ್ಟು ಗಿಳಿಯು ಅರೆಘಳಿಗೆ ಇರುತ್ತಿರಲಿಲ್ಲ. ಗಿಳಿಗೆ ನಿತ್ಯ ಬಾಳೆಹಣ್ಣು, ದ್ರಾಕ್ಷಿ, ಸೇಬು, ಸೀಬೆ, ಸಪೋಟ, ಮೂಸಂಬಿ, ಕಿತ್ತಲೆ, ಮಾವು, ಹಲಸು…. ಹೀಗೆ ನಾನಾ ತರತರದ ಹಣ್ಣುಹಂಪಲು ನೀರು ಇತ್ತು ಅದನ್ನು ಕಣ್ಣಲ್ಲಿ ಕಣ್ಣಿಟ್ಟು ಎಲ್ಲರೂ ನೋಡಿಕೊಳ್ಳುತ್ತಿದ್ದರು.

ಹೀಗಿರಲಾಗಿ… ಒಂದು ದಿನ ಕಳ್ಳಬೆಕ್ಕೊಂದು ಉಪಾಯ ಮಾಡಿ ಮುದ್ದಿನ ಸುಂದರವಾದ ಗಿಳಿಯನ್ನು ರಾತ್ರೋರಾತ್ರಿ ಕೊಂದು ತಿಂದುಬಿಟ್ಟಿತು. ಮನೆಯ ಯಜಮಾನ ನಂಬೂದಿರಿ ಪಾಡ್ ಮೊದಲುಗೊಂಡು ಮನೆಯ ಜನರೂ ನೆರೆಹೊರೆಯವರೂ ಅತ್ತರು. ಕಳ್ಳ ಬೆಕ್ಕನ್ನು ಜಗ್ಗ ಶಪಿಸಿದರು. “ಚೆಂದದಿ ಅಂದದಿ ಸಾಕಿದ್ದ ಗಿಳಿಯನ್ನು ಕಳ್ಳ ಬೆಕ್ಕಿಗೆ ಕೊಟ್ಟು ಬಿಟ್ಟೆವಲ್ಲಾ….?” ಎಂದು ಎರಡು ಮೂರು ದಿನ ರೋಧಿಸಿದರು.

ಆ ಗಿಳಿಯ ಹೆಸರಿನಲ್ಲಿ ಸಂತಾಪಸಭೆ ಜರುಗಿಸಿದರು. ಮೂರು ದಿನದ ತಿಥಿ, ಹಾಗೂ ಶ್ರಾದ್ಧವನ್ನು ಹಮ್ಮಿಕೊಂಡರು. ಶಾಸ್ತ್ರೋಕ್ತವಾಗಿ ಗಿಳಿಗೆ ವಿಧಿವಿಧಾನದಂತೆ ೧೬ ಜನ ಬ್ರಾಹ್ಮಣರಿಗೆ ಊಟ ಬಡಿಸಿದರು.

ಇದು ಪ್ರತಿ ವರ್‍ಷ ಗಿಳಿಯ ಹೆಸರಿನಲ್ಲಿ ಶ್ರಾದ್ಧ ಏರ್‍ಪಡಿಸಿ ಊಟ ಬಡಿಸುವ ಪರಂಪರೆ, ಸಂಪ್ರದಾಯ, ವಿಧಿವಿಧಾನ ಇಂದಿಗೂ ಮುಂದುವರೆದು ಕೊಂಡು ಬಂದಿದೆ.

ಗಿಳಿ ಶ್ರಾದ್ಧವನ್ನು ಇಂದಿಗೂ ಕೈಬಿಟ್ಟಿಲ್ಲ. ಈಗ ಎರಡು ಜನ ಬ್ರಾಹ್ಮಣರಿಗೆ ಮಾತ್ರ ಊಟ ಬಡಿಸುವ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿರುವರು.

ಪ್ರಾಣಿ-ಪಕ್ಷಿ-ಮನುಷ್ಯರೆಲ್ಲ ಒಂದೇ! ಮಾನವೀಯ ಸಂಬಂಧ ಮುಖ್ಯ ಅಲ್ಲವೇ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...