Home / ಲೇಖನ / ಇತರೆ / ಗಿಳಿಯ ಪುಣ್ಯ

ಗಿಳಿಯ ಪುಣ್ಯ

ಸುಮಾರು ಇನ್ನೂರು ವರ್‍ಷಗಳ ಹಿಂದಿನ ಕಥೆಯಿದು. ಬಲು ಸುಂದರ ನಾಡು ಕೇರಳದ ಕೊಚ್ಚಿನ್‌ನಲ್ಲಿ ಒಬ್ಬ ನಂಬೂದಿರಿ ಪಾಡ್ ವಾಸವಾಗಿದ್ದ.

ಈತ ಸರಳ ಸಜ್ಜನ ಉದಾರಿ ದಯಾಪರ ಸೌಮ್ಯ ವ್ಯಕ್ತಿಯಾಗಿದ್ದ. ಈತ ಒಂದು ಸುಂದರವಾದ ಗಿಳಿಯೊಂದನ್ನು ಸಾಕಿದ್ದ. ಈ ಗಿಳಿಯೊಂದಿಗೆ ಮೂರು ಹೊತ್ತು ಮಾತನಾಡುವುದು, ಕಾಲ ಕಳೆಯುವುದು, ಆಟ ಆಡುತ್ತಾ ಕಾಲ ಕಳೆಯುತ್ತಿದ್ದ.

ಗಿಳಿಯು ಮಾತನಾಡುವುದನ್ನು ಕೇಳಿ, ಹಾಡುವುದನ್ನು ಕೇಳಿ ನಲಿನಲಿದಾಡುವುದನ್ನು ಕಂಡು, ಮನೆಯ ಯಜಮಾನನೇನು ನೆರೆಹೊರೆಯವರೂ ಗಿಳಿಯ ವರ್‍ತನೆಗೆ ಮಾರು ಹೋಗಿದ್ದರು.

ಗಿಳಿಯನ್ನು ಬಿಟ್ಟು ಮನೆಯವರು, ಮನೆಯವರನ್ನು ಬಿಟ್ಟು ಗಿಳಿಯು ಅರೆಘಳಿಗೆ ಇರುತ್ತಿರಲಿಲ್ಲ. ಗಿಳಿಗೆ ನಿತ್ಯ ಬಾಳೆಹಣ್ಣು, ದ್ರಾಕ್ಷಿ, ಸೇಬು, ಸೀಬೆ, ಸಪೋಟ, ಮೂಸಂಬಿ, ಕಿತ್ತಲೆ, ಮಾವು, ಹಲಸು…. ಹೀಗೆ ನಾನಾ ತರತರದ ಹಣ್ಣುಹಂಪಲು ನೀರು ಇತ್ತು ಅದನ್ನು ಕಣ್ಣಲ್ಲಿ ಕಣ್ಣಿಟ್ಟು ಎಲ್ಲರೂ ನೋಡಿಕೊಳ್ಳುತ್ತಿದ್ದರು.

ಹೀಗಿರಲಾಗಿ… ಒಂದು ದಿನ ಕಳ್ಳಬೆಕ್ಕೊಂದು ಉಪಾಯ ಮಾಡಿ ಮುದ್ದಿನ ಸುಂದರವಾದ ಗಿಳಿಯನ್ನು ರಾತ್ರೋರಾತ್ರಿ ಕೊಂದು ತಿಂದುಬಿಟ್ಟಿತು. ಮನೆಯ ಯಜಮಾನ ನಂಬೂದಿರಿ ಪಾಡ್ ಮೊದಲುಗೊಂಡು ಮನೆಯ ಜನರೂ ನೆರೆಹೊರೆಯವರೂ ಅತ್ತರು. ಕಳ್ಳ ಬೆಕ್ಕನ್ನು ಜಗ್ಗ ಶಪಿಸಿದರು. “ಚೆಂದದಿ ಅಂದದಿ ಸಾಕಿದ್ದ ಗಿಳಿಯನ್ನು ಕಳ್ಳ ಬೆಕ್ಕಿಗೆ ಕೊಟ್ಟು ಬಿಟ್ಟೆವಲ್ಲಾ….?” ಎಂದು ಎರಡು ಮೂರು ದಿನ ರೋಧಿಸಿದರು.

ಆ ಗಿಳಿಯ ಹೆಸರಿನಲ್ಲಿ ಸಂತಾಪಸಭೆ ಜರುಗಿಸಿದರು. ಮೂರು ದಿನದ ತಿಥಿ, ಹಾಗೂ ಶ್ರಾದ್ಧವನ್ನು ಹಮ್ಮಿಕೊಂಡರು. ಶಾಸ್ತ್ರೋಕ್ತವಾಗಿ ಗಿಳಿಗೆ ವಿಧಿವಿಧಾನದಂತೆ ೧೬ ಜನ ಬ್ರಾಹ್ಮಣರಿಗೆ ಊಟ ಬಡಿಸಿದರು.

ಇದು ಪ್ರತಿ ವರ್‍ಷ ಗಿಳಿಯ ಹೆಸರಿನಲ್ಲಿ ಶ್ರಾದ್ಧ ಏರ್‍ಪಡಿಸಿ ಊಟ ಬಡಿಸುವ ಪರಂಪರೆ, ಸಂಪ್ರದಾಯ, ವಿಧಿವಿಧಾನ ಇಂದಿಗೂ ಮುಂದುವರೆದು ಕೊಂಡು ಬಂದಿದೆ.

ಗಿಳಿ ಶ್ರಾದ್ಧವನ್ನು ಇಂದಿಗೂ ಕೈಬಿಟ್ಟಿಲ್ಲ. ಈಗ ಎರಡು ಜನ ಬ್ರಾಹ್ಮಣರಿಗೆ ಮಾತ್ರ ಊಟ ಬಡಿಸುವ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿರುವರು.

ಪ್ರಾಣಿ-ಪಕ್ಷಿ-ಮನುಷ್ಯರೆಲ್ಲ ಒಂದೇ! ಮಾನವೀಯ ಸಂಬಂಧ ಮುಖ್ಯ ಅಲ್ಲವೇ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...