ಸಫಲ

‘ನಮ್ಮ ಸೊಡರನುರಿಸುವಿರೇಂ
ಮಿಣುಕಲಿಂತು ಬರಿಯೆ?
ಪರರ ಬೆಳಕನಳುಪುವಿರೇಂ?
ಸುಡದೆ ನಿಮ್ಮ ಗರಿಯೆ?’-
ಜಂಕಿಸಿತಿಂತುಡು ಸಂಕುಳ
ಹೊಂಚುವ ಮಿಂಚುಹುಳಂಗಳ
ಬೇಸಗೆ ಕೊನೆವರಿಯೆ. ೭

‘ಕುರುಡಾದಿರೆ ಬೆಳಕಿನಿಂದ?
ನಿಮ್ಮ ಬೆಳಕಿದಲ್ಲ;
ನಿಮಗೆತ್ತಣಿನತ್ತಣಿಂದ
ನಮಗಿದು ಬಂತಲ್ಲ?
ಹಿರಿದು ಕಿರಿದು ಬೆಳಕಿಗಿಲ್ಲ.
ಪರರ ಬೆಳಕು ತನಗೆ ಸಲ್ಲ-
ಬೆಳಕು ಸಫಲವೆಲ್ಲ’ ೧೪

‘ಹಾಡುವಿರೇನೆಮ್ಮ ಹಾಡ
ಕಿರಿಚಲಿಂತು ಬರಿಯೆ?
ಹಿರಿಯ ಮರುಳು ಕೊಳದೆ ಸೇಡ
ಕಿರಿಯ ಗರಿಯ ಬಿರಿಯೆ?’-
ಜರೆದುದಿಂತು ತೆರೆಯ ದಳಂ
ಪಲ್ಲನಿಸುವ ಝಿಲ್ಲಿಗಳಂ
ಮೊದಲ ಮುಗಿಲ್ಗರೆಯೆ. ೨೧

‘ಕಿವುಡಾದಿರೆ ಹಾಡಿನಿಂದ?
ನಿಮ್ಮ ಹಾಡಿದಲ್ಲ;
ನಿಮಗೆತ್ತಣಿನತ್ತಣಿಂದ
ನಮಗಿದು ಬಂತಲ್ಲ?
ಹಿರಿದು ಕಿರಿದು ಹಾಡಿಗಿಲ್ಲ,
ಪರರ ಹಾಡು ತನಗೆ ಸಲ್ಲ-
ಹಾಡು ಸಫಲವೆಲ್ಲ. ೨೮

ಮಿಂಚಿನ ಮರಿ ಮುಂಚಿ ಮೆರಸೆ
ಹೃದಯ ಶಿಖೆಯ ಹೊನ್ನ,
ಗುಡುಗಿನ ಮಗು ಮುಡುಗಿ ಮೊರಸೆ
ಕಿನ್ನರಿಗರಿಯನ್ನ,
ಹತ್ತೆ ಹತ್ತೆಯುರುಳೆ ಮೊಳಗು,
ಸುತ್ತು ಸುತ್ತು ಕುರುಳೆ ತೊಳಗು,
ಬೆಳೆಯಿತು ಮಳೆ ಮುನ್ನ ೩೫

೧ಆಟಿಯ ನಟ್ಟಿರುಳೊಳಂದು
ಬೀಸುವ ಮಳೆಯಲ್ಲಿ,
ಬಾನವೆ ತಾನೊಂಟಿಯೆಂದು
ನೆಡಗುವಡಗುವಲ್ಲಿ;
ತೂಕಡಿಸುವ ಬೆಟ್ಟದಲ್ಲಿ,
ಆಕಳಿಸುವ ತೊಟ್ಟಿಯಲ್ಲಿ,
ಮೇಕೆದಾರಿಯಲ್ಲಿ, ೪೨

ಪಥಿಕನೊಬ್ಬನೂರಿ ಮುಟ್ಟೆ
ಮುಟ್ಟೆ ಮೆಟ್ಟಿ ನಡೆಯೆ,
ಎದೆಯ ಬೆಪ್ಪು ಕಿವಿಯ ತಟ್ಟೆ,
ಜತೆಯ ನೆರಳೆ ಕೆಡೆಯೆ-
ಮಿರ್ರನೊಂದು ತಾರೆಯಿಲ್ಲ,
ಭೋರೆಂಬ ತರಂಗವಿಲ್ಲ
ಉಸುರಿಗೆ ಸಿಡಿಮಿಡಿಯೆ; ೪೯

ಮಿಂಚುಹುಳವ ಕಂಡನೆಂತು,
ಝಿಲ್ಲಿಯ ಗಾನವಂ
ಕೇಳ್ದನೆಂತು, ಮೂಡಿತಂತು
ಕಂತಿದೆಳವೆ ನವಂ-
ಕಂಗೆ ಸುಳಿಯಲೆಳೆಯ ಸೊಂಪು,
ಕಿವಿಗೆ ನುಸುಳೆ ಹಸುಳೆಯಿಂಪು,
ಪಧವ ಹಿಡಿದನವಂ ೫೬
*****
೧ ಆಷಾಢಮಾಸ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...