Home / ಲೇಖನ / ವಿಜ್ಞಾನ / ‘ಏಡ್ಸ್‌’ ಮಾರಿಗೆ ‘ವನೌಷಧಿ’ಯ ರಾಮಾಬಾಣ !!

‘ಏಡ್ಸ್‌’ ಮಾರಿಗೆ ‘ವನೌಷಧಿ’ಯ ರಾಮಾಬಾಣ !!

ರಕ್ತದ ನೇರ ಸಂಪರ್ಕದಿಂದ ಬರುವ ಈ ಮಹಾಮಾರಿ ಏಡ್ಸ್‌ ಕೊನೆಗೊಂದು ದಿನ ಯಾವ ಔಷಧಿ ಇಲ್ಲದೇ ಪರಲೋಕದ ಪ್ರಯಾಣ ಬೆಳೆಸುವಂತೆ ಮಾಡುತ್ತದೆ. ಈ ಏಡ್ಸ್ ಬಂದರೆ ರೋಗ ನಿರೋಧಕ ಜೀವಾಣುಗಳನ್ನು ನಾಶ ಮಾಡುತ್ತ ಹೋಗುತ್ತದೆ. ಇದೊಂದು ಮಾನವನ ಬದುಕಿನ ಮಾರಕ ರೋಗವಾಗಿದೆ. ಇದನ್ನು ನಿರ್ಮೂಲನೆ ಮಾಡಲು
ಪ್ರಪಂಚದಾದ್ಯಂತ ಏನೆಲ್ಲ ಔಷಧಿ, ಚಿಕತ್ಸೆಗಳು ನಡೆದರೂ ಸಫಲವಾಗಿಲ್ಲ ‘ಈ ರೋಗಕ್ಕೆ ಮದ್ದೇ ಇಲ್ಲ’ ಎಂದು ತೀರ್ಮಾನಕ್ಕೆ ಬರಲಾಗಿದೆ.

ಆದರೆ ಈ ಮಾರಕ ರೋಗವನ್ನು ವನೌಷಧಿಯ ಮೂಲಕ ಧೈರ್ಯದಿಂದ ಎದುರಿಸ ಬಹುದೆಂದು ಧಾರವಾಡದ ವನೌಷಧಿ ಸಂಶೋಧನಾ ಕೇಂದ್ರದ ಸಣ್ಣಪ್ಪ ಗಾಂವಕರ್ ಅವರು ತಮ್ಮ ವನಸ್ಪತಿ ಔಷಧಿಗಳ ಪ್ರಯೋಗದಿಂದ ಕಂಡುಹಿಡಿದಿದ್ದಾರೆ. ಒಂದು ವೇಳೆ ಏಡ್ಸ್‌ ಬಂದವರು ಹೆದರಿಕೊಳ್ಳದೇ ಆಹಾರದೊಂದಿಗೆ ನುಗ್ಗೆಕಾಯಿ, ಹಾಗಲಕಾಯಿ, ಚಿಕ್ಕೂ ಪೇರಲ, ಪಪ್ಪಾಯಿ, ಗಜ್ಜರಿ ಮೊದಲಾದವುಗಳನ್ನು ಸೇವಿಸುತ್ತ ವಾರದಲ್ಲಿ3 ದಿನ ಬೇವಿನರಸವನ್ನು ಕುದಿಸಿ ತಣ್ಣಗೆ ಮಾಡಿ ಕುಡಿದರೆ ರೋಗಿ ದೃಢಕಾಯನಾಗಿ ಜೀವನ ಸಾಗಿಸಬಹುದೆಂದು ಹೇಳುತ್ತಾರೆ. ಇದರಿಂದ ಬೇದಿ, ಜ್ವರ ನಿಂತುಹೋಗುತ್ತದೆ. ಬಡರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಸಣ್ಣಪ್ಪನವರು ಅನುಕೂಲವಾದರಿಗೆ ದಿನದ ಔಷಧಿಗೆ 20 ರೂ. ಪಡೆದು 6 ತಿಂಗಳು ಸತತ ಔಷಧಿ ಮುಂದುವರೆಸಲು ಹೇಳುತ್ತಾರೆ.

ದೇಶದಲ್ಲಿ ಲಕ್ಷಾಂತರ ರೋಗಿಗಳಿದ್ದು ಅತಂಕದಲ್ಲಿಯೇ ಮರಣವನ್ನುಪ್ಪುತ್ತಿದ್ಧಾರೆ. ಆತಂಕ ಪಡುವುದು ಬೇಡ, ಮತ್ತು ಏಡ್ಸ್‌ ಬರದಂತೆ ನೋಡಿಕೊಳ್ಳುವುದಂತೂ ನಿಜ. ಅನುವಂಶಿಕತೆ, ಇತರ ಅನಿರೀಕ್ಷಿತ ತಪ್ಪುಗಳಿಂದ ಈ ರೋಗವನ್ನು ತಗುಲಿಸಿಕೊಂಡವರು ಹೆದರುವುದು ಬೇಡ. ರೋಗ ಬರದಂತೆ ಜಾಗ್ರತರಾಗಿರಬೇಕೆಂದು ಹೇಳುತ್ತಾರೆ. ಈ ರೋಗ ನಿವಾರಣೆಗಾಗಿ ಅನೇಕ ಜನರಲ್ಲಿ ಮೊರೆಹೋಗಿ ಲಕ್ಷಾಂತರ ರೂಪಾಯಿಗಳನ್ನು ಕಳಿದುಕೊಂಡವ ರಿದ್ದಾರೆ. ಮೋಸ ಹೋಗದೆ ಈ ಸಣ್ಣಪ್ಪನಂಥಹ ‘ಧನ್ವಂತರಿ’ಯವರ ಸೇವೆಯನು ಸಾರ್ಥಕಗೊಳಿಸಿಕೊಂಡು ಜೀವಭಯದಿಂದ ಮುಕ್ತರಾಗಬೇಕಿದೆ.

ಸಣ್ಣಪ್ಪನವರ ವಿಳಾಸ : ವನೌಷಧಿ ಸಂಶೋಧನಾ ಕೇಂದ್ರ ‘ಸುಹಾಸಿನಿ’ 9ನೇ ಕ್ರಾಸ್, ಕಲ್ಯಾಣ ನಗರ, ಧಾರವಾಡ – 580 007

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...