ಹೇಗೆ ಹೋದನೇ ಹರಿ?

ಹೇಗೆ ಹೋದನೇ ಹರಿ ನಮ್ಮನೆಲ್ಲ ತೊರೆದು
ಹೇಗೆ ಹೋದ ಮಧುರೆಗೆ ನಮ್ಮೆದೆಯನು ಇರಿದು?

ಮಾಯೆಯನ್ನು ಹರಡುತಿದ್ದ
ಮುರಳಿಯನ್ನು ತ್ಯಜಿಸಿ
ಮೈಗೆ ಒರಗಿ ನಿಲ್ಲುತಿದ್ದ
ಸುರಭಿ ಹಿಂಡ ಸರಿಸಿ
ನಂದಗೋಪಿ ಬಂಧು ಬಳಗ ಎಲ್ಲರ ಹುಸಿ ಮಾಡಿ
ಹೋದನಲ್ಲ ಕೊನೆಗೂ ಮಧುರೆಯ ರಥವೇರಿ

ಪ್ರತಿ ಇರುಳೂ ಬೀಸುವುದು
ಚೀರುಲಿ ಥರ ಗಾಳಿ
ಹಸು ಕರುಗಳ ಕಣ್ಣಲ್ಲಿ
ಹಳೆ ನೆನಪಿನ ಧಾಳಿ
ಮುಸು ಮುಸು ಅಳುವಂತೆ ದಡವ ನೂಕಿ ನಡೆವ ಯಮುನೆ
ಗೋಕುಲದ ಗೋಳಿಗೀಗ ನರಕದ ವ್ಯಥೆ ಸಮನೆ?

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆಡಂಗುರ-೧೩೫
Next post ‘ಏಡ್ಸ್‌’ ಮಾರಿಗೆ ‘ವನೌಷಧಿ’ಯ ರಾಮಾಬಾಣ !!

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…