ಮದುವೆ

ಪ್ರೇಮಿಗಳು ಮದುವೆಯಾದಾಗ
ಸಗ್ಗದನುಭವದ ಚಣಗಳಿಗೆ ತೆರವಾಗುವರು
ಎಂದಿಗೂ ಜತೆಬಿಡದ ಭಾವದಲಿ
ಸಮ್ಮಾನಿಸಿಕೊಂಡ ಹಿಗ್ಗನು ಪಡೆಯುವರು,
ವಧು ಸದಾ ಸುಂದರಿ
ವರ ಬಲು ಭಾಗ್ಯವಂತ
ರಕ್ತಮಾಂಸಗಳ ಗರ್ಜನೆಯಿಂದ
ಕೋಣೆಯೊಳಗಣ ಕತ್ತಲು ಹೊರದಬ್ಬಿ ಬರಲು
ನಗ್ನತೆಯ ಭ್ರಮೆಯೂ ಚಂದ!
ಎಲ್ಲ ನಂಬಿಯೆ ನಾನು ಮುಂದುವರಿದೆ
ನಮ್ಮ ಪ್ರೀತಿ ಆದಿ ಪತನವ ಮೀರಿ
ಮರದ ಸಾಲಿನ ನಡುವೆ ಉದ್ದಕೆ
ನಡೆವಾಗ ಮೌನದಿಂದ
ಅಮರತೆಯ ತಂಗಾಳಿ ಮನಹೊಕ್ಕು
ಮುದಗೊಳಿಸುವುದ ತಿಳಿದೆ.
ದೂರವಾದರು ಬಹಳ ಸಲ
ಮರಳಿ ಅಂತೆಯೆ ನಡೆಯುತಿರೆ
ಒಮ್ಮೆಲೆ ಕೇನತೆಯ ಗುರುತು
ಕಾಣತೊಡಗಿತು.
ನನ್ನಲ್ಲಿ ಅವಳಲ್ಲಿ….
ನೋವಿನಳಲನೆ ಇಂತು ಹೇಳುತ್ತ
ಮದುವೆಯ ಗೂಢವನು
ನಾನೇಕೆ ಮುರಿಯಲಿ
ಅದರ ಎಲ್ಲ ಕಾಲದ ಅತಿಥಿ
ನಾನೊಬ್ಬನಾಗಿರಲು ಭವದಲಿ
*****
ಮೂಲ: ನೀಸ್ಸಿಮ್ ಎಜಕೀಲ್
(Marriage)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಗೆಳತಿ ಅವಳು
Next post ಸಲಹೆ ಕೊಡಬೇಕಾದರೆ ಮಾಡಿದನುಭವ ಬೇಡವೇ ?

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…