ಪ್ರೇಮಿಗಳು ಮದುವೆಯಾದಾಗ
ಸಗ್ಗದನುಭವದ ಚಣಗಳಿಗೆ ತೆರವಾಗುವರು
ಎಂದಿಗೂ ಜತೆಬಿಡದ ಭಾವದಲಿ
ಸಮ್ಮಾನಿಸಿಕೊಂಡ ಹಿಗ್ಗನು ಪಡೆಯುವರು,
ವಧು ಸದಾ ಸುಂದರಿ
ವರ ಬಲು ಭಾಗ್ಯವಂತ
ರಕ್ತಮಾಂಸಗಳ ಗರ್ಜನೆಯಿಂದ
ಕೋಣೆಯೊಳಗಣ ಕತ್ತಲು ಹೊರದಬ್ಬಿ ಬರಲು
ನಗ್ನತೆಯ ಭ್ರಮೆಯೂ ಚಂದ!
ಎಲ್ಲ ನಂಬಿಯೆ ನಾನು ಮುಂದುವರಿದೆ
ನಮ್ಮ ಪ್ರೀತಿ ಆದಿ ಪತನವ ಮೀರಿ
ಮರದ ಸಾಲಿನ ನಡುವೆ ಉದ್ದಕೆ
ನಡೆವಾಗ ಮೌನದಿಂದ
ಅಮರತೆಯ ತಂಗಾಳಿ ಮನಹೊಕ್ಕು
ಮುದಗೊಳಿಸುವುದ ತಿಳಿದೆ.
ದೂರವಾದರು ಬಹಳ ಸಲ
ಮರಳಿ ಅಂತೆಯೆ ನಡೆಯುತಿರೆ
ಒಮ್ಮೆಲೆ ಕೇನತೆಯ ಗುರುತು
ಕಾಣತೊಡಗಿತು.
ನನ್ನಲ್ಲಿ ಅವಳಲ್ಲಿ….
ನೋವಿನಳಲನೆ ಇಂತು ಹೇಳುತ್ತ
ಮದುವೆಯ ಗೂಢವನು
ನಾನೇಕೆ ಮುರಿಯಲಿ
ಅದರ ಎಲ್ಲ ಕಾಲದ ಅತಿಥಿ
ನಾನೊಬ್ಬನಾಗಿರಲು ಭವದಲಿ
*****
ಮೂಲ: ನೀಸ್ಸಿಮ್ ಎಜಕೀಲ್
(Marriage)
Related Post
ಸಣ್ಣ ಕತೆ
-
ಕರಿಗಾಲಿನ ಗಿರಿರಾಯರು
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…
-
ಅಪರೂಪದ ಬಾಂಧವ್ಯ
ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…
-
ದೇವರು
ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…
-
ಮಲ್ಲೇಶಿಯ ನಲ್ಲೆಯರು
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…
-
ದುರಾಶಾ ದುರ್ವಿಪಾಕ
"ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…