ಅಮ್ಮ

ಎಲ್ಲರಂತೆ, ಎಲ್ಲದರಂತೆ,
ಸಹಜವೆಂಬಂತೆ
ಸೂರ್ಯ ಚಂದ್ರರಿಲ್ಲವೇ,
ಮಿನುಗುವ ತಾರೆಗಳಿಲ್ಲವೇ ಹಾಗೆ
ಸಂತಸ ನೀಡುತ್ತಿಲ್ಲವೇ ಅಂತೆ
ನೀನು ನನಗಾಗೇ ಎಂದು ತಿಳಿದೆ
ನಿನ್ನಾಳ,
ಅದರೊಳಗೊಂದರ್ಥ, ಒಂದಾಸೆ,
ಹೊರಡದ
ಹೊರಡಿಸಲಾಗದ ತುಮುಲ
ತುಡಿತ ಇತ್ತೆಂದು ಅರಿವಾಗಲೇ ಇಲ್ಲ
-ಅಮ್ಮ
ನಿನ್ನೊಳಗೂ ಒಂದು ಪುಟ್ಟ ಹೃದಯವಿದೆ,
ಕುಡಿಗಳ ಹನಿ ಪ್ರೀತಿಗೆ ಹಂಬಲಿಸುತ್ತಿದೆ,
ಎಂದು ಎಂದೂ ಅನ್ನಿಸಲೇ ಇಲ್ಲ
ನಿನ್ನದೆಲ್ಲವೂ ನನ್ನದೇ
ಎಂದು ಗರ್ವಿಸಿದೆ.
ನೀ ಸಿಟ್ಟಾಗಲಿಲ್ಲ, ನಕ್ಕುಬಿಟ್ಟೆ.
ನಗುಮೊಗದಿ ನೀಡಿದೆ.
ಆದರೂ ಮಕ್ಕಳ ಹಪಾಹಪಿಗೆ
ಎದೆಯೊಳಗೆ ಹಳಹಳಿಸಿದೆ.
ಹೈರಾಣಾದೆ-ಹಂಗು ತೊರೆದು ನಡೆದೆ.
ಈಗ ಹಳಹಳಿಕೆ ನನ್ನದೇ ಸೊತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಷ್ಟೊಂದು ಗುಟ್ಟುಗಳು
Next post ಕರಾರಾದಲ್ಲಿ ಕವಿ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys