ಕರಾರಾದಲ್ಲಿ ಕವಿ

ಅಡುಗೆ ಮನೆಯಲ್ಲಿ ಒಗ್ಗರಣೆಯ ಸದ್ದು
ಕುಂಟೆಬಿಲ್ಲೆಯ ಆಟ ಹೊರಗೆ
ಮೇಜಿನ ಮೇಲೆ ಲೇಖನಿ ಹಿಡಿದ ಕವಿ-
ಗಣೇಶ ಹೊರಟಿದೆ ಮೆರವಣಿಗೆ

ಬೆಳಗಿನಿಂದಲೂ ಹೀಗೆಯೇ–
ಪದಗಳ ನಿರೀಕ್ಷೆಯಲಿ ಪದಗಳು
ಎಲ್ಲರೂ ನಿದ್ರಿಸಿದಾಗ ಬಂದು ಹಾಗೆಯೇ
ಮರಳುವ ಬೆಳದಿಂಗಳು

ಬರೆಯುವುದಾದರೆ ಬರೆಯಬಹುದು
ಗೊಲ್ಕೊಂಡಾದ ಲಗ್ಗೆ
ಇಲ್ಲ ಅಸ್ಸಾಮದ ಇಲ್ಲ ಪಂಜಾಬದ
ಇಲ್ಲ ಶ್ರೀಲಂಕೆಯ ಬಗ್ಗೆ

ಎಲ್ಲ ವಿಷಯಗಳೂ ಮೂಲದಲ್ಲಿ ಒಂದೇ-
ವ್ಯತ್ಯಾಸವೆಂದರೆ ಶಬ್ಧ
ಈ ವ್ಯತ್ಯಾಸದ ಅರ್ಥವಾಗುವುದರಲ್ಲೆ
ಕಳೆದು ಹೋಗುತ್ತದೆ ಅಬ್ದ

ಆಗುವಿಕೆಯೋ ಅದು ಪ್ರಾರ್ಥನೆಯ ಕರೆ
ವಿಶ್ವಾಸಿಯನ್ನು ತಲುಪುವ ಹಾಗೆ
ಅಥವ ತಿಳಿಯದೇ ಅರಳುವಂತೆ
ಮನೆಯಂಗಳದ ಮೊಗ್ಗೆ

ಈ ಮಧ್ಯೆ ಹಳೆ ಸರಕಾರ ಹೋಗಿ
ಹೊಸ ಸರಕಾರ ಬರುತ್ತದೆ
ನಿಜ– ಕಾಯುವುದಿಲ್ಲ ಯಾರೂ ಕವಿತೆಗೆ
ಕವಿಯೊಬ್ಬನಲ್ಲದೆ

ಹಿಂದೆ ಕಾದಿದ್ದನಂತೆ ಮೈಖೆಲೇಂಜೆಲೊ
ಕರಾರಾದಲ್ಲೆಷ್ಟೊ ತಿಂಗಳು !
ಕಾಣುವತನಕ (ಹಾಗೆಂದು ಕೇಳಿರುವೆ)
ತಾಜಾ ಸಂಗಮರವರಿ ಕಲ್ಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ
Next post ದೋಣಿ

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…