ಕರಾರಾದಲ್ಲಿ ಕವಿ

ಅಡುಗೆ ಮನೆಯಲ್ಲಿ ಒಗ್ಗರಣೆಯ ಸದ್ದು
ಕುಂಟೆಬಿಲ್ಲೆಯ ಆಟ ಹೊರಗೆ
ಮೇಜಿನ ಮೇಲೆ ಲೇಖನಿ ಹಿಡಿದ ಕವಿ-
ಗಣೇಶ ಹೊರಟಿದೆ ಮೆರವಣಿಗೆ

ಬೆಳಗಿನಿಂದಲೂ ಹೀಗೆಯೇ–
ಪದಗಳ ನಿರೀಕ್ಷೆಯಲಿ ಪದಗಳು
ಎಲ್ಲರೂ ನಿದ್ರಿಸಿದಾಗ ಬಂದು ಹಾಗೆಯೇ
ಮರಳುವ ಬೆಳದಿಂಗಳು

ಬರೆಯುವುದಾದರೆ ಬರೆಯಬಹುದು
ಗೊಲ್ಕೊಂಡಾದ ಲಗ್ಗೆ
ಇಲ್ಲ ಅಸ್ಸಾಮದ ಇಲ್ಲ ಪಂಜಾಬದ
ಇಲ್ಲ ಶ್ರೀಲಂಕೆಯ ಬಗ್ಗೆ

ಎಲ್ಲ ವಿಷಯಗಳೂ ಮೂಲದಲ್ಲಿ ಒಂದೇ-
ವ್ಯತ್ಯಾಸವೆಂದರೆ ಶಬ್ಧ
ಈ ವ್ಯತ್ಯಾಸದ ಅರ್ಥವಾಗುವುದರಲ್ಲೆ
ಕಳೆದು ಹೋಗುತ್ತದೆ ಅಬ್ದ

ಆಗುವಿಕೆಯೋ ಅದು ಪ್ರಾರ್ಥನೆಯ ಕರೆ
ವಿಶ್ವಾಸಿಯನ್ನು ತಲುಪುವ ಹಾಗೆ
ಅಥವ ತಿಳಿಯದೇ ಅರಳುವಂತೆ
ಮನೆಯಂಗಳದ ಮೊಗ್ಗೆ

ಈ ಮಧ್ಯೆ ಹಳೆ ಸರಕಾರ ಹೋಗಿ
ಹೊಸ ಸರಕಾರ ಬರುತ್ತದೆ
ನಿಜ– ಕಾಯುವುದಿಲ್ಲ ಯಾರೂ ಕವಿತೆಗೆ
ಕವಿಯೊಬ್ಬನಲ್ಲದೆ

ಹಿಂದೆ ಕಾದಿದ್ದನಂತೆ ಮೈಖೆಲೇಂಜೆಲೊ
ಕರಾರಾದಲ್ಲೆಷ್ಟೊ ತಿಂಗಳು !
ಕಾಣುವತನಕ (ಹಾಗೆಂದು ಕೇಳಿರುವೆ)
ತಾಜಾ ಸಂಗಮರವರಿ ಕಲ್ಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ
Next post ದೋಣಿ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys