ಹುಟ್ಟು

ಹಕ್ಕಿ ಫಡಫಡಿಸಿ ಹಾರಿ
ನೀಲಿ ಆಕಾಶದ ಪರದೆ
ತುಂಬ ಹುಚ್ಚೆದ್ದ ಪದಗಳು
ಬೆಳಕಿನ ಕಿರಣಗಳೊಂದಿಗೆ ಜಾರಿ
ಹಿಡಿದು ಬಿಂಬಿಸಿದ ಹುಲ್ಲುಗರಿ
ತುಂಬ ಇಬ್ಬನಿ ಕವಿತೆಗಳ ಸಾಲು.

ಮೂಡಿದ ಹರುಷ ವೃತಸ್ನಾನ
ಮುಗಿಸಿ ಎಳೆ ರಂಗೋಲಿ ಎಳೆದ
ಬೆರಳುಗಳು ನಾದಿ ಹದ ಮಾಡಿದ
ರೊಟ್ಟಿಗಳು ಭೂಮಿ ಗೋಲ ತಿರುಗಿ
ಹಬ್ಬದ ಬಾಳೆ ತುಂಬ ಭಕ್ಷ್ಯಗಳ ಸಾಲು.

ಉತ್ತಿ ಬಿತ್ತಿ ಉಂಡು ಹದ ಮಾಡಿದ
ಪಾಕ ರಸಪಾಕಗಳ ಪ್ರಸನ್ನತೆ
ಹರಿದು ರಸಗಳ ಸೃವಿಸಿದ ಭಾವ
ಅನುಭಾವಗಳ ಸಾಲು ಹಣತೆಗಳು
ಬಿಂಬಿಸಿ ಕಾಂತಿಗಳ ಕಣ್ಣತುಂಬ ದೀಪಗಳ ಸಾಲು.

ಮರಗಿಡಗಳ ಸುಳಿಗಾಳಿ ಬೀಸಿ
ಭೂಮಿ ಕವಿತೆಯ ಸಾಲು ಮಾಡಿ
ಬತ್ತಿದ ಪಟ್ಟಿಯಲಿ ಹಸಿರು ಮೊಳಕೆ
ಚಿಗುರಿದ ಜೀವಭಾವ ಜಲವ
ಹೀರಿ ಹೀರಿ ಚೀಪಿತ ತಾಯ ಮೊಲೆ ಹಾಲು.

ಹೊಸ ಹೊಸ ರೂಹುಗಳ ಸಂಕೇತ
ಮುದಗೊಂಡು ಹದ ಪಾಕ ಕುದಿದು
ಘಮ್ಮೆಂದು ಹೊಮ್ಮಿ ಚಿಮ್ಮುವ ರಾಗಗಳು
ಬದುಕು, ಕವಿತೆ, ಖುಷಿ, ಹುಟ್ಟುವ ಕಾಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಳೆನ್ನ ಮನದನ್ನೆ
Next post ಸೂರ್ಯಪ್ರಸ್ಥಾನ

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys