ಹುಟ್ಟು

ಹಕ್ಕಿ ಫಡಫಡಿಸಿ ಹಾರಿ
ನೀಲಿ ಆಕಾಶದ ಪರದೆ
ತುಂಬ ಹುಚ್ಚೆದ್ದ ಪದಗಳು
ಬೆಳಕಿನ ಕಿರಣಗಳೊಂದಿಗೆ ಜಾರಿ
ಹಿಡಿದು ಬಿಂಬಿಸಿದ ಹುಲ್ಲುಗರಿ
ತುಂಬ ಇಬ್ಬನಿ ಕವಿತೆಗಳ ಸಾಲು.

ಮೂಡಿದ ಹರುಷ ವೃತಸ್ನಾನ
ಮುಗಿಸಿ ಎಳೆ ರಂಗೋಲಿ ಎಳೆದ
ಬೆರಳುಗಳು ನಾದಿ ಹದ ಮಾಡಿದ
ರೊಟ್ಟಿಗಳು ಭೂಮಿ ಗೋಲ ತಿರುಗಿ
ಹಬ್ಬದ ಬಾಳೆ ತುಂಬ ಭಕ್ಷ್ಯಗಳ ಸಾಲು.

ಉತ್ತಿ ಬಿತ್ತಿ ಉಂಡು ಹದ ಮಾಡಿದ
ಪಾಕ ರಸಪಾಕಗಳ ಪ್ರಸನ್ನತೆ
ಹರಿದು ರಸಗಳ ಸೃವಿಸಿದ ಭಾವ
ಅನುಭಾವಗಳ ಸಾಲು ಹಣತೆಗಳು
ಬಿಂಬಿಸಿ ಕಾಂತಿಗಳ ಕಣ್ಣತುಂಬ ದೀಪಗಳ ಸಾಲು.

ಮರಗಿಡಗಳ ಸುಳಿಗಾಳಿ ಬೀಸಿ
ಭೂಮಿ ಕವಿತೆಯ ಸಾಲು ಮಾಡಿ
ಬತ್ತಿದ ಪಟ್ಟಿಯಲಿ ಹಸಿರು ಮೊಳಕೆ
ಚಿಗುರಿದ ಜೀವಭಾವ ಜಲವ
ಹೀರಿ ಹೀರಿ ಚೀಪಿತ ತಾಯ ಮೊಲೆ ಹಾಲು.

ಹೊಸ ಹೊಸ ರೂಹುಗಳ ಸಂಕೇತ
ಮುದಗೊಂಡು ಹದ ಪಾಕ ಕುದಿದು
ಘಮ್ಮೆಂದು ಹೊಮ್ಮಿ ಚಿಮ್ಮುವ ರಾಗಗಳು
ಬದುಕು, ಕವಿತೆ, ಖುಷಿ, ಹುಟ್ಟುವ ಕಾಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಳೆನ್ನ ಮನದನ್ನೆ
Next post ಸೂರ್ಯಪ್ರಸ್ಥಾನ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys