Home / ಕವನ / ಕವಿತೆ / ಅಮರಾವತಿ

ಅಮರಾವತಿ

ಕುತೂಹಲದ ಹೃದಯ ಕಣ್ಣು ಮನಸು
ಒಮ್ಮಿಂದೊಮ್ಮೆಲೆ ಕಕ್ಕಾಬಿಕ್ಕಿ
ಲಂಡನ್ ಸಡಗರದ ಕನಸು ನನಸಾಗುವ
ಹತ್ತಿರ ಹತ್ತಿರದ ಸಮಯ
ಸಂಭ್ರಮದ ವಿದ್ಯುತ್ ಸಂಚಾರ ಒಳಗೊಳಗೇ….

ಸಖಿಯ ಉಲಿತ ಕೆಲವೇನಿಮಿಷ
ನಗರದಮೇಲೆ ಹಿಮಾಚ್ಫಾದನೆ
ಮೈನಸ್ ಸೆಲ್ಸಿಯಸ್ ಹಿತ್ರೋಗೆ ಹೆಜ್ಜೆ ಇಡಲು
ಒಂದು ಎರಡು ಮೂರು ನಾಲ್ಕು ಸುತ್ತು
ತಿರುಗುಚಕ್ರದನುಭವ
ಏರಿಳಿತ ಹೃದಯ ಬಡಿತ ಒಳಗೆಲ್ಲ ನಿಶ್ಶಬ್ಧ

ಹುಡುಕಾಟ ಹುಡುಕಾಟ ಎಲ್ಲಿದೆ ರಾಣಿಮಹಲು
ಮೋಡ ಮಿಣುಕು ತುಣುಕು ಮಿಣುಕು
ಕಣ್ಣು ಮುಚ್ಚಾಲೆಯಾಟ ಐದನೆಯ ಸುತ್ತು
ಆಕಾಶಪ್ರದಕ್ಷಣೆ ವೀಕ್ಷಣೆ
ಪೆಗ್ಗೇರಿಸಿ ಬೆಚ್ಚಗಾಗಿರುವವರ ಇನ್ನೂ ಸುಖನಿದ್ರೆ
ಕಾಫಿಹೀರಿ ಕಿಟಕಿಯಾಚೆ ನೆಟ್ಟ ದೃಷ್ಟಿ
ನಡುವೆ ಮಂಜು ಕೊರೆತ

ಮೋಡ ಭೇದಿಸಿ ಇಳಿಮುಖದ ವಿಮಾನ
ತುಂಡುತುಂಡಾಗಿ ಕೊನೆಗೊಮ್ಮೆ ಇಡಿಯಾಗಿ
ಗಕ್ಕನೆ ಕಾಣಿಸಿತೊಂದು ಅವರಾವತಿ
ಮುಸ್ಸಂಜೆ ಹೊತ್ತು ಮಿಣಿಮಿಣಿ,
ಝಗಝಗ ದೀಪ ಹರಿದಾಡುವ ಬಣ್ಣ

ರಸ್ತೆಗಳ ಉದ್ದಗಲ ಯಕ್ಷಯಕ್ಷಿಣಿಯರು
ಇನ್ನೂ ಹುಡುಕಾಟ ರಾಣಿಯ ಮಹಲು
ಮಹಲಿನೊಳಿಲ್ಲ ರಾಜನ ಸಂಗಡ ರಾಣಿ
ಇವನಬಿಟ್ಟು ಅವನಾರೋ
ಅವನಬಿಟ್ಟು ಇನ್ಯಾರೋ, ಹಾದಿಹೆಣವಾಗಿ
ಬಿದ್ದ ರಾಜಕುಮಾರಿ
ಸೂರ್ಯಮುಳುಗಿ ಕಗ್ಗತ್ತಲು
ಅರಮನೆಗೆ ಗ್ರಹಣ
ನೂರೊಂದು ಕಥೆಗಳ ನಗರ
ಗಹಗಹಿಸಿ ನಗುವ ದೀಪಗಳು
ನನ್ನೆದೆಯೊಳಕ್ಕೆ ಆಲಂಗಿಸುವ ಕುತೂಹಲ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...