Home / ಕವನ / ಕವಿತೆ / ಅಮರಾವತಿ

ಅಮರಾವತಿ

ಕುತೂಹಲದ ಹೃದಯ ಕಣ್ಣು ಮನಸು
ಒಮ್ಮಿಂದೊಮ್ಮೆಲೆ ಕಕ್ಕಾಬಿಕ್ಕಿ
ಲಂಡನ್ ಸಡಗರದ ಕನಸು ನನಸಾಗುವ
ಹತ್ತಿರ ಹತ್ತಿರದ ಸಮಯ
ಸಂಭ್ರಮದ ವಿದ್ಯುತ್ ಸಂಚಾರ ಒಳಗೊಳಗೇ….

ಸಖಿಯ ಉಲಿತ ಕೆಲವೇನಿಮಿಷ
ನಗರದಮೇಲೆ ಹಿಮಾಚ್ಫಾದನೆ
ಮೈನಸ್ ಸೆಲ್ಸಿಯಸ್ ಹಿತ್ರೋಗೆ ಹೆಜ್ಜೆ ಇಡಲು
ಒಂದು ಎರಡು ಮೂರು ನಾಲ್ಕು ಸುತ್ತು
ತಿರುಗುಚಕ್ರದನುಭವ
ಏರಿಳಿತ ಹೃದಯ ಬಡಿತ ಒಳಗೆಲ್ಲ ನಿಶ್ಶಬ್ಧ

ಹುಡುಕಾಟ ಹುಡುಕಾಟ ಎಲ್ಲಿದೆ ರಾಣಿಮಹಲು
ಮೋಡ ಮಿಣುಕು ತುಣುಕು ಮಿಣುಕು
ಕಣ್ಣು ಮುಚ್ಚಾಲೆಯಾಟ ಐದನೆಯ ಸುತ್ತು
ಆಕಾಶಪ್ರದಕ್ಷಣೆ ವೀಕ್ಷಣೆ
ಪೆಗ್ಗೇರಿಸಿ ಬೆಚ್ಚಗಾಗಿರುವವರ ಇನ್ನೂ ಸುಖನಿದ್ರೆ
ಕಾಫಿಹೀರಿ ಕಿಟಕಿಯಾಚೆ ನೆಟ್ಟ ದೃಷ್ಟಿ
ನಡುವೆ ಮಂಜು ಕೊರೆತ

ಮೋಡ ಭೇದಿಸಿ ಇಳಿಮುಖದ ವಿಮಾನ
ತುಂಡುತುಂಡಾಗಿ ಕೊನೆಗೊಮ್ಮೆ ಇಡಿಯಾಗಿ
ಗಕ್ಕನೆ ಕಾಣಿಸಿತೊಂದು ಅವರಾವತಿ
ಮುಸ್ಸಂಜೆ ಹೊತ್ತು ಮಿಣಿಮಿಣಿ,
ಝಗಝಗ ದೀಪ ಹರಿದಾಡುವ ಬಣ್ಣ

ರಸ್ತೆಗಳ ಉದ್ದಗಲ ಯಕ್ಷಯಕ್ಷಿಣಿಯರು
ಇನ್ನೂ ಹುಡುಕಾಟ ರಾಣಿಯ ಮಹಲು
ಮಹಲಿನೊಳಿಲ್ಲ ರಾಜನ ಸಂಗಡ ರಾಣಿ
ಇವನಬಿಟ್ಟು ಅವನಾರೋ
ಅವನಬಿಟ್ಟು ಇನ್ಯಾರೋ, ಹಾದಿಹೆಣವಾಗಿ
ಬಿದ್ದ ರಾಜಕುಮಾರಿ
ಸೂರ್ಯಮುಳುಗಿ ಕಗ್ಗತ್ತಲು
ಅರಮನೆಗೆ ಗ್ರಹಣ
ನೂರೊಂದು ಕಥೆಗಳ ನಗರ
ಗಹಗಹಿಸಿ ನಗುವ ದೀಪಗಳು
ನನ್ನೆದೆಯೊಳಕ್ಕೆ ಆಲಂಗಿಸುವ ಕುತೂಹಲ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...