ಅಮರಾವತಿ

ಕುತೂಹಲದ ಹೃದಯ ಕಣ್ಣು ಮನಸು
ಒಮ್ಮಿಂದೊಮ್ಮೆಲೆ ಕಕ್ಕಾಬಿಕ್ಕಿ
ಲಂಡನ್ ಸಡಗರದ ಕನಸು ನನಸಾಗುವ
ಹತ್ತಿರ ಹತ್ತಿರದ ಸಮಯ
ಸಂಭ್ರಮದ ವಿದ್ಯುತ್ ಸಂಚಾರ ಒಳಗೊಳಗೇ….

ಸಖಿಯ ಉಲಿತ ಕೆಲವೇನಿಮಿಷ
ನಗರದಮೇಲೆ ಹಿಮಾಚ್ಫಾದನೆ
ಮೈನಸ್ ಸೆಲ್ಸಿಯಸ್ ಹಿತ್ರೋಗೆ ಹೆಜ್ಜೆ ಇಡಲು
ಒಂದು ಎರಡು ಮೂರು ನಾಲ್ಕು ಸುತ್ತು
ತಿರುಗುಚಕ್ರದನುಭವ
ಏರಿಳಿತ ಹೃದಯ ಬಡಿತ ಒಳಗೆಲ್ಲ ನಿಶ್ಶಬ್ಧ

ಹುಡುಕಾಟ ಹುಡುಕಾಟ ಎಲ್ಲಿದೆ ರಾಣಿಮಹಲು
ಮೋಡ ಮಿಣುಕು ತುಣುಕು ಮಿಣುಕು
ಕಣ್ಣು ಮುಚ್ಚಾಲೆಯಾಟ ಐದನೆಯ ಸುತ್ತು
ಆಕಾಶಪ್ರದಕ್ಷಣೆ ವೀಕ್ಷಣೆ
ಪೆಗ್ಗೇರಿಸಿ ಬೆಚ್ಚಗಾಗಿರುವವರ ಇನ್ನೂ ಸುಖನಿದ್ರೆ
ಕಾಫಿಹೀರಿ ಕಿಟಕಿಯಾಚೆ ನೆಟ್ಟ ದೃಷ್ಟಿ
ನಡುವೆ ಮಂಜು ಕೊರೆತ

ಮೋಡ ಭೇದಿಸಿ ಇಳಿಮುಖದ ವಿಮಾನ
ತುಂಡುತುಂಡಾಗಿ ಕೊನೆಗೊಮ್ಮೆ ಇಡಿಯಾಗಿ
ಗಕ್ಕನೆ ಕಾಣಿಸಿತೊಂದು ಅವರಾವತಿ
ಮುಸ್ಸಂಜೆ ಹೊತ್ತು ಮಿಣಿಮಿಣಿ,
ಝಗಝಗ ದೀಪ ಹರಿದಾಡುವ ಬಣ್ಣ

ರಸ್ತೆಗಳ ಉದ್ದಗಲ ಯಕ್ಷಯಕ್ಷಿಣಿಯರು
ಇನ್ನೂ ಹುಡುಕಾಟ ರಾಣಿಯ ಮಹಲು
ಮಹಲಿನೊಳಿಲ್ಲ ರಾಜನ ಸಂಗಡ ರಾಣಿ
ಇವನಬಿಟ್ಟು ಅವನಾರೋ
ಅವನಬಿಟ್ಟು ಇನ್ಯಾರೋ, ಹಾದಿಹೆಣವಾಗಿ
ಬಿದ್ದ ರಾಜಕುಮಾರಿ
ಸೂರ್ಯಮುಳುಗಿ ಕಗ್ಗತ್ತಲು
ಅರಮನೆಗೆ ಗ್ರಹಣ
ನೂರೊಂದು ಕಥೆಗಳ ನಗರ
ಗಹಗಹಿಸಿ ನಗುವ ದೀಪಗಳು
ನನ್ನೆದೆಯೊಳಕ್ಕೆ ಆಲಂಗಿಸುವ ಕುತೂಹಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರ್ದರ್ಶನ
Next post ಆಗಸ

ಸಣ್ಣ ಕತೆ

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕಂಬದಹಳ್ಳಿಗೆ ಭೇಟಿ

    ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…