ಅಂತರ್ದರ್ಶನ

ಭಾವ ರವಿಯೆ ಶಮ ಶಾಂತ ಶಶಿಯೆ
ನಿನ್ನ ನೋಟ ದಾಳವೆತ್ತರ ನಿಲುಕದು

ಕಸವೊಽ ರಸವೊಽ
ಸರಸ ವಿರಸವೊಽ
ನಿನ್ನ ನೋಟದಿ ಸಮರಸ

ಮುಗಿಲಿನೆದೆಗೂ ಮಣ್ಣ ವಾಸನೆ
ತೋರೋ ನಿನ್ನಯ ಗಾರುಡಿ
ಕಡಲ ತೆರೆಯ ನೊರೆಯ ತೊರೆಗೊ
ಕಣ್ಣೀರ ಛಾಯೆಯ ಮುನ್ನುಡಿ

ಬೀಸೊ ಗಾಳಿಗೂ ಭಾವ ಸಾಸಿರ
ಜೀವ ಜಲಕು ಒನಪಿನೋಗರ
ಪಂಕ್ತಿಯಲ್ಲೂ ಜಂಗಮದ ದರ್ಶನ
ಖಗ-ಮಿಗ-ಜಂತುಗಳಲೂ ನೇಹದ ಸ್ಪರ್ಶನಾಽ

ಹೆಪ್ಪುಗಟ್ಟಿ ಕರಗೊ ತುಹಿನವು
ನಿನ್ನ ಕಣ್ಣ ಕರಣಕೆ ಕಾರಣ
ವೈಶಾಖ, ವರ್ಷಿಣಿ, ಹಿಮಂತ ಸಾಲ್ಗಳು
ಪದ ಪಾದದಕ್ಕರ ತೋರಣ.

ಹುಟ್ಟು ಸಾವು ನೋವು ನಲಿವು
ನಿನಗಾತ್ಮಾನಂದದ ಸಂತಸ
ದೃಷ್ಟಿಯಂತರದೃಷ್ಟಿಯು
ನಿನ್ನ ಚಿತ್ತದೊಲ್ಮೆ ಬಲ್ಮೆಯ ನವರಸ

ಬಯಲ ಜಗದ ಬಯಲಗಣ್ಣಿಗೆ
ಬಯಲೆ ನೂಪುರದಾಲಯ
ಕವಿಯೆ ನಿನ್ನಯ ಕಾವ್ಯಗಣ್ಣಲಿ
ಬಯಲು ಬಯಲಿಗೂ ಶೃತಿಲಯ…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಲ್ಲಮ
Next post ಅಮರಾವತಿ

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…