ಅಂತರ್ದರ್ಶನ

ಭಾವ ರವಿಯೆ ಶಮ ಶಾಂತ ಶಶಿಯೆ
ನಿನ್ನ ನೋಟ ದಾಳವೆತ್ತರ ನಿಲುಕದು

ಕಸವೊಽ ರಸವೊಽ
ಸರಸ ವಿರಸವೊಽ
ನಿನ್ನ ನೋಟದಿ ಸಮರಸ

ಮುಗಿಲಿನೆದೆಗೂ ಮಣ್ಣ ವಾಸನೆ
ತೋರೋ ನಿನ್ನಯ ಗಾರುಡಿ
ಕಡಲ ತೆರೆಯ ನೊರೆಯ ತೊರೆಗೊ
ಕಣ್ಣೀರ ಛಾಯೆಯ ಮುನ್ನುಡಿ

ಬೀಸೊ ಗಾಳಿಗೂ ಭಾವ ಸಾಸಿರ
ಜೀವ ಜಲಕು ಒನಪಿನೋಗರ
ಪಂಕ್ತಿಯಲ್ಲೂ ಜಂಗಮದ ದರ್ಶನ
ಖಗ-ಮಿಗ-ಜಂತುಗಳಲೂ ನೇಹದ ಸ್ಪರ್ಶನಾಽ

ಹೆಪ್ಪುಗಟ್ಟಿ ಕರಗೊ ತುಹಿನವು
ನಿನ್ನ ಕಣ್ಣ ಕರಣಕೆ ಕಾರಣ
ವೈಶಾಖ, ವರ್ಷಿಣಿ, ಹಿಮಂತ ಸಾಲ್ಗಳು
ಪದ ಪಾದದಕ್ಕರ ತೋರಣ.

ಹುಟ್ಟು ಸಾವು ನೋವು ನಲಿವು
ನಿನಗಾತ್ಮಾನಂದದ ಸಂತಸ
ದೃಷ್ಟಿಯಂತರದೃಷ್ಟಿಯು
ನಿನ್ನ ಚಿತ್ತದೊಲ್ಮೆ ಬಲ್ಮೆಯ ನವರಸ

ಬಯಲ ಜಗದ ಬಯಲಗಣ್ಣಿಗೆ
ಬಯಲೆ ನೂಪುರದಾಲಯ
ಕವಿಯೆ ನಿನ್ನಯ ಕಾವ್ಯಗಣ್ಣಲಿ
ಬಯಲು ಬಯಲಿಗೂ ಶೃತಿಲಯ…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಲ್ಲಮ
Next post ಅಮರಾವತಿ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…