ಅಂತರ್ದರ್ಶನ

ಭಾವ ರವಿಯೆ ಶಮ ಶಾಂತ ಶಶಿಯೆ
ನಿನ್ನ ನೋಟ ದಾಳವೆತ್ತರ ನಿಲುಕದು

ಕಸವೊಽ ರಸವೊಽ
ಸರಸ ವಿರಸವೊಽ
ನಿನ್ನ ನೋಟದಿ ಸಮರಸ

ಮುಗಿಲಿನೆದೆಗೂ ಮಣ್ಣ ವಾಸನೆ
ತೋರೋ ನಿನ್ನಯ ಗಾರುಡಿ
ಕಡಲ ತೆರೆಯ ನೊರೆಯ ತೊರೆಗೊ
ಕಣ್ಣೀರ ಛಾಯೆಯ ಮುನ್ನುಡಿ

ಬೀಸೊ ಗಾಳಿಗೂ ಭಾವ ಸಾಸಿರ
ಜೀವ ಜಲಕು ಒನಪಿನೋಗರ
ಪಂಕ್ತಿಯಲ್ಲೂ ಜಂಗಮದ ದರ್ಶನ
ಖಗ-ಮಿಗ-ಜಂತುಗಳಲೂ ನೇಹದ ಸ್ಪರ್ಶನಾಽ

ಹೆಪ್ಪುಗಟ್ಟಿ ಕರಗೊ ತುಹಿನವು
ನಿನ್ನ ಕಣ್ಣ ಕರಣಕೆ ಕಾರಣ
ವೈಶಾಖ, ವರ್ಷಿಣಿ, ಹಿಮಂತ ಸಾಲ್ಗಳು
ಪದ ಪಾದದಕ್ಕರ ತೋರಣ.

ಹುಟ್ಟು ಸಾವು ನೋವು ನಲಿವು
ನಿನಗಾತ್ಮಾನಂದದ ಸಂತಸ
ದೃಷ್ಟಿಯಂತರದೃಷ್ಟಿಯು
ನಿನ್ನ ಚಿತ್ತದೊಲ್ಮೆ ಬಲ್ಮೆಯ ನವರಸ

ಬಯಲ ಜಗದ ಬಯಲಗಣ್ಣಿಗೆ
ಬಯಲೆ ನೂಪುರದಾಲಯ
ಕವಿಯೆ ನಿನ್ನಯ ಕಾವ್ಯಗಣ್ಣಲಿ
ಬಯಲು ಬಯಲಿಗೂ ಶೃತಿಲಯ…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಲ್ಲಮ
Next post ಅಮರಾವತಿ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys