ಅಲ್ಲಮ

ನಡೆವ ದಾರಿಯಲಿ ಹೆಜ್ಜೆಗಳು
ಮೂಡಲಿಲ್ಲ ಅನುರಣಿಸಿತು ಸಪ್ಪಳ
ನಡೆವ ದಾರಿಯ ಇಕ್ಕೆಲಗಳಲಿ
ಬಯಲ ಬಿಂಬ ದಾರಿಗೆ ಇಂಬು
ಹುಡುಕಾಟದ ಬಯಲಿನಲಿ
ಖಾಲಿಯಲಿ ತುಂಬಿಕೊಂಡ ಹಸಿರು.

ಬೆಳಕಿಗಾಗಿ ಕಂದೀಲನ ಮರೆಮಾಚಿ
ದೇಹ ಹೊತ್ತವರ ಹರಿದಾಟ ಇರುಳ
ಮೆಲ್ಲಗೆ ಕಂಪ ಮರೆತು ಮಾಯೆ ಒಳಗೆ
ಇಳಿದ ಕಪ್ಪು ಕತ್ತಲ ತುಂಬ ನೀಲಿ
ಆಕಾಶದ ನಕ್ಷತ್ರಗಳ ಮಿನುಗು
ಕಣ್ಣ ತುಂಬ ಜಗದ ಬೆಳದಿಂಗಳು.

ಹರಿವ ಹೊಳೆ ನಿಂತ ಗುಡ್ಡ
ಒಂದಕ್ಕೊಂದು ಹೊಂದಿ ಚಿಗುರು
ಚಿಮ್ಮಿದ ಗಿಡ ಮರಗಳು ಕುಳಿತು
ಹಕ್ಕಿಗಳು ಹಾಡಿದವು ರಾಗಗಳ
ಕ್ರಮಿಸಿದ ಹೆಜ್ಜೆಗಳು ಹಗುರಾಗಿ
ಗಾಳಿ ಬೀಸಿತು ತಂಪಾದ ಜಂಗಮ.

ಎಲ್ಲದರೊಳಗೆ ಇಲ್ಲವಾಗಿ ಕರಗಿ
ಇದ್ದುದರೊಳಗೆ ಶೂನ್ಯ ತುಂಬಿ
ಪಂಚಭೂತಗಳು ತೆರೆದ ಬಾಗಿಲು
ಕಿಟಕಿ, ಅಂಗಳದ ತುಂಬ ಮೌನ
ನಡೆದ ನಡುಗೆ ಕಲ್ಯಾಣದಿಂದ ಕದಳಿಗೆ
ಎಲ್ಲೆಲ್ಲೂ ಪಸರಿಸಿತು ಜ್ಞಾನ ಹೂವು, ಗಾಳಿ, ಗಂಧ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನದ ರೂಪನ್ನೆ ಬದಲಿಸುವ, ಬಾ!
Next post ಅಂತರ್ದರ್ಶನ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…