ಅಲ್ಲಮ

ನಡೆವ ದಾರಿಯಲಿ ಹೆಜ್ಜೆಗಳು
ಮೂಡಲಿಲ್ಲ ಅನುರಣಿಸಿತು ಸಪ್ಪಳ
ನಡೆವ ದಾರಿಯ ಇಕ್ಕೆಲಗಳಲಿ
ಬಯಲ ಬಿಂಬ ದಾರಿಗೆ ಇಂಬು
ಹುಡುಕಾಟದ ಬಯಲಿನಲಿ
ಖಾಲಿಯಲಿ ತುಂಬಿಕೊಂಡ ಹಸಿರು.

ಬೆಳಕಿಗಾಗಿ ಕಂದೀಲನ ಮರೆಮಾಚಿ
ದೇಹ ಹೊತ್ತವರ ಹರಿದಾಟ ಇರುಳ
ಮೆಲ್ಲಗೆ ಕಂಪ ಮರೆತು ಮಾಯೆ ಒಳಗೆ
ಇಳಿದ ಕಪ್ಪು ಕತ್ತಲ ತುಂಬ ನೀಲಿ
ಆಕಾಶದ ನಕ್ಷತ್ರಗಳ ಮಿನುಗು
ಕಣ್ಣ ತುಂಬ ಜಗದ ಬೆಳದಿಂಗಳು.

ಹರಿವ ಹೊಳೆ ನಿಂತ ಗುಡ್ಡ
ಒಂದಕ್ಕೊಂದು ಹೊಂದಿ ಚಿಗುರು
ಚಿಮ್ಮಿದ ಗಿಡ ಮರಗಳು ಕುಳಿತು
ಹಕ್ಕಿಗಳು ಹಾಡಿದವು ರಾಗಗಳ
ಕ್ರಮಿಸಿದ ಹೆಜ್ಜೆಗಳು ಹಗುರಾಗಿ
ಗಾಳಿ ಬೀಸಿತು ತಂಪಾದ ಜಂಗಮ.

ಎಲ್ಲದರೊಳಗೆ ಇಲ್ಲವಾಗಿ ಕರಗಿ
ಇದ್ದುದರೊಳಗೆ ಶೂನ್ಯ ತುಂಬಿ
ಪಂಚಭೂತಗಳು ತೆರೆದ ಬಾಗಿಲು
ಕಿಟಕಿ, ಅಂಗಳದ ತುಂಬ ಮೌನ
ನಡೆದ ನಡುಗೆ ಕಲ್ಯಾಣದಿಂದ ಕದಳಿಗೆ
ಎಲ್ಲೆಲ್ಲೂ ಪಸರಿಸಿತು ಜ್ಞಾನ ಹೂವು, ಗಾಳಿ, ಗಂಧ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನದ ರೂಪನ್ನೆ ಬದಲಿಸುವ, ಬಾ!
Next post ಅಂತರ್ದರ್ಶನ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys