ನೆನಪಿಡುವಳೆ?

ಅವನನ್ನು ಪ್ರೀತಿಸಿದ ಹುಡುಗಿ
ಒಮ್ಮೆ ಅವನೊಳಗೆ
ಮತ್ತೊಮ್ಮೆ ಅವನನ್ನು ತನ್ನೊಳಗೆ ಹುದಿಗಿಸಿಕೊಂಡು
ಮುತ್ತಿನ ಮಳೆ ಸುರಿಮಳೆ

ಅಮೆರಿಕದ ಬಿಳಿಗೊಂಬೆಗೆ
ನವಾಬ್, ಗಲ್ಲ ತುಟಿ ಒತ್ತಿ ಮುತ್ತಿ
ಮೇಲಕ್ಕೆತ್ತಿ ಸತ್ಯದ ಕತೆ
ಬಿಚ್ಚುವಿಕೆಯ ಹೊಯ್ದಾಟ
ಏನೂ ಇಲ್ಲದ ನವಾಬು ದರ್ಬಾರು
ಸುಳ್ಳಿನ ಕಂತೆ ಕಟ್ಟಿದ್ದು…..

ನಂಬಿದ ಹುಡುಗಿ
ತಾಜಮಹಲಿನ ಮನೆ ಕನಿಸುತಿದೆ
ರೆಕ್ಕೆಯೇ ಇವಳು.

ಸುಳ್ಳು ನವಾಬನ ಸಂಕಟ
ವಿಮಾನ ತುಂಬ ಸುತ್ತಾಟ
ಹೇಳುವದೇನು ಮನೆಗೆ ಬರುವ ಇವಳಿಗೆ?
ಕೋಣೆ ಬಾಗಿಲುಗಳಿಲ್ಲದ
ಓಡಾಡುವ ಮನೆಯೊಳಗೆ
ಕೋಳಿಗಳು;
ಬುರ್ಕಾದಡಿಯಲ್ಲಿಯ
ಅಮ್ಮಿಜಾನ್ ಅಬ್ಬಾಜಾನ್ ಪ್ರೀತಿ
ನೆನಪಿಡುವಳೆ?
ಅಥವಾ
ಮೂಗು ಮುರಿದು…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಸರಣ
Next post ಕೈವಾಡ!

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…