ಸಂಸರಣ

ವಿಶ್ವದಂಗಳ ತೃಣ-ತೃಣದ ಕಣವದು
ಜೀವ ಜಾಲದ ಬದುಕಿಗೆ
ನನಗೆ ನಿನಗೆಂದೆಣಿಸುವೇತಕೆ ಉರಿದು
ಬೀಳೋ ಅಸ್ಥಿಯ ಭ್ರಾಂತಿಗೆ |

ಎನಿತು ರೂಪರೂಪ ಭೇದವು
ಒಂದೇ ಜೀವದಿ ಸಮತೆಯು
ವಿಕಾಸ ದೃಷ್ಟಿಗೆ ಸೃಷ್ಟಿಗರ್ಭದ
ಮೂರ್ತ ಮೂರ್ತದ ದರುಶನ
ನವ್ಯ ನವಕೆ ಶುಭೋದಯವು
ನಿತ್ಯ ಸತ್ಯ ದಿನಪನ ಚೇತನ |

ಋತು ಚಕ್ರದ ಮಿಥುನ ಫಲವು
ಪ್ರಾಣ ಸ್ಪುರಣದುಗಮದಿರುವು
ನಾದ ಕ್ರತುವಿನನುಭಾವ ಸೌಧದ
ಜೀವ ದೇವ ಭಾವದ ಗೆಳೆತನ
ಬಂಧ ಬಂಧದ ಸೇತು ಬಂಧವು
ಸಂಸರಣ ಸಾರದ ನಂದನ |

ಹತನ ತನದಾ ಧೂರ್ತ ಕ್ರೌರ್ಯವು
ದಾನವನ ರಣದಾನನ
ಜತನ ಪಾವನ ಶೀಲ ತನವದೆ
ಹರಿಹರರ ಸಮತೆಯ ಚೇತನ
ಬಾಳ್ವೆ ಬಾಳ್ವೆಯ ಚೆಲ್ವ ಬಾಳ್ವೆಯು
ಸಗ್ಗ ಸಂವರಣದ ಸಾಧನ |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಜಲ್
Next post ನೆನಪಿಡುವಳೆ?

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…