ಸಂಸರಣ

ವಿಶ್ವದಂಗಳ ತೃಣ-ತೃಣದ ಕಣವದು
ಜೀವ ಜಾಲದ ಬದುಕಿಗೆ
ನನಗೆ ನಿನಗೆಂದೆಣಿಸುವೇತಕೆ ಉರಿದು
ಬೀಳೋ ಅಸ್ಥಿಯ ಭ್ರಾಂತಿಗೆ |

ಎನಿತು ರೂಪರೂಪ ಭೇದವು
ಒಂದೇ ಜೀವದಿ ಸಮತೆಯು
ವಿಕಾಸ ದೃಷ್ಟಿಗೆ ಸೃಷ್ಟಿಗರ್ಭದ
ಮೂರ್ತ ಮೂರ್ತದ ದರುಶನ
ನವ್ಯ ನವಕೆ ಶುಭೋದಯವು
ನಿತ್ಯ ಸತ್ಯ ದಿನಪನ ಚೇತನ |

ಋತು ಚಕ್ರದ ಮಿಥುನ ಫಲವು
ಪ್ರಾಣ ಸ್ಪುರಣದುಗಮದಿರುವು
ನಾದ ಕ್ರತುವಿನನುಭಾವ ಸೌಧದ
ಜೀವ ದೇವ ಭಾವದ ಗೆಳೆತನ
ಬಂಧ ಬಂಧದ ಸೇತು ಬಂಧವು
ಸಂಸರಣ ಸಾರದ ನಂದನ |

ಹತನ ತನದಾ ಧೂರ್ತ ಕ್ರೌರ್ಯವು
ದಾನವನ ರಣದಾನನ
ಜತನ ಪಾವನ ಶೀಲ ತನವದೆ
ಹರಿಹರರ ಸಮತೆಯ ಚೇತನ
ಬಾಳ್ವೆ ಬಾಳ್ವೆಯ ಚೆಲ್ವ ಬಾಳ್ವೆಯು
ಸಗ್ಗ ಸಂವರಣದ ಸಾಧನ |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಜಲ್
Next post ನೆನಪಿಡುವಳೆ?

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…