Home / ಕಥೆ / ಕಿರು ಕಥೆ / ಮೊದಲ ಮುಖ

ಮೊದಲ ಮುಖ

ಹೂವಿನ ಮೃದುಲ ದಳಗಳು ರಂಗೇರಿದ ಬಣ್ಣದ ಸೌಂದರ್ಯದಿಂದ ಕೂಡಿ ಸೂರ್ಯನ ಕಿರಣದೊಂದಿಗೆ ಆಡುತ್ತ, ಗಂಧದ ಹಾಡನ್ನು ಹಾಡುತ್ತ ಗಿಡದಲ್ಲಿ ನಗುಮುಖದಿಂದ ನರ್ತಿಸುತ್ತಿತ್ತು. ಪಕ್ಕದಲ್ಲಿದ್ದ ಮುಳ್ಳು ಹೂವಿನ ಮಗ್ಗುಲಲ್ಲಿ ನಿಂತು ಹೇಳಿತು.

“ನಿನ್ನ ಮುಖ ಬಹಳ ಸುಂದರವಿರಬಹುದು. ಸೂರ್ಯ, ಚಂದ್ರರು ನಿನ್ನ ಸಖರಿರಬಹುದು. ನಕ್ಷತ್ರಗಳು ನಿನ್ನ ನೋಡಿ ಮೋಹಿಸಬಹುದು. ಆದರೆ ನಿನ್ನ ತಂದೆ ತಾಯಿಗಳು ಹುಟ್ಟುವ ಮುಂಚೆ ನಿನ್ನ ಮುಖ ಹೇಗಿತ್ತು ಅಂತ ತಿಳುದಿರುವಿಯಾ?”

“ನಿನ್ನ ನಿಜ ಮುಖವೇನು ಎಂದು ಎಂದಾದರೂ ಚಿಂತಿಸಿರುವೆಯಾ?” ಎಂದು ಮುಳ್ಳು ಮೊಟಕಿ ಕೇಳಿತು.

ಸಂತಸದಲ್ಲಿ ತೇಲುತ್ತಿದ್ದ ಹೂವಿಗೆ ಒಮ್ಮಿಂದೊಮ್ಮೆಲೆ ಆಲೋಚನೆಯಾಯಿತು. “ಇದೇನು ಪ್ರಶ್ನೆ? ನಾನು ಎಂದೂ ಯೋಚಿಸಿಲ್ಲವಲ್ಲ” ಎಂದು ಚಿಂತಾಕ್ರಾಂತವಾಯಿತು.

ಆಗಸಕ್ಕೆ ಮೊಗವೆತ್ತಿ ಕೇಳಿತು- “ನನ್ನ ತಂದೆ ತಾಯಿ ಹುಟ್ಟುವ ಮುಂಚೆ ನನ್ನ ಮುಖ ಹೇಗಿತ್ತು ಎಂದು ನೀನೋಡಿರುವೆಯಾ?” ಎಂದಿತು. ತಂಪಾದ ಮಳೆ ಹನಿಗಳು ಹೂವಿನ ಎದೆಯಲ್ಲಿ ಒಂದು ಕ್ಷಣ ನಿಂತು ಧ್ವನಿ ಕೇಳಿಸಿಕೊಳ್ಳದೆ ಕೆಳಗೆ ಹರಿದು ಬಿಟ್ಟಾಗ ಹೂವಿಗೆ ಉತ್ತರ ಸಿಗಲಿಲ್ಲ. ಇನ್ನು ಬೆಳಗಿನ ಜಾವದ ಇಬ್ಬನಿ ಹತ್ತಿರ ಹೋಗಿ ಮೆಲ್ಲಗೆ ಹೂ ಕೇಳಿತು ಅದೇ ಪ್ರಶ್ನೆ.

ಇಬ್ಬನಿ ಹೇಳಿತು “ನಿನ್ನ ಮುಖ ಹೇಗಿದೆ ಎಂದು ತಿಳಿಯುವುದರೊಳಗೆ ನಾನು ಇಂಗಿ ಹೋಗುತ್ತೇನೆ. ಇನ್ನು ನಿನ್ನ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ?” ಎಂದಿತು. ಹೂವಿಗೆ ಎದೆಗುದಿ. “ಇದೇನು ಮುಳ್ಳು, ಪ್ರಶ್ನೆ ಚುಚ್ಚಿ ಬಿಟ್ಟಿದೆ ನನ್ನಲ್ಲಿ, ಎಂದು ಹೂವು ಶಪಿಸಿಕೊಂಡಿತು.

ಬೀಸುವ ತಂಗಾಳಿಯನ್ನು, ಒಮ್ಮೆ ಕೇಳಿನೋಡುವೆನೆಂದು ಕೊಂಡಿತು. ಗಾಲಿಯಿಲ್ಲದೆಯೆ ನಿಲ್ಲದೆ ಸುತ್ತುವ ಈ ಗಾಳಿಯನ್ನು ನಿಲ್ಲಿಸಿ ಕೇಳುವುದುಂಟೆ ಎಂದು ಕೈ ಬಿಟ್ಟಿತು. ಅಷ್ಟರಲ್ಲಿ ತೋಟಮಾಲಿ ಅಲ್ಲಿಗೆ ಬಂದ. ಅವನಲ್ಲಿ ಕೇಳಿತು ಹೂ ಅದೇ ಪ್ರಶ್ನೆ. ಮಾಲಿ ಹೇಳಿದ- ಈಗ ತಾನೆ ನನ್ನ ಹಿಡಿಯಲ್ಲಿದ್ದ ಬೀಜಗಳನ್ನು ಭೂಮಿಗೆ ಬಿತ್ತಿ ಬಂದೆ. “ನೀನು ಭೂಮಿಯನ್ನು ಕೇಳಿದರೆ ಉತ್ತರ ಸಿಗಬಹುದು” ಎಂದ. ಅಷ್ಟು ಹೊತ್ತು ಪರಿತಪಿಸಿ, ಪರಿತಪಿಸಿದ ಹೂವಿನ ದಳವೆಲ್ಲ ಉದರಿ ಬೀಜವಾಗುತ್ತ ಕೊನೆಗೆ ಭೂಮಿಗೆ ಬಿತ್ತು. ಭೂಮಿಯ ಎದೆಯಲ್ಲಿ ಅಡಗಿದ ಬೀಜಗಳಲ್ಲ ಮೊಳೆಕೆಯ ಮುದ್ದು ಮಾತಿನಲ್ಲಿ ಹೂ ಬೀಜವನ್ನು ಮಾತನಾಡಿಸಿದವು. ಪ್ರಶ್ನೆಗೆ ಉತ್ತರ ವಿತ್ತವು, ಬೀಜ, ಮೊಳಕೆ, ಗಿಡ, ವೃಕ್ಷ ತನ್ನ ತಾಯಿತಂದೆ, ಅಜ್ಜಾ ಅಜ್ಜಿ, ಎಲ್ಲರ ಮುಖ ಬಿಂಬದಲ್ಲಿ ತನ್ನ ಮುಖದ ಪ್ರತಿಬಿಂಬ ಕಂಡು ಹೂಬೀಜ ಹಿಗ್ಗಿತ್ತು. ಮುಳ್ಳಿನ ಪ್ರಶ್ನೆಗೆ ಉತ್ತರ ಕಂಡುಕೊಂಡಿತು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...