Home / ಕಥೆ / ಕಿರು ಕಥೆ / ಮೊದಲ ಮುಖ

ಮೊದಲ ಮುಖ

ಹೂವಿನ ಮೃದುಲ ದಳಗಳು ರಂಗೇರಿದ ಬಣ್ಣದ ಸೌಂದರ್ಯದಿಂದ ಕೂಡಿ ಸೂರ್ಯನ ಕಿರಣದೊಂದಿಗೆ ಆಡುತ್ತ, ಗಂಧದ ಹಾಡನ್ನು ಹಾಡುತ್ತ ಗಿಡದಲ್ಲಿ ನಗುಮುಖದಿಂದ ನರ್ತಿಸುತ್ತಿತ್ತು. ಪಕ್ಕದಲ್ಲಿದ್ದ ಮುಳ್ಳು ಹೂವಿನ ಮಗ್ಗುಲಲ್ಲಿ ನಿಂತು ಹೇಳಿತು.

“ನಿನ್ನ ಮುಖ ಬಹಳ ಸುಂದರವಿರಬಹುದು. ಸೂರ್ಯ, ಚಂದ್ರರು ನಿನ್ನ ಸಖರಿರಬಹುದು. ನಕ್ಷತ್ರಗಳು ನಿನ್ನ ನೋಡಿ ಮೋಹಿಸಬಹುದು. ಆದರೆ ನಿನ್ನ ತಂದೆ ತಾಯಿಗಳು ಹುಟ್ಟುವ ಮುಂಚೆ ನಿನ್ನ ಮುಖ ಹೇಗಿತ್ತು ಅಂತ ತಿಳುದಿರುವಿಯಾ?”

“ನಿನ್ನ ನಿಜ ಮುಖವೇನು ಎಂದು ಎಂದಾದರೂ ಚಿಂತಿಸಿರುವೆಯಾ?” ಎಂದು ಮುಳ್ಳು ಮೊಟಕಿ ಕೇಳಿತು.

ಸಂತಸದಲ್ಲಿ ತೇಲುತ್ತಿದ್ದ ಹೂವಿಗೆ ಒಮ್ಮಿಂದೊಮ್ಮೆಲೆ ಆಲೋಚನೆಯಾಯಿತು. “ಇದೇನು ಪ್ರಶ್ನೆ? ನಾನು ಎಂದೂ ಯೋಚಿಸಿಲ್ಲವಲ್ಲ” ಎಂದು ಚಿಂತಾಕ್ರಾಂತವಾಯಿತು.

ಆಗಸಕ್ಕೆ ಮೊಗವೆತ್ತಿ ಕೇಳಿತು- “ನನ್ನ ತಂದೆ ತಾಯಿ ಹುಟ್ಟುವ ಮುಂಚೆ ನನ್ನ ಮುಖ ಹೇಗಿತ್ತು ಎಂದು ನೀನೋಡಿರುವೆಯಾ?” ಎಂದಿತು. ತಂಪಾದ ಮಳೆ ಹನಿಗಳು ಹೂವಿನ ಎದೆಯಲ್ಲಿ ಒಂದು ಕ್ಷಣ ನಿಂತು ಧ್ವನಿ ಕೇಳಿಸಿಕೊಳ್ಳದೆ ಕೆಳಗೆ ಹರಿದು ಬಿಟ್ಟಾಗ ಹೂವಿಗೆ ಉತ್ತರ ಸಿಗಲಿಲ್ಲ. ಇನ್ನು ಬೆಳಗಿನ ಜಾವದ ಇಬ್ಬನಿ ಹತ್ತಿರ ಹೋಗಿ ಮೆಲ್ಲಗೆ ಹೂ ಕೇಳಿತು ಅದೇ ಪ್ರಶ್ನೆ.

ಇಬ್ಬನಿ ಹೇಳಿತು “ನಿನ್ನ ಮುಖ ಹೇಗಿದೆ ಎಂದು ತಿಳಿಯುವುದರೊಳಗೆ ನಾನು ಇಂಗಿ ಹೋಗುತ್ತೇನೆ. ಇನ್ನು ನಿನ್ನ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ?” ಎಂದಿತು. ಹೂವಿಗೆ ಎದೆಗುದಿ. “ಇದೇನು ಮುಳ್ಳು, ಪ್ರಶ್ನೆ ಚುಚ್ಚಿ ಬಿಟ್ಟಿದೆ ನನ್ನಲ್ಲಿ, ಎಂದು ಹೂವು ಶಪಿಸಿಕೊಂಡಿತು.

ಬೀಸುವ ತಂಗಾಳಿಯನ್ನು, ಒಮ್ಮೆ ಕೇಳಿನೋಡುವೆನೆಂದು ಕೊಂಡಿತು. ಗಾಲಿಯಿಲ್ಲದೆಯೆ ನಿಲ್ಲದೆ ಸುತ್ತುವ ಈ ಗಾಳಿಯನ್ನು ನಿಲ್ಲಿಸಿ ಕೇಳುವುದುಂಟೆ ಎಂದು ಕೈ ಬಿಟ್ಟಿತು. ಅಷ್ಟರಲ್ಲಿ ತೋಟಮಾಲಿ ಅಲ್ಲಿಗೆ ಬಂದ. ಅವನಲ್ಲಿ ಕೇಳಿತು ಹೂ ಅದೇ ಪ್ರಶ್ನೆ. ಮಾಲಿ ಹೇಳಿದ- ಈಗ ತಾನೆ ನನ್ನ ಹಿಡಿಯಲ್ಲಿದ್ದ ಬೀಜಗಳನ್ನು ಭೂಮಿಗೆ ಬಿತ್ತಿ ಬಂದೆ. “ನೀನು ಭೂಮಿಯನ್ನು ಕೇಳಿದರೆ ಉತ್ತರ ಸಿಗಬಹುದು” ಎಂದ. ಅಷ್ಟು ಹೊತ್ತು ಪರಿತಪಿಸಿ, ಪರಿತಪಿಸಿದ ಹೂವಿನ ದಳವೆಲ್ಲ ಉದರಿ ಬೀಜವಾಗುತ್ತ ಕೊನೆಗೆ ಭೂಮಿಗೆ ಬಿತ್ತು. ಭೂಮಿಯ ಎದೆಯಲ್ಲಿ ಅಡಗಿದ ಬೀಜಗಳಲ್ಲ ಮೊಳೆಕೆಯ ಮುದ್ದು ಮಾತಿನಲ್ಲಿ ಹೂ ಬೀಜವನ್ನು ಮಾತನಾಡಿಸಿದವು. ಪ್ರಶ್ನೆಗೆ ಉತ್ತರ ವಿತ್ತವು, ಬೀಜ, ಮೊಳಕೆ, ಗಿಡ, ವೃಕ್ಷ ತನ್ನ ತಾಯಿತಂದೆ, ಅಜ್ಜಾ ಅಜ್ಜಿ, ಎಲ್ಲರ ಮುಖ ಬಿಂಬದಲ್ಲಿ ತನ್ನ ಮುಖದ ಪ್ರತಿಬಿಂಬ ಕಂಡು ಹೂಬೀಜ ಹಿಗ್ಗಿತ್ತು. ಮುಳ್ಳಿನ ಪ್ರಶ್ನೆಗೆ ಉತ್ತರ ಕಂಡುಕೊಂಡಿತು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...