ಮೊದಲ ಮುಖ

ಹೂವಿನ ಮೃದುಲ ದಳಗಳು ರಂಗೇರಿದ ಬಣ್ಣದ ಸೌಂದರ್ಯದಿಂದ ಕೂಡಿ ಸೂರ್ಯನ ಕಿರಣದೊಂದಿಗೆ ಆಡುತ್ತ, ಗಂಧದ ಹಾಡನ್ನು ಹಾಡುತ್ತ ಗಿಡದಲ್ಲಿ ನಗುಮುಖದಿಂದ ನರ್ತಿಸುತ್ತಿತ್ತು. ಪಕ್ಕದಲ್ಲಿದ್ದ ಮುಳ್ಳು ಹೂವಿನ ಮಗ್ಗುಲಲ್ಲಿ ನಿಂತು ಹೇಳಿತು.

“ನಿನ್ನ ಮುಖ ಬಹಳ ಸುಂದರವಿರಬಹುದು. ಸೂರ್ಯ, ಚಂದ್ರರು ನಿನ್ನ ಸಖರಿರಬಹುದು. ನಕ್ಷತ್ರಗಳು ನಿನ್ನ ನೋಡಿ ಮೋಹಿಸಬಹುದು. ಆದರೆ ನಿನ್ನ ತಂದೆ ತಾಯಿಗಳು ಹುಟ್ಟುವ ಮುಂಚೆ ನಿನ್ನ ಮುಖ ಹೇಗಿತ್ತು ಅಂತ ತಿಳುದಿರುವಿಯಾ?”

“ನಿನ್ನ ನಿಜ ಮುಖವೇನು ಎಂದು ಎಂದಾದರೂ ಚಿಂತಿಸಿರುವೆಯಾ?” ಎಂದು ಮುಳ್ಳು ಮೊಟಕಿ ಕೇಳಿತು.

ಸಂತಸದಲ್ಲಿ ತೇಲುತ್ತಿದ್ದ ಹೂವಿಗೆ ಒಮ್ಮಿಂದೊಮ್ಮೆಲೆ ಆಲೋಚನೆಯಾಯಿತು. “ಇದೇನು ಪ್ರಶ್ನೆ? ನಾನು ಎಂದೂ ಯೋಚಿಸಿಲ್ಲವಲ್ಲ” ಎಂದು ಚಿಂತಾಕ್ರಾಂತವಾಯಿತು.

ಆಗಸಕ್ಕೆ ಮೊಗವೆತ್ತಿ ಕೇಳಿತು- “ನನ್ನ ತಂದೆ ತಾಯಿ ಹುಟ್ಟುವ ಮುಂಚೆ ನನ್ನ ಮುಖ ಹೇಗಿತ್ತು ಎಂದು ನೀನೋಡಿರುವೆಯಾ?” ಎಂದಿತು. ತಂಪಾದ ಮಳೆ ಹನಿಗಳು ಹೂವಿನ ಎದೆಯಲ್ಲಿ ಒಂದು ಕ್ಷಣ ನಿಂತು ಧ್ವನಿ ಕೇಳಿಸಿಕೊಳ್ಳದೆ ಕೆಳಗೆ ಹರಿದು ಬಿಟ್ಟಾಗ ಹೂವಿಗೆ ಉತ್ತರ ಸಿಗಲಿಲ್ಲ. ಇನ್ನು ಬೆಳಗಿನ ಜಾವದ ಇಬ್ಬನಿ ಹತ್ತಿರ ಹೋಗಿ ಮೆಲ್ಲಗೆ ಹೂ ಕೇಳಿತು ಅದೇ ಪ್ರಶ್ನೆ.

ಇಬ್ಬನಿ ಹೇಳಿತು “ನಿನ್ನ ಮುಖ ಹೇಗಿದೆ ಎಂದು ತಿಳಿಯುವುದರೊಳಗೆ ನಾನು ಇಂಗಿ ಹೋಗುತ್ತೇನೆ. ಇನ್ನು ನಿನ್ನ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ?” ಎಂದಿತು. ಹೂವಿಗೆ ಎದೆಗುದಿ. “ಇದೇನು ಮುಳ್ಳು, ಪ್ರಶ್ನೆ ಚುಚ್ಚಿ ಬಿಟ್ಟಿದೆ ನನ್ನಲ್ಲಿ, ಎಂದು ಹೂವು ಶಪಿಸಿಕೊಂಡಿತು.

ಬೀಸುವ ತಂಗಾಳಿಯನ್ನು, ಒಮ್ಮೆ ಕೇಳಿನೋಡುವೆನೆಂದು ಕೊಂಡಿತು. ಗಾಲಿಯಿಲ್ಲದೆಯೆ ನಿಲ್ಲದೆ ಸುತ್ತುವ ಈ ಗಾಳಿಯನ್ನು ನಿಲ್ಲಿಸಿ ಕೇಳುವುದುಂಟೆ ಎಂದು ಕೈ ಬಿಟ್ಟಿತು. ಅಷ್ಟರಲ್ಲಿ ತೋಟಮಾಲಿ ಅಲ್ಲಿಗೆ ಬಂದ. ಅವನಲ್ಲಿ ಕೇಳಿತು ಹೂ ಅದೇ ಪ್ರಶ್ನೆ. ಮಾಲಿ ಹೇಳಿದ- ಈಗ ತಾನೆ ನನ್ನ ಹಿಡಿಯಲ್ಲಿದ್ದ ಬೀಜಗಳನ್ನು ಭೂಮಿಗೆ ಬಿತ್ತಿ ಬಂದೆ. “ನೀನು ಭೂಮಿಯನ್ನು ಕೇಳಿದರೆ ಉತ್ತರ ಸಿಗಬಹುದು” ಎಂದ. ಅಷ್ಟು ಹೊತ್ತು ಪರಿತಪಿಸಿ, ಪರಿತಪಿಸಿದ ಹೂವಿನ ದಳವೆಲ್ಲ ಉದರಿ ಬೀಜವಾಗುತ್ತ ಕೊನೆಗೆ ಭೂಮಿಗೆ ಬಿತ್ತು. ಭೂಮಿಯ ಎದೆಯಲ್ಲಿ ಅಡಗಿದ ಬೀಜಗಳಲ್ಲ ಮೊಳೆಕೆಯ ಮುದ್ದು ಮಾತಿನಲ್ಲಿ ಹೂ ಬೀಜವನ್ನು ಮಾತನಾಡಿಸಿದವು. ಪ್ರಶ್ನೆಗೆ ಉತ್ತರ ವಿತ್ತವು, ಬೀಜ, ಮೊಳಕೆ, ಗಿಡ, ವೃಕ್ಷ ತನ್ನ ತಾಯಿತಂದೆ, ಅಜ್ಜಾ ಅಜ್ಜಿ, ಎಲ್ಲರ ಮುಖ ಬಿಂಬದಲ್ಲಿ ತನ್ನ ಮುಖದ ಪ್ರತಿಬಿಂಬ ಕಂಡು ಹೂಬೀಜ ಹಿಗ್ಗಿತ್ತು. ಮುಳ್ಳಿನ ಪ್ರಶ್ನೆಗೆ ಉತ್ತರ ಕಂಡುಕೊಂಡಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಸಿದುಣುವಾರೋಗ್ಯ ಹೆಚ್ಚೊ? ಕಾಸುಣುವಡುಗೆ ಹೆಚ್ಚೊ?

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…