ಬೆಳಗುಜಾವದಲಿ

ಬೆಳಗುಜಾವದಲಿ
ಹರಿ ನಿನ್ನ ದರ್ಶಿಸೆ
ನಯನಾನಂದವು|
ಪ್ರಸನ್ನ, ಕರುಣಾಸಂಪನ್ನ
ಹರಿ ನಿನ್ನ ಧ್ಯಾನಿಪೇ
ಮನಸಿಗೆ ಹರ್ಷಾನಂದವು|
ಹರಿ ನಿನ್ನನೆಬ್ಬಿಸುವ ಸುಪ್ರಭಾತವು
ಅದುವೇ ಕರ್ಣಾನಂದವು ||

ಉದಯ ರವಿಯು
ನಿನ್ನ ಗುಡಿ ಗೋಪುರದ
ಕಾಂತಿಯನು ಬೆಳಗುತಲಿ
ದ್ವಿಗುಣಗೊಳಿಸುತಿಹನು|
ಹಕ್ಕಿ ಚಿಲಿಪಿಲಿ ಕಲರವ,
ನದಿಯ ಝುಳುಝುಳು ಗಾನ
ಸಂಗೀತ ಸುಧೆಯನುಣಿಸುತ್ತಿಹುದು||

ವಿಪ್ರರೆಲ್ಲರು ಸೇರಿ ಬಗೆ ಬಗೆಯ
ಪೀತಾಂಬರ ಧರಿಸಿ|
ತಿಲಕ ನಾಮಾದಿಗಳನಿರಿಸಿ
ಸಂಧ್ಯಾವಂದನೆ ಮಾಡಿರಲು|
ವೈಕುಂಠ, ಕೈಲಾಸವೇ
ಧರೆಗಿಳಿದಿಹುದೆನಿಸುತ್ತಿಹುದು||

ವನಿತೆ, ಸುಮಂಗಳೆ
ಮುತ್ತೈದೆಯರೆಲ್ಲರು
ನಾರು ಮಡಿಯನುಟ್ಟು
ಹೆಜ್ಜೆ ಪ್ರದಕ್ಷಣೆಯ ಮಾಡಿರಲು|
ಅತ್ತ ಹವನ ಹೋಮಾದಿ
ಮಂತ್ರ ವೇದಘೋಷ ಮೊಳಗಿರಲು
ಈ ಭುವಿ ಸ್ವರ್ಗವೆನಿಸುತ್ತಿಹುದು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಳಿವಿನ ಅಂಚಿನಲ್ಲಿ ರಾಷ್ಟ್ರ ಪ್ರಾಣಿ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೧

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

cheap jordans|wholesale air max|wholesale jordans|wholesale jewelry|wholesale jerseys