Home / ಕವನ / ಕವಿತೆ / ಅವನು-ಅವಳು

ಅವನು-ಅವಳು

ಕಲನಾದಿನಿ ಕಾವೇರಿಯ ತೀರದಿ
ತನ್ನನೆ ನೆನೆಯುತಲವನಿದ್ದ;
ತನ್ನ ಬಿಜ್ಜೆ ಕುಲ ಶೀಲ ಸಂಪತ್ತು
ತನ್ನ ರೂಪು ತನ್ನೊಳೆ ಇದ್ದ.

ತನ್ನವರೊಲ್ಲದ ಸರಸತಿ ನವವಧು
ಗಂಡನ ಮಡಿವಾಳಿತಿಯಾಗಿ
ಹಿಂಡುಬಟ್ಟೆಗಳ ಹಿಂಡಲು ಬಂದಳು
ಜವ್ವನದುಲ್ಲಸದೊಳು ತೂಗಿ.

ಕರೆಯೊಳಗಿಬ್ಬರೆ-ಆರೋ ಎನ್ನುತ
ಸೆರಗೆದೆಗೆಳೆವಳು ನಾಚುತಲಿ,
ಬಳಿಕಿವನೇ-ಸರಿ-ಭಯವೇನೆನ್ನುತ
ಹೊಳೆಗಿಳಿವಳು ನಿರ್ಲಕ್ಷ್ಯದಲಿ.

ಬಿಂಕದವನೀತ, ಬಿಂಕದವಳಾಕೆ,
ಮೌನ ನೆರವು ಮನ ಮಾತಾಡೆ;
ಕಣ್ ಕಣ್ ಕೂಟವೆ ಸಾಕಾಯ್ತವರಿಗೆ
ಬೇಟದ ಬಿರುನುಡಿ ಸಿಡಿದಾಡೆ.

“ಆಹಾ ನೀ ಸುಂದರಿ, ದಿಟ, ಆದೊಡೆ
ಮರುಕವ ತರುವುದು ಈ ಚೆಲುವು;
ಇದರಿಂಬಿಗೆ ನಿರ್ಭಾಗ್ಯರ ಮನೆಯೇ?
ಎನ್ನುತ ಸುಯ್ಯುವುದೆನ್ನೊಲವು.”

ಎನಲಾಕೆಯು ತಾತ್ಸಾರದಿ ನುಡಿವಳು:
“ನಿನ್ನ ಮರುಕವಾರಿಗೆ ಬೇಕು!
ಸುಮ್ಮನಿರೈ ನನ್ನಿದಿರೇ ಈ ಹಿಡಿ-
ಹೊನ್ನಳತೆಯ ನೇಹದ ಕಾಕು”

ಎನೆ ಅವನಿಂತೆಂದನು ನಸು ನಾಚುತ:
“ತಪ್ಪು ತಪ್ಪು ನಮ್ಮಪ್ಪನದೊಪ್ಪಿದೆ;
ಹಣಕೂ ಮಿಗಿಲಾಯ್ತಭಿಮಾನ
ಕೇಳಿದ ತಪ್ಪಿಗೆ ಕೊಡೆನೆನ್ನುವ ತ-
ಪ್ಪೀ ಹೋರಾಟದಿ ಸೊಗವೂನ.”

ಸರಸತಿ ಮೌನದೊಳೇ ಮರನುಡಿದಳು:
“ತಪ್ಪೋ ಒಪ್ಪೋ ಸೊಗವೋ ಸುಯ್ಯಲೊ
ನಿನ್ನದು ನಿನಗೆನ್ನದು ನನಗೆ-
ನಿನ್ನವರ ಬಿಂಕಕೆನ್ನೊಲವೆ ಸುಂಕ?
ಪೋ, ಇನ್ನಾ ಮಾತೇಕೆಮಗೆ!

ನಿನ್ನ ರೂಪ ಸಿರಿ ಬಿಚ್ಚೆ ಬಿಗುಮಾನ
ನಿನಗೆಯೆ ಇರಲೇ ಪಿತೃಭಕ್ತಿ-
ಇದೆ ಸಾಕಿದೆಸಾಕಿದೆಸಾಕೆನಗೀ
ಬಡವರ ನೆರವಿನೊಳೇ ಮುಕ್ತಿ.”

ಬಿರುಸಿನೊಳೊಗೆಯುವ ಬಟ್ಟೆಯ ಸದ್ದಿನೊ-
ಳೀ ತೆರ ಬಿರುನುಡಿಗಳ ನುಡಿದು
ಕಜ್ಜ ತೀರೆ ಮೇಲೆದ್ದು ನಡೆದಳು
ರೂಪಶೀಲದಿಂದೆದೆ ಕಡೆದು.

ಹುಸಿಮರುಕದ ಹೊಗೆಯಾರುತಲಾಸೆಯ
ಕಿಡಿಯುರಿದೊಲುಮೆಯ ಬೆಳಕಾಗಿ
ಬಿಂಕವ ಸುಟ್ಟು ನಿರಾಸೆಯ ತೋರಲು
ಎಂತು ಸುಯ್ದನವ ನಿಡಿದಾಗಿ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...