Home / ಕವನ / ಕವಿತೆ / ನಂ ನಂ ಮಾತು

ನಂ ನಂ ಮಾತು

ಪುಟ್ನಂಜಿ! ಬಿರ್‍ಬಿರ್‍ನೆ ಬಾಗಿಲ್ನ ತೆರದಿಕ್ಕು
ಬೇವಾರ್‍ಸಿ ಬಂದೌನೆ ಕಾಯ್ತೌನೆ- ತಡವಾದ್ರೆ
ಗಾಳ್ಯಾಗಿ ಬಂದು ಬಡದೇನು. ೧

ನನ್ ರತ್ನ! ನೀ ಬಂದು ಬಡಿಗಿಡಿಯೋದ್ ಎಲ್ಬಂತು?
ಗಾಳ್ಯಾಗಿ ನೀ ಬಂದ್ರೆ ನನಗೇನು-ನಾನೊಂದು
ಮೀನಾಗಿ ವೊಳೆಯಾಗ ಮುಳುಗೇನು. ೨

ಮೀನಾಗಿ ನೀ ನೀರ್‍ಗೆ ಮೋಚ್‌ಗೀಚ್ಕೊಂಡ್ರೇನಂತೆ
ನಿನ್ಗೆ ನಾ ಸುಂಸುಂಕೆ ಬಿಟ್ಟೇನ- ಬೆಸ್ತ್ರೋವ
ನಾನಾಗಿ ಬಂದು ನಿಂಗ್ ಇಡದೇನು. ೩

ಮೀನನಿಡಿಯಲು ನೀನು ಬೆಸ್ತನಾದ್ರ್ ಏನೀಗ
ಮೋಡ್ವಾಗಿ ನಾನ್ ಆರಿ ವೋಗೇನು-ಆಕಾಸ
ದಲ್ಲೆಲ್ಲ ಮೆಲ್ಮೆಲ್ನೆ ಜಾರೇನು. ೪

ಮೋಡ್ವಾಗಿ ಮೇಗಡೇ ಮೇಲ್ಮೆಲ್ನೆ ನೀ ವೋಗು
ಅನಿಮಳೆ ರೂಪಾವ ತಾಳೇನು-ನಾ ಬಂದು
ನಿನ್ ಜೊತೆಗೆ ಆಯಾಗಿ ಬಾಳೇನು. ೫

ಅನಿಮಳೆ ನೀನಾಗಿ ನನ್ನೇನ್ರ ಮುಟ್ಬಂದ್ರೆ
ಬೂಮೀಲಿ ಅಸರುಲ್ಲು ಆದೇನು-ವುಲ್ಲಾಗಿ
ನಿನ್ ಮರ್‍ತು ವೊರ್‍ವಾಗಿ ಬೆಳದೇನು ೬

ನೀನ್ ಅಸರು ವುಲ್ಲಾಗಿ ಬೆಳೆದು ಬಾ ಬೇಬೇಗ
ಕುರಿಯಾಗಿ ಆರಾರ್‍ತ ಬಂದೇನು-ನಿನ್ ತಬ್ಬಿ
ಮುತ್ತಿಕ್ಕಿ ಮುಕ್ಕಿ ನಾ ಮುಗಿಸೇನು. ೭

ಕುರಿಯಾಗಿ ನೀ ಬಂದು ವುಲ್ಲ ಮುಕ್ಕೋದಾದ್ರೆ
ವೊಲಿಯೋವ ಸೂಜಿ ನಾನ್ ಆದೇನು- ಚಿಪ್ಪಿಗನ
ಬಟ್ಟೇಲಿ ವೊಕ್ಕು ನಾ ನಡದೇನು. ೮

ಸೂಜಾಗಿ ಚಿಪ್ಪಿಗನ ಬಟ್ಟೇಲಿ ನೀನೋದ್ರೆ
ದಾರಾದ ಬದಕ ನಾನ್ ಇಡದೇನು-ನೆಗ ನೆಗ್ತ
ಸೂಜೀಯ ಯಿಂದೇನೆ ಬಂದೇನು. ೯
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...