ಒಡಲಲ್ಲೊಂದು ಕುಡಿ
ಚಿಗುರಲಿಲ್ಲವೆಂದೇಕೆ
ಹಲುಬುವಿರಿ, ಕುಡಿ
ಗಾಗಿ ಹಂಬಲಿಸಿ ಕೊರಗಿ
ಸೊರಗಿ ಬಾಳನ್ನೇಕೆ
ವ್ಯರ್ಥಗೊಳಿಸಿ ಶೂನ್ಯ
ವನ್ನಾಗಿಸುವಿರಿ
ನಿಮ್ಮದೇನು ರಘುವಂಶ
ಸೂರ್ಯವಂಶವೇ
ಕುಲದೀಪಕನಿಲ್ಲದೆ
ವಂಶ ಅಳಿಯತೆನಲು
ಒಡಲು ಬರಿದಾಗಿಸಿದ
ಆ ದೈವಕೆ ಸಡ್ಡು ಹೊಡೆದು
ನಿಮ್ಮ ಹೃದಯವನ್ನೊಮ್ಮೆ
ವಿಶಾಲಗೊಳಿಸಿ
ಮಮತೆ
ಮರೀಚಿಕೆಯಾಗಿರುವ ಕಂದಮ್ಮಗಳತ್ತ
ದೃಷ್ಠಿಹಾಯಿಸಿ, ತರುವಿಲ್ಲದ ಲತೆಗಳಿಗೆ
ಆಶ್ರಯವಾಗಿ ಬರಿದಾದ ಮಡಿಲ ತುಂಬಿಸಿಕೊಳ್ಳಿ
ಒಡಲು ಬರಿದಾದರೇನು
ಮಡಿಲು ಬರಿದೇ
ಯಾರದೋ ತಪ್ಪಿಗೆ
ಬಲಿಯಾಗಿ ಪರಿತಪಿಸುವ
ಕಂದನಿಗೆ, ಶಾಪವಾಗಿರುವ
ಬಾಳಿಗೆ ವರನೀಡಿ
ಯಾರ ಮನೆಯ ಅಂಗಳದ
ಹೂವೋ ಎಂದು ಜಿಗುಪ್ಸೆ
ತೋರದೆ ಕರೆದೊಯ್ಯಿರಿ ನಿಮ್ಮರ ಮನೆಗೆ
*****
Related Post
ಸಣ್ಣ ಕತೆ
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
-
ಗಂಗೆ ಅಳೆದ ಗಂಗಮ್ಮ
ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…
-
ಗಿಣಿಯ ಸಾಕ್ಷಿ
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…
-
ಹಳ್ಳಿ…
ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…
-
ಡಿಪೋದೊಳಗಣ ಕಿಚ್ಚು…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…