ಉದ್ಯೋಗ ಪರ್ವ

ಬೇಹಿನವರಿಂದ ಸುದ್ದಿ ಸಂಗ್ರಹಿಸಿ ರಾಯಭಾರಿಗಳ ಕರೆಸಿ
ಕಿಟಕಿಬಾಗಿಲುಗಳ ಭದ್ರಪಡಿಸಿ ಮಂತ್ರಾಗಾರದಲ್ಲಿ
ಒಂದು ದುಂಡು ಮೇಜಿನ ಸುತ್ತ ಆಪ್ತೇಷ್ಟನಂಟರೂ
ಮಂತ್ರಿಗಳೂ ವಿಶೇಷ ಆಮಂತ್ರಿತರೂ ಪರಿಣತರೂ ಮಂಡಿಸಿ
ಗೂಢಾಲೋಚನೆ ನಡಿಸಿ
ಫೈಲುಗಳ ಮೇಲೆ ಫೈಲುಗಳೋಡಿ
ಟಿಪ್ಪಣಿಗಳ ಕೆಳಗೆ ಟಿಪ್ಪಣಿಗಳು ಕೂಡಿ
ಮಾತಿಗೆ ಮಾತು ಸೇರಿ ಮಾತಿನ ಧ್ವನಿಯೇರಿ
ಧ್ವನಿಯ ಪ್ರತಿಧ್ವನಿಯ ಕಾವಿನಲ್ಲಿ ಚರ್ಚೆ
ಉದ್ದುದ್ದ ಬೆಳೆದು ಬೇವಸಗೊಂಡು
ಪೂರ್ವಯೋಜಿತ ನಿರ್ಣಯದ ಕಡೆಗೆ
ದಾರಿಗಾಣದೆ ಕಾದು ಆಕಳಿಸಿ ಸಿಗಾರು ಹಚ್ಚಿ
ಸೀಲಿಂಗಿನತ್ತ ಹೊಗೆ ಫೂ ಎಂದು ಊದಿ
ಮೆತ್ತೆಗೆ ಶಿರ ಮಂಡಿಸಿದರೆ ಧ್ಯಾನಾವಸ್ಥೆ

ಮತ್ತೆ ಸನತ್ಸುಜಾತ ವಿದುರಾದಿಗಳಿಂದ ಲೌಕಿಕ ಪಾರಲೌಕಿಕ
ಆರ್ಥಿಕ ಪಾರಮಾರ್ಥಿಕ ನೀತಿ ಹೇಳಿಸಿಕೊಂಡು
ಮತ್ತೆ ಶಕುನಿ ಕಲಿಸಿದ ಅನೀತಿ ಜ್ಞಾಪಿಸಿಕೊಂಡು
ಕಳೆದ ಪರ್ವಗಳ ನಂಜುರಕ್ತ ಮೆಲ್ಲನೇ ಒತ್ತಡಿಸಿ
ಕಾಳೆಗವನೇ ಸಮೆದು ಬರುವೆವು ಎಂದು ಒಮ್ಮತ ಬಂದು
ಧರ್ಮ ಸಂಸ್ಥಾಪನೆಯಂಥ ಆರ್ಷ ಉದ್ದೇಶಕ್ಕೆ
ಜನ್ಮವೆತ್ತಿಬಂದ ಪುರುಷಾರ್ಥಕ್ಕೆ
ಕರ್ಮಕಾಂಡದ ವಿಧ್ಯುಕ್ತ ಕಾರ್ಯನಿರ್ವಾಹಕ್ಕೆ
ಎಂಬಿತ್ಯಾದಿಯಾಗಿ ಶ್ರುತಿಧರ್ಮ ಸಂಹಿತೆಗಳಿಂದ
ಬೇಕುಬೇಕಾದ ತತ್ವಗಳನ್ನಾರಿಸಿ ಠರಾವುಗಳಿಗೆ ಜೋಡಿಸಿ
ಕಾಳೆಗವನೇ ಸಮೆದು ಬರುವೆವು ಎಂದು ಘೋಷಿಸಿ

ಘೋಷಣೆಯ ಕಾರ್ಯರೂಪಕ್ಕೆ ತೊಡಗಿದರೆ
ತೊಡಗಿದರೆ ತೊಟ್ಟ ಮಾರಕಾಸ್ತ್ರ ಪ್ರಯೋಗದಿಂದ ಈ ಗರ್ಭಕ್ಕೆ
ಗರ್ಭಸ್ಥ ಜೀವಕ್ಕೆ ಯಾತರ ರಕ್ಷೆ?
ಅಸಹಾಯಕಿ ಅಬಲೆ ಉತ್ತರೆಯೂ ನಿರುತ್ತರೆಯಾಗಿ ನಿಂತರೆ
ಅಲೆದೀತು ಒಂದು ವೇಳೆ ಈ ಪ್ರಶ್ನೆ ಹೀಗೆ ಕೊನೆಗೂ
ತನ್ನ ಉತ್ತರ ತಾನೆ ಕಂಡುಕೊಂಡೀತು ಒಂದು ವೇಳೆ
ಹೇಗಿದ್ದರೂ ಅದು ಈ ಪರ್ವದ ಹೊರತು ಇದರ ಸಮಸ್ಯೆಗಳ ಹೊರತು
ಈಗ ಸಮಗ್ರ ಮಗ್ನತೆಯನ್ನೂ ಕೂಡ
ಜರೂರು ವಿಚಾರಗಳ ವರ್ತಮಾನದಲ್ಲಿ ಕೇಂದ್ರೀಕರಿಸಿ
ಹಂಚಿಗೆಳ ಯೋಚಿಸುವ ಸಂಧಿಸುವ ಚಿಂತಿಸುವ ಪರ್ವ
ದೊಂಬಿ ಪಿತೂರಿ ಒಳಸಂಚಿನ ಸೈತಾನ ಕರ್ಮಗಳಿಂದ ಹಿಡಿದು
ಕುರುಕ್ಷೇತ್ರದ ಹೊಯ್ಕಯ್ ವರೆಗೂ
ಇದೆಲ್ಲದರ ಸಾಧ್ಯಾಸಾಧ್ಯತೆಗಳ ಕುರಿತು
ಇದರ ರಾಜತಾಂತ್ರಿಕ ಸೂತ್ರಗಳ ಕುರಿತು
ಕ್ಷೇತ್ರದ ಸಿದ್ಧತೆಯ ಕುರಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಡಿಲು ಬರಿದೇ
Next post ಆಕಾಶವಾಣಿ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

cheap jordans|wholesale air max|wholesale jordans|wholesale jewelry|wholesale jerseys