ಬೇರಿಳಿಸಿ ಬೆಳೆಯುತ್ತಿದೆ
ಬುಡ ಸಡಿಲವೆನ್ನುವ
ಅರಿವಿಲ್ಲದೆ
ಎಲ್ಲೋ ಮೊಳೆತು, ಚಿಗುರಿ
ತಾಯ ಗಿಡವ ಮೀರಿ
ಸಾರವೆಲ್ಲ ಹೀರಿ
ಎತ್ತರವ ಏರಿ
ಬೆಳೆಯುವನೆಂಬ ಹಮ್ಮು
ಅದೆಷ್ಟು ಗಳಿಗೆ
ಕರುಳ ಹರಿದು ನೆತ್ತರವಹರಿಸಿ
ಬುಡಕಿತ್ತ ಬೇರು
ಮತ್ಯಾವುದೋ ಮಣ್ಣಿನಲಿ
ಆಳವಾಗಿ ಹೂತು
ಬೇರಿಳಿಸಿ
ಬೆಳೆಯುವುದೆಂತಹ
ಸೋಜಿಗ
ತಾಯಿ ಗಿಡವ ಮರೆತ ನೋವು
ಮುರುಟಿ ಕ್ಷಣದೊಳಗೆ
ಬೇರ ಇಳಿಸಿ
ಸಾರ ಗಳಿಸಿ
ಮೆಲ್ಲನೆ ತಲೆ ಎತ್ತಿನಿಂತ ಪರಿ
ಆಹಾ ಪ್ರಕೃತಿ ಎಂಥ ಉದಾರಿ
ಮಣ್ಣು ಯಾವುದಾದರೇನು
ಬೇಕಷ್ಟೆ ಒಂದಿಷ್ಟು ನೀರು,
ಬೆಳಕು
ಜೊತೆಗಷ್ಟು ಸಾರ
*****
Related Post
ಸಣ್ಣ ಕತೆ
-
ಆನುಗೋಲು
ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…
-
ಎರಡು…. ದೃಷ್ಟಿ!
ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…
-
ಜಡ
ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…
-
ಇರುವುದೆಲ್ಲವ ಬಿಟ್ಟು
ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…