Home / ಕವನ / ಕವಿತೆ / ಜಂಕ್ಷನ್

ಜಂಕ್ಷನ್

ಎಲ್ಲಿಂದೆಲ್ಲಿಂದಲೋ ತೇಕುತ್ತಾ
ಬಂದು ನಿಲ್ಲುವ ಗಾಡಿ
ಮತ್ತೆಲ್ಲಿಗೋ ಅದರ ಪಯಣ

ಯಾರೋ ಇಳಿಯುವವರು
ಮತ್ತಿನ್ಯಾರೋ ಏರುವವರು
ಹಸಿದವರು, ಬಾಯಾರಿದವರು.
ಕೊಳ್ಳುವವರು, ಮಾರುವವರು
ಗಜಿಬಿಜಿ ಗೊಂದಲ
ಸತ್ತವನಿಗೆ ಫಕ್ಕನೆ
ಜೀವ ಬಂದಂತೆ ಎಲ್ಲಾ!

ಗಾಡಿ ಹೊಟ್ಟೆಗೊಂದಿಷ್ಟು ನೀರು ಬಸಿದು
ಗಾಡಿ ಅಂಗಗಳ ಸರಿ-ಬೆಸ ಲೆಕ್ಕಾಚಾರ
ಅವಿರತ ಪಯಣದ ಮಧ್ಯೆ
ಒಂದಿಷ್ಟು ಆರಾಮ

ಕಣ್ಗೆ ಬೇಕೆನಿಸುವ ತಿಂಡಿ
ಸಾಮಾನಿನವನ ತಳ್ಳುಬಂಡಿ
ಏನೋ ಕೂಗುವ
ಮತ್ತೇನೋ ಬಡಬಡಿಸುವ
ಪಿಚಕ್ಕನೆ ಉಗಿಯುವವ
ಯಾವುದೋ ಲೋಕದಲ್ಲಿರುವವನಂತೆ
ಸಿಗರೇಟಿನ ಹೊಗೆ ಬಿಡುತ್ತಾ
ನಿಂತ ಸತ್ತ ಮುಖದವ

ಇಲ್ಲಿ ನಾಳೆಗಳಿಲ್ಲ
ಇಂದು ಈ ಘಳಿಗೆಯಷ್ಟೇ ಜೀವಂತ!
ಚಿತ್ರ, ವಿಚಿತ್ರ ವೇಷದ
ಚಿತ್ರ, ವಿಚಿತ್ರ ಭಾಷೆಯ
ಅನ್ಯಗ್ರಹ ಜೀವಿಗಳೆನಿಸುವ
ವಿಚಿತ್ರ ಮುಖಗಳ ಮುಖಾಮುಖಿ ಅರೆಘಳಿಗೆ

ಗಂಟೆ ಬಾರಿಸಿದೊಡನೆ
ಎಲ್ಲಾ ಮುಗಿದಂತೆ ತರಾತುರಿ
ಅತ್ತಿಂದಿತ್ತ ಇತ್ತಿಂದತ್ತ ಗಡಿಬಿಡಿ ಓಡಾಟ
ಮತ್ತೆ ಗಬಗಬನೆ ಹೊಟ್ಟೆಯೊಳಕ್ಕೆ
ಎಲ್ಲರ ತುಂಬಿ
ತೇಕುತ್ತಾ ತೆವಳುತ್ತಾ ಮೆಲ್ಲಗೆ
ಹೊರಡುತ್ತದೆ ಗಾಡಿ
ಇತ್ತ ಎಲ್ಲಾ ಒಮ್ಮೆಗೇ ಸತ್ತಂತಾಗಿ
ನಿಶ್ಯಬ್ಧ, ಸ್ತಬ್ಧ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...