Home / ಕವನ / ಕವಿತೆ / ಜಂಕ್ಷನ್

ಜಂಕ್ಷನ್

ಎಲ್ಲಿಂದೆಲ್ಲಿಂದಲೋ ತೇಕುತ್ತಾ
ಬಂದು ನಿಲ್ಲುವ ಗಾಡಿ
ಮತ್ತೆಲ್ಲಿಗೋ ಅದರ ಪಯಣ

ಯಾರೋ ಇಳಿಯುವವರು
ಮತ್ತಿನ್ಯಾರೋ ಏರುವವರು
ಹಸಿದವರು, ಬಾಯಾರಿದವರು.
ಕೊಳ್ಳುವವರು, ಮಾರುವವರು
ಗಜಿಬಿಜಿ ಗೊಂದಲ
ಸತ್ತವನಿಗೆ ಫಕ್ಕನೆ
ಜೀವ ಬಂದಂತೆ ಎಲ್ಲಾ!

ಗಾಡಿ ಹೊಟ್ಟೆಗೊಂದಿಷ್ಟು ನೀರು ಬಸಿದು
ಗಾಡಿ ಅಂಗಗಳ ಸರಿ-ಬೆಸ ಲೆಕ್ಕಾಚಾರ
ಅವಿರತ ಪಯಣದ ಮಧ್ಯೆ
ಒಂದಿಷ್ಟು ಆರಾಮ

ಕಣ್ಗೆ ಬೇಕೆನಿಸುವ ತಿಂಡಿ
ಸಾಮಾನಿನವನ ತಳ್ಳುಬಂಡಿ
ಏನೋ ಕೂಗುವ
ಮತ್ತೇನೋ ಬಡಬಡಿಸುವ
ಪಿಚಕ್ಕನೆ ಉಗಿಯುವವ
ಯಾವುದೋ ಲೋಕದಲ್ಲಿರುವವನಂತೆ
ಸಿಗರೇಟಿನ ಹೊಗೆ ಬಿಡುತ್ತಾ
ನಿಂತ ಸತ್ತ ಮುಖದವ

ಇಲ್ಲಿ ನಾಳೆಗಳಿಲ್ಲ
ಇಂದು ಈ ಘಳಿಗೆಯಷ್ಟೇ ಜೀವಂತ!
ಚಿತ್ರ, ವಿಚಿತ್ರ ವೇಷದ
ಚಿತ್ರ, ವಿಚಿತ್ರ ಭಾಷೆಯ
ಅನ್ಯಗ್ರಹ ಜೀವಿಗಳೆನಿಸುವ
ವಿಚಿತ್ರ ಮುಖಗಳ ಮುಖಾಮುಖಿ ಅರೆಘಳಿಗೆ

ಗಂಟೆ ಬಾರಿಸಿದೊಡನೆ
ಎಲ್ಲಾ ಮುಗಿದಂತೆ ತರಾತುರಿ
ಅತ್ತಿಂದಿತ್ತ ಇತ್ತಿಂದತ್ತ ಗಡಿಬಿಡಿ ಓಡಾಟ
ಮತ್ತೆ ಗಬಗಬನೆ ಹೊಟ್ಟೆಯೊಳಕ್ಕೆ
ಎಲ್ಲರ ತುಂಬಿ
ತೇಕುತ್ತಾ ತೆವಳುತ್ತಾ ಮೆಲ್ಲಗೆ
ಹೊರಡುತ್ತದೆ ಗಾಡಿ
ಇತ್ತ ಎಲ್ಲಾ ಒಮ್ಮೆಗೇ ಸತ್ತಂತಾಗಿ
ನಿಶ್ಯಬ್ಧ, ಸ್ತಬ್ಧ!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...