Home / ಕವನ / ಕವಿತೆ / ಸ್ವಗತ : ಟೈಗರ್ ಎಂಬ (ಹುಚ್ಚು) ನಾಯಿ

ಸ್ವಗತ : ಟೈಗರ್ ಎಂಬ (ಹುಚ್ಚು) ನಾಯಿ

ಗುರ್….. ಟೈಗರ್
ಎಂಬ ಹೆಸರಿನಲೆ ಒಂದು ಕಾವ್ಯವಿದೆ.
ಆದ್ದರಿಂದ
ಎಲ್ಲರಿಗೂ ಕೊಡುತೇನೆ ಒಂದೊಂದು ಮುತ್ತು.
ಇವರಿಗೆಲ್ಲ ಏರಿದೆ ಏನೋ ಮತ್ತು
ಬೊಗಳಬೇಕು ಒಂದು ಭಾಷಣ
ಪರ್ವತದಿಂದ ಕ್ರೈಸ್ತನ ಹಾಗೆ
ನಾನು ಟೈಗರ್ ಎಂಬ ರಾಜನಾಯಿ
ಎಲ್ಲರೂ ಆಗಿ ನನ್ನ ಅನುಯಾಯಿ
ಈ ಕ್ಷಣ
ಭಾಕ್ಷಣ
ಅರೆ! ಎಂತಹ ನಾಜೂಕು ಪ್ರಾಸ!
ಟೈಗರ್ ವೇದವ್ಯಾಸ
ಹರಿಸುತ್ತೇನೆ ಕಾವ್ಯ
ಛೇ ಇದೇಕೆ ಹೀಗೆ ಜೊಲ್ಲು?
ಕಾವ್ಯಕ್ಕಿಷ್ಟು ಬೆಂಕಿ
ಈಗ ಬೇಕಾದ್ದು ಓಟ
ಒಲಂಪಿಕ್ ರೇಸು
ಇದು ರೇಸಿನ ಯುಗ
ಎಲ್ಲ ಸೂಪರ್ ಸಾನಿಕ್
ನಿಂತಲ್ಲಿ ನಿಲ್ಲದೆ ಓಟ
ಹಾಯಾಗಿ ಕಾಲೆತ್ತಿ ಮೂತ್ರ
ಮಾಡುವುದಕ್ಕೂ ಇಲ್ಲ ಪುರುಸತ್ತು
ಇದು ಆಧುನಿಕ ಜಗತ್ತು
ಅರೆ! ಇದೇನು
ಓಡುವಾಗಲೂ ಏಳುವುದಿಲ್ಲ ಲಾಂಗೂಲ?
ಪ್ರಕೃತಿಗೆ ಬಂದಿದೆ ಟೈಫಾಯ್ಡ್ ಜ್ವರ

ಇಲ್ಲದಿದ್ದರೆ ಏಕೆ ಈ ಅವ್ಯವಸ್ಥೆ, ಅಶಿಸ್ತು?
ರುಮ್ಮನೆ ತಿರುಗುತಿದೆ ಪ್ರಪಂಚೆ
ಭಟ್ಟರ ಬ್ರಹ್ಮಾಂಡ ಪಂಚೆ
ಹೀಗಿರಲಿಲ್ಲ ಮುಂಚೆ
ಓಡುವಾಗೆಲ್ಲ ಏಳುತಿತ್ತು ಬಾಲ
ಬೇಕೆಂದಾಗ ಕೂಡ
ಈ ಟೈಗರಿನ ಬಾಲ
ಹರಿಯುತಿದೆ ಜೊಲ್ಲು
ಎಸೆಯುತಿದಾರೆ ಕಲ್ಲು
ಹರಿವಾಗಿದೆ ಹಲ್ಲು
ಆ ಮೇಲೆ ? ಆಮೇಲೆ?
ಥತ್ ಹಾಳಾಯಿತು ಪ್ರಾಸ.
ಡೆನ್ಮಾರ್ಕ್ ಎಂಬ ಕುಂಬಳಕಾಯಿ
ಕೊಳೆತು ನಾರುತ್ತಿದೆ
ನೊಣ ನೊಣ ನೊಣ
ಯಾಕೆ ಬರುತಾವೆ ಹೀಗೆ?
ನಾನೇನು ಹೆಣವೋ?
ಸಾತ್ವ್ರವೇ ಹೇಳಬೇಕಷ್ಟೆ.
ಛೇ! ನಾನಾರ ಲಾಂಗೂಲವೂ ಆಗಲೊಲ್ಲೆ
ನಾ ಹುಟ್ಟಿದಾಗ ಆತನೂ ಹುಟ್ಟಿದ
ನಾನು ಸತ್ತಾಗ ಆತನೂ ಸತ್ತ
ನಾತ ನಾತ
ಆತನ ಮುಖಕ್ಕೂ ಬರುತ್ತಾ ಇವೆ ನೊಣ

ಈ ಜಗತ್ತಿಗೆ ನಾನು ಕೊಟ್ಟಿದ್ದೆ ಅರ್ಥ
ಅನ್ನುತ್ತೇನೆ ನಾನು
ಇದೆಲ್ಲ ವ್ಯರ್ಥ
ಆದರೂ ಈ ಜಗತ್ತಿನ
ಹುಚ್ಚಿನಲು ಒಂದು ಕ್ರಮ ಉಂಟು
A method there is
ನಾನು ಹ್ಯಾಮ್ಲೆಟ್ಟು
ಕೆಂಪಗೆ ಕಾದ ಕಾವಲಿಯಲ್ಲಿ ಯಾರೋ ಎರೆದು
ಮರೆತೇ ಹೋದ
ಆಮ್ಲೆಟ್ಟು ನಾನು ಹ್ಯಾಮ್ಲೆಟ್ಟು ನಾನು ಆಮ್ಲೆಟ್ಟು
ನಾನು ಹ್ಯಾಮ್ಲೆಟ್ಟು…..
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...