Home / ಕವನ / ಕವಿತೆ / ಸ್ವಗತ : ಟೈಗರ್ ಎಂಬ (ಹುಚ್ಚು) ನಾಯಿ

ಸ್ವಗತ : ಟೈಗರ್ ಎಂಬ (ಹುಚ್ಚು) ನಾಯಿ

ಗುರ್….. ಟೈಗರ್
ಎಂಬ ಹೆಸರಿನಲೆ ಒಂದು ಕಾವ್ಯವಿದೆ.
ಆದ್ದರಿಂದ
ಎಲ್ಲರಿಗೂ ಕೊಡುತೇನೆ ಒಂದೊಂದು ಮುತ್ತು.
ಇವರಿಗೆಲ್ಲ ಏರಿದೆ ಏನೋ ಮತ್ತು
ಬೊಗಳಬೇಕು ಒಂದು ಭಾಷಣ
ಪರ್ವತದಿಂದ ಕ್ರೈಸ್ತನ ಹಾಗೆ
ನಾನು ಟೈಗರ್ ಎಂಬ ರಾಜನಾಯಿ
ಎಲ್ಲರೂ ಆಗಿ ನನ್ನ ಅನುಯಾಯಿ
ಈ ಕ್ಷಣ
ಭಾಕ್ಷಣ
ಅರೆ! ಎಂತಹ ನಾಜೂಕು ಪ್ರಾಸ!
ಟೈಗರ್ ವೇದವ್ಯಾಸ
ಹರಿಸುತ್ತೇನೆ ಕಾವ್ಯ
ಛೇ ಇದೇಕೆ ಹೀಗೆ ಜೊಲ್ಲು?
ಕಾವ್ಯಕ್ಕಿಷ್ಟು ಬೆಂಕಿ
ಈಗ ಬೇಕಾದ್ದು ಓಟ
ಒಲಂಪಿಕ್ ರೇಸು
ಇದು ರೇಸಿನ ಯುಗ
ಎಲ್ಲ ಸೂಪರ್ ಸಾನಿಕ್
ನಿಂತಲ್ಲಿ ನಿಲ್ಲದೆ ಓಟ
ಹಾಯಾಗಿ ಕಾಲೆತ್ತಿ ಮೂತ್ರ
ಮಾಡುವುದಕ್ಕೂ ಇಲ್ಲ ಪುರುಸತ್ತು
ಇದು ಆಧುನಿಕ ಜಗತ್ತು
ಅರೆ! ಇದೇನು
ಓಡುವಾಗಲೂ ಏಳುವುದಿಲ್ಲ ಲಾಂಗೂಲ?
ಪ್ರಕೃತಿಗೆ ಬಂದಿದೆ ಟೈಫಾಯ್ಡ್ ಜ್ವರ

ಇಲ್ಲದಿದ್ದರೆ ಏಕೆ ಈ ಅವ್ಯವಸ್ಥೆ, ಅಶಿಸ್ತು?
ರುಮ್ಮನೆ ತಿರುಗುತಿದೆ ಪ್ರಪಂಚೆ
ಭಟ್ಟರ ಬ್ರಹ್ಮಾಂಡ ಪಂಚೆ
ಹೀಗಿರಲಿಲ್ಲ ಮುಂಚೆ
ಓಡುವಾಗೆಲ್ಲ ಏಳುತಿತ್ತು ಬಾಲ
ಬೇಕೆಂದಾಗ ಕೂಡ
ಈ ಟೈಗರಿನ ಬಾಲ
ಹರಿಯುತಿದೆ ಜೊಲ್ಲು
ಎಸೆಯುತಿದಾರೆ ಕಲ್ಲು
ಹರಿವಾಗಿದೆ ಹಲ್ಲು
ಆ ಮೇಲೆ ? ಆಮೇಲೆ?
ಥತ್ ಹಾಳಾಯಿತು ಪ್ರಾಸ.
ಡೆನ್ಮಾರ್ಕ್ ಎಂಬ ಕುಂಬಳಕಾಯಿ
ಕೊಳೆತು ನಾರುತ್ತಿದೆ
ನೊಣ ನೊಣ ನೊಣ
ಯಾಕೆ ಬರುತಾವೆ ಹೀಗೆ?
ನಾನೇನು ಹೆಣವೋ?
ಸಾತ್ವ್ರವೇ ಹೇಳಬೇಕಷ್ಟೆ.
ಛೇ! ನಾನಾರ ಲಾಂಗೂಲವೂ ಆಗಲೊಲ್ಲೆ
ನಾ ಹುಟ್ಟಿದಾಗ ಆತನೂ ಹುಟ್ಟಿದ
ನಾನು ಸತ್ತಾಗ ಆತನೂ ಸತ್ತ
ನಾತ ನಾತ
ಆತನ ಮುಖಕ್ಕೂ ಬರುತ್ತಾ ಇವೆ ನೊಣ

ಈ ಜಗತ್ತಿಗೆ ನಾನು ಕೊಟ್ಟಿದ್ದೆ ಅರ್ಥ
ಅನ್ನುತ್ತೇನೆ ನಾನು
ಇದೆಲ್ಲ ವ್ಯರ್ಥ
ಆದರೂ ಈ ಜಗತ್ತಿನ
ಹುಚ್ಚಿನಲು ಒಂದು ಕ್ರಮ ಉಂಟು
A method there is
ನಾನು ಹ್ಯಾಮ್ಲೆಟ್ಟು
ಕೆಂಪಗೆ ಕಾದ ಕಾವಲಿಯಲ್ಲಿ ಯಾರೋ ಎರೆದು
ಮರೆತೇ ಹೋದ
ಆಮ್ಲೆಟ್ಟು ನಾನು ಹ್ಯಾಮ್ಲೆಟ್ಟು ನಾನು ಆಮ್ಲೆಟ್ಟು
ನಾನು ಹ್ಯಾಮ್ಲೆಟ್ಟು…..
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...