ಸ್ವಗತ : ಟೈಗರ್ ಎಂಬ (ಹುಚ್ಚು) ನಾಯಿ

ಗುರ್….. ಟೈಗರ್
ಎಂಬ ಹೆಸರಿನಲೆ ಒಂದು ಕಾವ್ಯವಿದೆ.
ಆದ್ದರಿಂದ
ಎಲ್ಲರಿಗೂ ಕೊಡುತೇನೆ ಒಂದೊಂದು ಮುತ್ತು.
ಇವರಿಗೆಲ್ಲ ಏರಿದೆ ಏನೋ ಮತ್ತು
ಬೊಗಳಬೇಕು ಒಂದು ಭಾಷಣ
ಪರ್ವತದಿಂದ ಕ್ರೈಸ್ತನ ಹಾಗೆ
ನಾನು ಟೈಗರ್ ಎಂಬ ರಾಜನಾಯಿ
ಎಲ್ಲರೂ ಆಗಿ ನನ್ನ ಅನುಯಾಯಿ
ಈ ಕ್ಷಣ
ಭಾಕ್ಷಣ
ಅರೆ! ಎಂತಹ ನಾಜೂಕು ಪ್ರಾಸ!
ಟೈಗರ್ ವೇದವ್ಯಾಸ
ಹರಿಸುತ್ತೇನೆ ಕಾವ್ಯ
ಛೇ ಇದೇಕೆ ಹೀಗೆ ಜೊಲ್ಲು?
ಕಾವ್ಯಕ್ಕಿಷ್ಟು ಬೆಂಕಿ
ಈಗ ಬೇಕಾದ್ದು ಓಟ
ಒಲಂಪಿಕ್ ರೇಸು
ಇದು ರೇಸಿನ ಯುಗ
ಎಲ್ಲ ಸೂಪರ್ ಸಾನಿಕ್
ನಿಂತಲ್ಲಿ ನಿಲ್ಲದೆ ಓಟ
ಹಾಯಾಗಿ ಕಾಲೆತ್ತಿ ಮೂತ್ರ
ಮಾಡುವುದಕ್ಕೂ ಇಲ್ಲ ಪುರುಸತ್ತು
ಇದು ಆಧುನಿಕ ಜಗತ್ತು
ಅರೆ! ಇದೇನು
ಓಡುವಾಗಲೂ ಏಳುವುದಿಲ್ಲ ಲಾಂಗೂಲ?
ಪ್ರಕೃತಿಗೆ ಬಂದಿದೆ ಟೈಫಾಯ್ಡ್ ಜ್ವರ

ಇಲ್ಲದಿದ್ದರೆ ಏಕೆ ಈ ಅವ್ಯವಸ್ಥೆ, ಅಶಿಸ್ತು?
ರುಮ್ಮನೆ ತಿರುಗುತಿದೆ ಪ್ರಪಂಚೆ
ಭಟ್ಟರ ಬ್ರಹ್ಮಾಂಡ ಪಂಚೆ
ಹೀಗಿರಲಿಲ್ಲ ಮುಂಚೆ
ಓಡುವಾಗೆಲ್ಲ ಏಳುತಿತ್ತು ಬಾಲ
ಬೇಕೆಂದಾಗ ಕೂಡ
ಈ ಟೈಗರಿನ ಬಾಲ
ಹರಿಯುತಿದೆ ಜೊಲ್ಲು
ಎಸೆಯುತಿದಾರೆ ಕಲ್ಲು
ಹರಿವಾಗಿದೆ ಹಲ್ಲು
ಆ ಮೇಲೆ ? ಆಮೇಲೆ?
ಥತ್ ಹಾಳಾಯಿತು ಪ್ರಾಸ.
ಡೆನ್ಮಾರ್ಕ್ ಎಂಬ ಕುಂಬಳಕಾಯಿ
ಕೊಳೆತು ನಾರುತ್ತಿದೆ
ನೊಣ ನೊಣ ನೊಣ
ಯಾಕೆ ಬರುತಾವೆ ಹೀಗೆ?
ನಾನೇನು ಹೆಣವೋ?
ಸಾತ್ವ್ರವೇ ಹೇಳಬೇಕಷ್ಟೆ.
ಛೇ! ನಾನಾರ ಲಾಂಗೂಲವೂ ಆಗಲೊಲ್ಲೆ
ನಾ ಹುಟ್ಟಿದಾಗ ಆತನೂ ಹುಟ್ಟಿದ
ನಾನು ಸತ್ತಾಗ ಆತನೂ ಸತ್ತ
ನಾತ ನಾತ
ಆತನ ಮುಖಕ್ಕೂ ಬರುತ್ತಾ ಇವೆ ನೊಣ

ಈ ಜಗತ್ತಿಗೆ ನಾನು ಕೊಟ್ಟಿದ್ದೆ ಅರ್ಥ
ಅನ್ನುತ್ತೇನೆ ನಾನು
ಇದೆಲ್ಲ ವ್ಯರ್ಥ
ಆದರೂ ಈ ಜಗತ್ತಿನ
ಹುಚ್ಚಿನಲು ಒಂದು ಕ್ರಮ ಉಂಟು
A method there is
ನಾನು ಹ್ಯಾಮ್ಲೆಟ್ಟು
ಕೆಂಪಗೆ ಕಾದ ಕಾವಲಿಯಲ್ಲಿ ಯಾರೋ ಎರೆದು
ಮರೆತೇ ಹೋದ
ಆಮ್ಲೆಟ್ಟು ನಾನು ಹ್ಯಾಮ್ಲೆಟ್ಟು ನಾನು ಆಮ್ಲೆಟ್ಟು
ನಾನು ಹ್ಯಾಮ್ಲೆಟ್ಟು…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಹಜ
Next post ಜನ್ಮ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

cheap jordans|wholesale air max|wholesale jordans|wholesale jewelry|wholesale jerseys