ಸ್ವಗತ : ಟೈಗರ್ ಎಂಬ (ಹುಚ್ಚು) ನಾಯಿ

ಗುರ್….. ಟೈಗರ್
ಎಂಬ ಹೆಸರಿನಲೆ ಒಂದು ಕಾವ್ಯವಿದೆ.
ಆದ್ದರಿಂದ
ಎಲ್ಲರಿಗೂ ಕೊಡುತೇನೆ ಒಂದೊಂದು ಮುತ್ತು.
ಇವರಿಗೆಲ್ಲ ಏರಿದೆ ಏನೋ ಮತ್ತು
ಬೊಗಳಬೇಕು ಒಂದು ಭಾಷಣ
ಪರ್ವತದಿಂದ ಕ್ರೈಸ್ತನ ಹಾಗೆ
ನಾನು ಟೈಗರ್ ಎಂಬ ರಾಜನಾಯಿ
ಎಲ್ಲರೂ ಆಗಿ ನನ್ನ ಅನುಯಾಯಿ
ಈ ಕ್ಷಣ
ಭಾಕ್ಷಣ
ಅರೆ! ಎಂತಹ ನಾಜೂಕು ಪ್ರಾಸ!
ಟೈಗರ್ ವೇದವ್ಯಾಸ
ಹರಿಸುತ್ತೇನೆ ಕಾವ್ಯ
ಛೇ ಇದೇಕೆ ಹೀಗೆ ಜೊಲ್ಲು?
ಕಾವ್ಯಕ್ಕಿಷ್ಟು ಬೆಂಕಿ
ಈಗ ಬೇಕಾದ್ದು ಓಟ
ಒಲಂಪಿಕ್ ರೇಸು
ಇದು ರೇಸಿನ ಯುಗ
ಎಲ್ಲ ಸೂಪರ್ ಸಾನಿಕ್
ನಿಂತಲ್ಲಿ ನಿಲ್ಲದೆ ಓಟ
ಹಾಯಾಗಿ ಕಾಲೆತ್ತಿ ಮೂತ್ರ
ಮಾಡುವುದಕ್ಕೂ ಇಲ್ಲ ಪುರುಸತ್ತು
ಇದು ಆಧುನಿಕ ಜಗತ್ತು
ಅರೆ! ಇದೇನು
ಓಡುವಾಗಲೂ ಏಳುವುದಿಲ್ಲ ಲಾಂಗೂಲ?
ಪ್ರಕೃತಿಗೆ ಬಂದಿದೆ ಟೈಫಾಯ್ಡ್ ಜ್ವರ

ಇಲ್ಲದಿದ್ದರೆ ಏಕೆ ಈ ಅವ್ಯವಸ್ಥೆ, ಅಶಿಸ್ತು?
ರುಮ್ಮನೆ ತಿರುಗುತಿದೆ ಪ್ರಪಂಚೆ
ಭಟ್ಟರ ಬ್ರಹ್ಮಾಂಡ ಪಂಚೆ
ಹೀಗಿರಲಿಲ್ಲ ಮುಂಚೆ
ಓಡುವಾಗೆಲ್ಲ ಏಳುತಿತ್ತು ಬಾಲ
ಬೇಕೆಂದಾಗ ಕೂಡ
ಈ ಟೈಗರಿನ ಬಾಲ
ಹರಿಯುತಿದೆ ಜೊಲ್ಲು
ಎಸೆಯುತಿದಾರೆ ಕಲ್ಲು
ಹರಿವಾಗಿದೆ ಹಲ್ಲು
ಆ ಮೇಲೆ ? ಆಮೇಲೆ?
ಥತ್ ಹಾಳಾಯಿತು ಪ್ರಾಸ.
ಡೆನ್ಮಾರ್ಕ್ ಎಂಬ ಕುಂಬಳಕಾಯಿ
ಕೊಳೆತು ನಾರುತ್ತಿದೆ
ನೊಣ ನೊಣ ನೊಣ
ಯಾಕೆ ಬರುತಾವೆ ಹೀಗೆ?
ನಾನೇನು ಹೆಣವೋ?
ಸಾತ್ವ್ರವೇ ಹೇಳಬೇಕಷ್ಟೆ.
ಛೇ! ನಾನಾರ ಲಾಂಗೂಲವೂ ಆಗಲೊಲ್ಲೆ
ನಾ ಹುಟ್ಟಿದಾಗ ಆತನೂ ಹುಟ್ಟಿದ
ನಾನು ಸತ್ತಾಗ ಆತನೂ ಸತ್ತ
ನಾತ ನಾತ
ಆತನ ಮುಖಕ್ಕೂ ಬರುತ್ತಾ ಇವೆ ನೊಣ

ಈ ಜಗತ್ತಿಗೆ ನಾನು ಕೊಟ್ಟಿದ್ದೆ ಅರ್ಥ
ಅನ್ನುತ್ತೇನೆ ನಾನು
ಇದೆಲ್ಲ ವ್ಯರ್ಥ
ಆದರೂ ಈ ಜಗತ್ತಿನ
ಹುಚ್ಚಿನಲು ಒಂದು ಕ್ರಮ ಉಂಟು
A method there is
ನಾನು ಹ್ಯಾಮ್ಲೆಟ್ಟು
ಕೆಂಪಗೆ ಕಾದ ಕಾವಲಿಯಲ್ಲಿ ಯಾರೋ ಎರೆದು
ಮರೆತೇ ಹೋದ
ಆಮ್ಲೆಟ್ಟು ನಾನು ಹ್ಯಾಮ್ಲೆಟ್ಟು ನಾನು ಆಮ್ಲೆಟ್ಟು
ನಾನು ಹ್ಯಾಮ್ಲೆಟ್ಟು…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಹಜ
Next post ಜನ್ಮ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…