ಗೆಲುವು ನಮ್ಮದೇ

ಬೇಕಿಲ್ಲ ಗೆಳತಿ ನಮಗೆ
ಯಾರ ಭಿಕ್ಷೆ
ಆತ್ಮವಿಶ್ವಾಸವೇ ನಮಗೆ
ಶ್ರೀರಕ್ಷೆ

ಇಲ್ಲಿ ನೀಲಿ ಬಾನಿಲ್ಲ
ಮಿನುಗುವ ತಾರೆಗಳಿಲ್ಲ
………………
………………
ಅದಿಲ್ಲ ಇದಿಲ್ಲ
ಇಲ್ಲ. ಎನೇನೂ ಇಲ್ಲ!
ಇಲ್ಲಗಳ ಬದಿಗೊತ್ತಿ
ಎಲ್ಲವಾಗುವ ಛಲ
ನಮ್ಮಲೇಕಿಲ್ಲ?

ಛಲವೊಂದಿದ್ದರೆ ಸಾಕು
ಬರೀ ಹಿಮಾಲಯಕೇ ಏನು?
ಬಾಂದಳಕೇ ದಾರಿ ಕಟ್ಟಬಲ್ಲೆವು
ನಾವು

ಅವರಿವರ ಅಡಿಗಳ ಕೆಳಗಿನ
ನಮ್ಮ ನುಡಿಯುಳಿಸುವುದಷ್ಟೇ ಅಲ್ಲ
ಅವರ ನೆತ್ತಿಯ ಮೇಲೆ
ನಮ್ಮ ಪಡಿಮೂಡಿಸಬೇಕು ಗೆಳತಿ!

ಇಲ್ಲಿ ದಾರಿಗಳಿಲ್ಲ
ಹಳ್ಳ-ಕಂದರ, ಶಿಖರ-ಪ್ರಪಾತಗಳೇ ಎಲ್ಲಾ!
ಅಂತರದಾಟಲು,
ಮೀರಿ ನಿಲ್ಲಲು
ತಕ್ಕ ಅವಕಾಶಕೆ ಕಾಯಲೇಬೇಕು!

ಕಾಯಲಿಲ್ಲವೇ ನನ್ನ-ನಿನ್ನಂತೆಯೇ
ಮೈಥಿಲಿ-ಪಾಂಚಾಲಿ, ಅಹಲ್ಯೆ-ಶಕುಂತಲೇ?
ತಮ್ಮ ತಮ್ಮ ಗೆಲುವಿಗಾಗಿ?
ತಾಳ್ಮೆಯೇ ಇಲ್ಲಿ ತಪ! ಗೆಳತಿ

ಇಂದಲ್ಲ ನಾಳೆ
ಗೆದ್ದೆ ಗೆಲ್ಲುವೆವೆಂಬ ವಿಶ್ವಾಸ,
ಆ ಘಳಿಗೆಗಾಗಿ
ತಾಳ್ಮೆಯಿಂದ ಕಾಯ್ವ ಶ್ವಾಸ
ನಮ್ಮದಾದರೆ….
ಗೆಲುವು ನಮ್ಮದೇ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗದ್ಯ-ಪದ್ಯ
Next post ಅಸೂಯೆ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…