Home / ಕವನ / ಕವಿತೆ / ಗೆಲುವು ನಮ್ಮದೇ

ಗೆಲುವು ನಮ್ಮದೇ

ಬೇಕಿಲ್ಲ ಗೆಳತಿ ನಮಗೆ
ಯಾರ ಭಿಕ್ಷೆ
ಆತ್ಮವಿಶ್ವಾಸವೇ ನಮಗೆ
ಶ್ರೀರಕ್ಷೆ

ಇಲ್ಲಿ ನೀಲಿ ಬಾನಿಲ್ಲ
ಮಿನುಗುವ ತಾರೆಗಳಿಲ್ಲ
………………
………………
ಅದಿಲ್ಲ ಇದಿಲ್ಲ
ಇಲ್ಲ. ಎನೇನೂ ಇಲ್ಲ!
ಇಲ್ಲಗಳ ಬದಿಗೊತ್ತಿ
ಎಲ್ಲವಾಗುವ ಛಲ
ನಮ್ಮಲೇಕಿಲ್ಲ?

ಛಲವೊಂದಿದ್ದರೆ ಸಾಕು
ಬರೀ ಹಿಮಾಲಯಕೇ ಏನು?
ಬಾಂದಳಕೇ ದಾರಿ ಕಟ್ಟಬಲ್ಲೆವು
ನಾವು

ಅವರಿವರ ಅಡಿಗಳ ಕೆಳಗಿನ
ನಮ್ಮ ನುಡಿಯುಳಿಸುವುದಷ್ಟೇ ಅಲ್ಲ
ಅವರ ನೆತ್ತಿಯ ಮೇಲೆ
ನಮ್ಮ ಪಡಿಮೂಡಿಸಬೇಕು ಗೆಳತಿ!

ಇಲ್ಲಿ ದಾರಿಗಳಿಲ್ಲ
ಹಳ್ಳ-ಕಂದರ, ಶಿಖರ-ಪ್ರಪಾತಗಳೇ ಎಲ್ಲಾ!
ಅಂತರದಾಟಲು,
ಮೀರಿ ನಿಲ್ಲಲು
ತಕ್ಕ ಅವಕಾಶಕೆ ಕಾಯಲೇಬೇಕು!

ಕಾಯಲಿಲ್ಲವೇ ನನ್ನ-ನಿನ್ನಂತೆಯೇ
ಮೈಥಿಲಿ-ಪಾಂಚಾಲಿ, ಅಹಲ್ಯೆ-ಶಕುಂತಲೇ?
ತಮ್ಮ ತಮ್ಮ ಗೆಲುವಿಗಾಗಿ?
ತಾಳ್ಮೆಯೇ ಇಲ್ಲಿ ತಪ! ಗೆಳತಿ

ಇಂದಲ್ಲ ನಾಳೆ
ಗೆದ್ದೆ ಗೆಲ್ಲುವೆವೆಂಬ ವಿಶ್ವಾಸ,
ಆ ಘಳಿಗೆಗಾಗಿ
ತಾಳ್ಮೆಯಿಂದ ಕಾಯ್ವ ಶ್ವಾಸ
ನಮ್ಮದಾದರೆ….
ಗೆಲುವು ನಮ್ಮದೇ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...