ಗೆಲುವು ನಮ್ಮದೇ

ಬೇಕಿಲ್ಲ ಗೆಳತಿ ನಮಗೆ
ಯಾರ ಭಿಕ್ಷೆ
ಆತ್ಮವಿಶ್ವಾಸವೇ ನಮಗೆ
ಶ್ರೀರಕ್ಷೆ

ಇಲ್ಲಿ ನೀಲಿ ಬಾನಿಲ್ಲ
ಮಿನುಗುವ ತಾರೆಗಳಿಲ್ಲ
………………
………………
ಅದಿಲ್ಲ ಇದಿಲ್ಲ
ಇಲ್ಲ. ಎನೇನೂ ಇಲ್ಲ!
ಇಲ್ಲಗಳ ಬದಿಗೊತ್ತಿ
ಎಲ್ಲವಾಗುವ ಛಲ
ನಮ್ಮಲೇಕಿಲ್ಲ?

ಛಲವೊಂದಿದ್ದರೆ ಸಾಕು
ಬರೀ ಹಿಮಾಲಯಕೇ ಏನು?
ಬಾಂದಳಕೇ ದಾರಿ ಕಟ್ಟಬಲ್ಲೆವು
ನಾವು

ಅವರಿವರ ಅಡಿಗಳ ಕೆಳಗಿನ
ನಮ್ಮ ನುಡಿಯುಳಿಸುವುದಷ್ಟೇ ಅಲ್ಲ
ಅವರ ನೆತ್ತಿಯ ಮೇಲೆ
ನಮ್ಮ ಪಡಿಮೂಡಿಸಬೇಕು ಗೆಳತಿ!

ಇಲ್ಲಿ ದಾರಿಗಳಿಲ್ಲ
ಹಳ್ಳ-ಕಂದರ, ಶಿಖರ-ಪ್ರಪಾತಗಳೇ ಎಲ್ಲಾ!
ಅಂತರದಾಟಲು,
ಮೀರಿ ನಿಲ್ಲಲು
ತಕ್ಕ ಅವಕಾಶಕೆ ಕಾಯಲೇಬೇಕು!

ಕಾಯಲಿಲ್ಲವೇ ನನ್ನ-ನಿನ್ನಂತೆಯೇ
ಮೈಥಿಲಿ-ಪಾಂಚಾಲಿ, ಅಹಲ್ಯೆ-ಶಕುಂತಲೇ?
ತಮ್ಮ ತಮ್ಮ ಗೆಲುವಿಗಾಗಿ?
ತಾಳ್ಮೆಯೇ ಇಲ್ಲಿ ತಪ! ಗೆಳತಿ

ಇಂದಲ್ಲ ನಾಳೆ
ಗೆದ್ದೆ ಗೆಲ್ಲುವೆವೆಂಬ ವಿಶ್ವಾಸ,
ಆ ಘಳಿಗೆಗಾಗಿ
ತಾಳ್ಮೆಯಿಂದ ಕಾಯ್ವ ಶ್ವಾಸ
ನಮ್ಮದಾದರೆ….
ಗೆಲುವು ನಮ್ಮದೇ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗದ್ಯ-ಪದ್ಯ
Next post ಅಸೂಯೆ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

cheap jordans|wholesale air max|wholesale jordans|wholesale jewelry|wholesale jerseys