ಪ್ರಯತ್ನಗಳು

ಕೈ ಕಾಲು ಕಟ್ಟಿ ಹಾಕಿ
ದೇಹದೊಂದಿಂಚೂ
ಹೊಸಗಾಳಿಗೆ, ಹೊಸ ಬೆಳಕಿಗೆ
ಸೋಕದಂತೆ ಮುಸುಕೆಳೆದು
ಕೂರಿಸಿ
ಎಷ್ಟೊಂದು ದಿನಕಳೆದವೋ
ಕೂತಲ್ಲೇ ಕೆಟ್ಟು!

ಸಮುದ್ರದ ಅದದೇ ಅಲೆಗಳೂ
ವ್ಯರ್ಥ ದಂಡೆಗಪ್ಪಳಿಸಿ
ಹಿಂದಿರುಗುವಂತೆ
ಅದದೇ ನಿಟ್ಟುಸಿರು
ಮತ್ತೆ ಮತ್ತೆ ಉಸಿರಾಡಿ
ಇತ್ತೀಚೆಗೆ,
ಬೆಳಕು ಕಗ್ಗತ್ತಲಿನೊಡೆನೆ
ಚಿನ್ನಾಟವಾಡಿ, ಅಲ್ಲಲ್ಲ ಹೋರಾಡಿ
ಬದುಕೆಂದರೆ ಕತ್ತಲಲಿ ನಿಶ್ಶಬ್ಧ
ಉಸಿರಾಡು ಮೋಡಿ!

ಬೆಳಕು ಸೂಸುವ
ಶಕ್ತ ಕಣ್ಬೆಳಕಿನ ಕಿಡಿ
ನಿರಂತರ ಸಿಡಿದೋ ಏನೋ
ಮುಸುಗಿಗೀಗ ಒಂದೋ, ಎರಡೋ
ಸಣ್ಣ ತೂತು!
ನಾಳೆಗಾಗಬಹುದು ಮತ್ತಷ್ಟು ಹೊಸತು!

ಕೊನೆಗೊಮ್ಮೆ,
ಮುಸುಗು ಹರಿಯಬಹುದು
ಬಂಧನ ಕಡಿಯಬಹುದು
ಹೊಸಗಾಳಿಗೆ, ಹೊಸ ಬೆಳಕಿಗೆ
ಮೈಯೊಡ್ಡಬಹುದು

ನಾಳಿನ ಭವ್ಯ ಭವಿತವ್ಯಕೆ
ಇಂದಿನೀ ಕಲ್ಲು ಅಡಿಪಾಯಕ್ಕೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚುಟುಕುಗಳೆಂದರೆ – ೧
Next post ಹವಳ ದ್ವೀಪ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…