ಪ್ರಯತ್ನಗಳು

ಕೈ ಕಾಲು ಕಟ್ಟಿ ಹಾಕಿ
ದೇಹದೊಂದಿಂಚೂ
ಹೊಸಗಾಳಿಗೆ, ಹೊಸ ಬೆಳಕಿಗೆ
ಸೋಕದಂತೆ ಮುಸುಕೆಳೆದು
ಕೂರಿಸಿ
ಎಷ್ಟೊಂದು ದಿನಕಳೆದವೋ
ಕೂತಲ್ಲೇ ಕೆಟ್ಟು!

ಸಮುದ್ರದ ಅದದೇ ಅಲೆಗಳೂ
ವ್ಯರ್ಥ ದಂಡೆಗಪ್ಪಳಿಸಿ
ಹಿಂದಿರುಗುವಂತೆ
ಅದದೇ ನಿಟ್ಟುಸಿರು
ಮತ್ತೆ ಮತ್ತೆ ಉಸಿರಾಡಿ
ಇತ್ತೀಚೆಗೆ,
ಬೆಳಕು ಕಗ್ಗತ್ತಲಿನೊಡೆನೆ
ಚಿನ್ನಾಟವಾಡಿ, ಅಲ್ಲಲ್ಲ ಹೋರಾಡಿ
ಬದುಕೆಂದರೆ ಕತ್ತಲಲಿ ನಿಶ್ಶಬ್ಧ
ಉಸಿರಾಡು ಮೋಡಿ!

ಬೆಳಕು ಸೂಸುವ
ಶಕ್ತ ಕಣ್ಬೆಳಕಿನ ಕಿಡಿ
ನಿರಂತರ ಸಿಡಿದೋ ಏನೋ
ಮುಸುಗಿಗೀಗ ಒಂದೋ, ಎರಡೋ
ಸಣ್ಣ ತೂತು!
ನಾಳೆಗಾಗಬಹುದು ಮತ್ತಷ್ಟು ಹೊಸತು!

ಕೊನೆಗೊಮ್ಮೆ,
ಮುಸುಗು ಹರಿಯಬಹುದು
ಬಂಧನ ಕಡಿಯಬಹುದು
ಹೊಸಗಾಳಿಗೆ, ಹೊಸ ಬೆಳಕಿಗೆ
ಮೈಯೊಡ್ಡಬಹುದು

ನಾಳಿನ ಭವ್ಯ ಭವಿತವ್ಯಕೆ
ಇಂದಿನೀ ಕಲ್ಲು ಅಡಿಪಾಯಕ್ಕೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚುಟುಕುಗಳೆಂದರೆ – ೧
Next post ಹವಳ ದ್ವೀಪ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…