ಫಕೀರಪ್ಪನ ಕತೆ

ಯಾರೂ ಹೇಳಬಲ್ಲರು ಕತೆಗಳನ್ನು. ಆದರೆ ಫಕೀರಪ್ಪನ ಶೈಲಿಯೇ
ಬೇರೆ. ಹೇಗೆ ಕೇಳುಗರ ಅಸಕ್ತಿಯನ್ನು ಕೆರಳಿಸಬೇಕು.
ಎಲ್ಲಿ ತಡೆಹಿಡಿಯಬೇಕು, ಯಾವಾಗ ವೀಳಯದೆಲೆಗೆ ಎಷ್ಟು
ಮೆಲ್ಲಗೆ ಸುಣ್ಣ ಸವರಬೇಕು -ಇದೆಲ್ಲ ಅವನೊಬ್ಬನಿಗೇ ಗೊತ್ತು.
ರಾತ್ರಿ ಸರಿಯುತ್ತಿದ್ದಂತೆ ಕತೆಯನ್ನು ಸಸ್ಪೆನ್ಸಿನಲ್ಲಿ-ಮತ್ತು
ನಮ್ಮನ್ನು ಭಯದಲ್ಲಿ-ನಿಲ್ಲಿಸಿ. ಫಕೀರಪ್ಪ ತಂಬಾಕಿನ ರಸ ಉಗುಳಲು
ಅಂಗಳದಾಚೆಗೆ ಹೋಗುವವ. ಅವನು ಮರಳಲು ಕಾದಂತೆ
ನಾವು ಇನ್ನಾರಿಗೂ ಕಾದ ನೆನಪಿಲ್ಲ.

ಫಕೀರಪ್ಪ ಈಗಿಲ್ಲ. ಒಂದು ಮುಂಜಾನೆ ಪಾಪ
ಕಾರಡ್ಕದ ಕಾಡಿನಲ್ಲಿ ಸತ್ತು ಬಿದ್ದಿದ್ದ. ಕೊಲೆಯೊ? ಆತ್ಮಹತ್ಯೆಯೊ?
(ಕಾರಣ ಇವನಿಗೂ ಅಸ್ತಿತ್ವದ ಸಮಸ್ಯೆಗಳಿದ್ದುವು.) ಹಸಿದ
ಯಕ್ಷಿಯೊಬ್ಬಳು ಗಬಾಯಿಸಿದಳೊ ಇವನನ್ನು? ಹಲವು ಜನ
ಹಲವು ವಿಧ ಹೇಳಿದರು. ಆದರೆ ನಿಜಕ್ಕೂ ತಾನು
ಹೇಗೆ ಸತ್ತೆ, ಎಷ್ಟು ಸ್ವಾರಸ್ಯಕರವಾಗಿ ಸತ್ತೆ ಎ೦ದು ಹೇಳುವುದಕ್ಕೆ
ಫಕೀರಪ್ಪ ತಾನೆ ಎಲ್ಲಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸತ್ತಮನ
Next post ಬೃಂದಾವನಪತಿ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

cheap jordans|wholesale air max|wholesale jordans|wholesale jewelry|wholesale jerseys