ಸರ್ರನೇ ಬರ್ರನೇ
ಗಿರಗಿರ ಸುತ್ತುವ
ಕೆಟ್ಟ ಬಿರುಗಾಳಿಗೆ
ಸಿಕ್ಕ ಮನ
ಟಪ್ಪೆಂದು
ಗೋಣು ಮುರಿದಿದೆ
ಸತ್ತ ಮನದ ಹೆಣಭಾರವ
ಹೊತ್ತ ಜೀವ ನಲುಗಿದೆ
ಸತ್ತ ಮನಕೆ
ಸಂಸ್ಕಾರ ಬೇಡವೇ?
ಕೊಳೆತು ನಾರೀತು ಜೋಕೇ!
ಮಣ್ಣಿಗಿಡುವೆಯಾ
ಅಗ್ನಿಗಿಡುವೆಯಾ
ಸಾಗಲಿ ಕಾರ್ಯ
ಆದಷ್ಟು ಬೇಗ
ಕೊಳೆತು ಕ್ರಿಮಿ
ಯಾಡುವ ಮೊದಲೇ
ಗಬ್ಬುನಾತ ವ್ಯಾಪಿಸುವ
ಮುನ್ನ
ಹೂತುಬಿಡು ಮಣ್ಣಿನೊಳಗೆ!
ಮರೆತು ಎಲ್ಲಾ ಕೊನೆಗೆ
ಹುಟ್ಟಲ್ಲೊಂದು ಹೊಸಮನ
ಚಿಗುರಿ ಪಲ್ಲವಿಸಲಿ ಚೈತ್ರವನ
ಸತ್ತಮನದ ಸಮಾಧಿ
ಒಳಗಿನಿಂದ
ಎದ್ದು ಬಾರದಿರಲಿ
ಭೂತಗಳು
*****
Related Post
ಸಣ್ಣ ಕತೆ
-
ಇನ್ನೊಬ್ಬ
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…
-
ಗಿಣಿಯ ಸಾಕ್ಷಿ
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
-
ವಲಯ
ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…
-
ಬಾಳ ಚಕ್ರ ನಿಲ್ಲಲಿಲ್ಲ
ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…