Home / ಕವನ / ಕವಿತೆ / ಶಾಂತಿ ಸಮರಸದ ತೊರೆಯಲ್ಲಿ

ಶಾಂತಿ ಸಮರಸದ ತೊರೆಯಲ್ಲಿ

“ಒಂದೇತ್ ಜಗತ್ ಭೂಷಣೆ ಸುವರ್‍ಣ ಚೇತನವೇ
ಜಗದಾತ್ರಿ ದಾತೆಯೆ ಶರಣೆಂಬೆವೂ ನಿನಗೆ ಮಾತೆಯೆ
ಕರ ಮುಗಿವೆವು ನಿನಗೆ”
ಜನನಿಽಽ ಜಗದಾತ್ರೆಯೆ
ಓಂ ಶಾಂತಿಃ ಓಂ ಶಾಂತಿಃ

ಶಾಂತಿ ಸಮರಸದ ತೊರೆಯಲ್ಲಿ
ಭದ್ರ ಬುನಾದಿಯ ಸೆರೆಯಲ್ಲಿ
ಸನಾತನ ಸಮನ್ವಯ ಗುಡಿಯೊಳಗಣ ಮೂರ್‍ತವೆ ಇಲ್ಲಿ
ಹೇಳೇಳು ಮನವೇ ದನಿ ಗೂಡಿ ಹೇಳು
ಭಾರತ ಮಾತೆಗೆ ಜಯವಾಗಲಿ
ಜಯ ಜಯಹೇ ಜಯ ಜಯಹೇ ||

ಭಾತೃತ್ವದ ತುಂಬು ದೋಣಿಯಲ್ಲಿ
ಮಮತೆಯ ಮಡಿಲಂದದಿ ತೂಗಿ
ಮುನ್ನಡೆದಿದೆ ಜೀವನ ಕಣ್ಸೆಳೆದಿದೆ ಹೂಮನ
ಹೇಳೀಳು ಮನವೇ ದನಿ ಗೂಡಿ ಹೇಳು
ಭಾರತ ಮಾತೆಗೆ ಜಯವಾಗಲಿ
ಜಯ ಜಯಹೇ ಜಯ ಜಯಹೇ ||

ವರ್ತಮಾನದ ವೈಭವ ಶಿಖರಕೇರಿ
ಭೂತ ಭವಿಷ್ಯತೆಯ ಕರತಾಳದಲ್ಲಿ ಕೂಡಿ
ಮಾನವತೆಯ ನಮ್ರತೆಯ ಭಾವನ ಸ್ವರ ತಾಳದಲ್ಲಿ
ಹೇಳೀಳು ಮನವೇ ದನಿಗೂಡಿ ಹೇಳು
ಭಾರತ ಮಾತೆಗೆ ಜಯವಾಗಲಿ
ಜಯ ಜಯಹೇ ಜಯ ಜಯಹೇ ||

ಶುಭ್ರತೆಯ ಕೀರ್ತಿ ಹೊಸ್ತಿಲಲ್ಲಿ ಉಜ್ವಲ ಅಮರತ್ವದಡಿಯಲಿ
ಹಸನಾಗಿಹ ಕೀರ್ತಿ ಹೊಸ್ತಿಲಲ್ಲಿ ಉಜ್ವಲ ಅಮರತ್ವದಡಿಯಲಿ
ಐಕ್ಯತೆಯ ಹಿರಿಮೆಯಲಿ ನಲಿದಾಡಿಹುವುದು ಹೂಮನ
ಭವ್ಯತೆಯ ಸೋಗಿನಲಿ ಹೇಳೇಳು ಮನವೇ ದನಿಗೂಡಿಹೇಳು
ಭಾರತ ಮಾತೆಗೆ ಜಯವಾಗಲಿ
ಜಯ ಜಯಹೇ ಜಯ ಜಯಹೇ ||

ಋಷ್ಯ ಮುಖ ಕಲ್ಪತರು ಗರಿಮೆಯ ತಾಣದಲ್ಲಿ
ಶಿಲ್ಪ ಸೌಂದರ ಮೇಳೈಸುವ ಆಗರದಲ್ಲಿ
ಭಾರತೀಯ ಹೃತ್ಕಮಲಕೆ ತಲೆಬಾಗಿ ಹಾಡಿ
ಹೇಳೇಳು ಮನವೆ ದನಿಗೂಡಿ ಹೇಳು
ಭಾರತ ಮಾತೆಗೆ ಜಯವಾಗಲಿ
ಜಯ ಜಯಹೇ ಜಯ ಜಯಹೇ ||
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...