ಮುಕ್ತಿ

ಜೀವನದ ಮೌಲ್ಯಗಳೇ ಭಕ್ತಿ ಜ್ಞಾನ
ಅವನ್ನು ಪಡೆಯಲು ನಿ ಮಾಡುಧ್ಯಾನ
ಧ್ಯಾನದಲ್ಲಿ ಉಂಟು ಮಹದಾನಂದ
ಅದನ್ನು ಬಿಟ್ಟರೆ ಇನ್ನೇನು ಆನಂದ!

ಸಾಗರದಾಳದಲ್ಲಿ ವಜ್ರ ವೈಡೂರ್ಯ
ಅದನ್ನು ಪಡೆಯಲು ನಿ ಮಾಡು ಸಾಹಸ
ಇನ್ನೇನು ಬದುಕು ಕ್ಷಣಿಕ ಕ್ಷಣಿಕ
ಮತ್ತೊಂದಗಳಿಗೆ ಅಸತ್ಯ ಅವಸಾನ

ಎಲ್ಲೋಬಂದು ವಸನ ಹೂಡಿ
ನಿನ್ನದೆಂದು ಹೇಳುವ ಎಷ್ಟೋ ಎದೆಗಾರಿಕೆ
ನಿನ್ನವನ್ನೆ ಮರೆತು ನೀನು
ಮತ್ತೆಲ್ಲಿಂದ ಬಂತು ಸ್ವಾರ್ಥ ಹವಣಿಕೆ

ತಿಳುವಳಿಕೆ ಜ್ಞಾನಗಳ ಅರ್ಥೈಯಿಸಿದ ಮೇಲೆ
ಇನ್ನೇಕೆ ವಿಳಂಬ ತುಂಬಿಕೊಳ್ಳು ಭಕ್ತಿ
ನಿನ್ನ ಮನದ ಮೈಲಿಗೆಗಳಿಗೆಲ್ಲ
ಮಾಣಿಕ್ಯ ವಿಠಲನಾಗಲೀ ವಿರಕ್ತಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೬
Next post ಶಾಂತಿ ಸಮರಸದ ತೊರೆಯಲ್ಲಿ

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…