ಸುಭದ್ರೆ – ೬

ಸುಭದ್ರೆ – ೬

ಮಾಧವನು ಕತ್ತಲೆಯಾಗುವುದಕ್ಕೆ ಮುಂಚೆಯೆ ಮನೆಗೆ ಬಂ ದನು. ಸುಭದ್ರೆಯು ಉಪಾಧ್ಯಾಯೆಯ ಮನೆಯಿಂದ ಆಗತಾನೆ ಹೊರಕ್ವೆ ಬರುತ್ತಿದ್ದಳು. ಅವಳು ತಲೆಬಾಗಿಲ ಬಳಿ ಬರುವ ಹೊತ್ತಿಗೆ ಸರಿಯಾಗಿ ಮಾಧವನ್ನು ಎದುರಿಗೆ ಬಂದನು. . ಇವರಬ್ಬರ ನೋಟಗಳೂ ಸಂಧಿಸಿದುವು. ಸುಭದ್ರೆ ಲಜ್ಜೆಯಿಂದ ಕೆಂಪೇರಿದಮುಖ ವುಳ್ಳವಳಾಗಿ ತಲೆಯನ್ನು ತಗ್ಗಿ ಸಿಕೊಂಡು ಹೊರಟು ಹೋದಳು . ಅವಳ ಹೃದಯವು ಅನಿರ್ವಚನೀಯವಾದ ಆನಂದದಿಂದ ಪರಿಪೂ ರ್ಣವಾಗಿದ್ದಿತು.

ಮಾಧವನೂ ಏನೋ ಯೋಚಿಸುತ್ತಾ ಮನೆಯೊಳಕ್ಕೆ ಹೋದನು. . ಗಂಗಾಬಾಯಿ– “ಏನಪ್ಪಾ ಸಮಾಚಾರ ? ಏನೇನು ಕಾರುಬಾರು . ಮಾಡಿಕೊಂಡು . ಬಂದೆ ? ” . ಎಂದು ಕೇಳಿದಳು. ಮಾಧವನು ಅಲ್ಲಿ ನಡೆದ ವೃತ್ತಾಂತವನ್ನೆ ಲ್ಲಾ ಹೇಳಿದನು.

ಗಂಗಾಬಾಯಿ–ಈ ವಿಚಾರದಲ್ಲಿ ನಿನ್ನ ಅಭಿಪ್ರಾಯವೇನು?

ಮಾಧವ– ಅದು ಹಾಗಿರಲಿ, ದಿನ ನಿನ್ನ ಬಳಿ ಕುಳಿ ತುಕೊಂಡು ಅಳುತ್ತಿದ್ದ . ಹುಡುಗಿಗೆ ಯಾವಾಗ ಮದುವೆಯಂತೆ ?

ಗಂಗಾ–ಇನ್ನೇನು ಹತ್ತಿರಕ್ಕೆ ಬಂದಿತು.

ಮಾಧವ– ಅದನ್ನು ತಪ್ಪಿ ಸುವುದಕ್ಕಾಗುವುದಿಲ್ಲವೆ?

ಗಂಗಾ_-ತಪ್ಸಿ ಸಿ ಆಗುವುದೇನು? ಅವಳಿಗಂತೂ ಮದುವೆ ಯಾಗಲೇ ಬೇಕಷ್ಟೆ,

ಮಾಧವ—ಆದರೆ ಮುದುಕನಿಗೆ ಕೊಡುವುದೆ ?

ಗಂಗಾ_–ಮಾಡುವುದೇನು ? ಬೇರೆ ವರನೆಲ್ಲಿ ಸಿಕ್ಕುವನು ?

ಮಾಧವ__ಅಷ್ಟು ಚೆಲುವೆಯಾದ ಹುಡುಗಿಗೆ ವರನು ಸಿಕ್ಕು ವುದಿಲ್ಲವೆ?

ಗಂಗಾ— ಈಗಿನ ಕಾಲದಲ್ಲಿ ವರದಕ್ಷಿಣೆ ಮುಖ್ಯುವಲ್ಲದೆ ರೂಪವಾಗಲಿ, ಗುಣವಾಗಲಿ, ಕುಲೀನತೆಯಾಗಲಿ ಗಣನೆಗೆ ಬರುವುದಿಲ್ಲ.

ಮಾಧವ-ಅವಳಿಗೆ ವರದಕ್ಷಿಣೆಯನ್ನು ವರ ನನ್ನು ಹುಡುಕಿಕೊಡಲಾರೆಯಾ ?

ಗಂಗಾ– (ಮಾಧವನ ಮುಖವನ್ನು ಚೆನ್ನಾ ಗಿ ನೋಡಿ ನಗುತ್ತ) ನೀನು ಮನಸ್ಸುಮಾಡಿದರಾಗುತ್ತದೆ.

ಮಾಧವ__ನಾನು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡೇ ಇದ್ದೇನೆ

ಗಂಗಾ–ಏನೆಂದು ?

ಮಾಧವ- ಆ ಹುಡುಗಿಗೆ ನಾನೇ ವರನಾಗುವೆನೆಂದು.

ಗಂಗಾ–ಇದು ಬರಿಯಮಾತು.

ಮಾಧವ __ಎಂದಿಗೂಅಲ್ಲ. ನೀನುಮಾತ್ರ ಈಮದುವೆಯನ್ನು ನಿಲ್ಲಿಸಿದರೆ ಈಶ್ವರಸಾಕ್ಷಿ ಯಾಗಿಯೂ ನಾನು ಅವಳನ್ನ ಲ್ಲದೆಬೇರೊಬ್ಬರನ್ನೂ ಮದುವೆ ಮಾಡಿಕೊಳ್ಳುವುದಿಲ್ಲ.

ಗಂಗಾ_ಹಾಗೆ ಪ್ರತಿಜ್ಞೆ ಮಾಡಬೇಡ. ನಿನ್ನ ಅಂತಸ್ತಿಗೂ ಅವಳ ಅಂತಸ್ತಿಗೂ ಬಲು ದೂರವಿರುವದು, ಅಲ್ಲದೆ ನಿಮ್ಮ ತಂದೆಯವರಅಭಿಪ್ರಾಯವನ್ನು ಕೇಳಬೇಡವೆ

ಮಾಧವ.–ಅವರು ನನಗೆ ಈವಿಚಾರದಲ್ಲಿ ಸ್ವಾತಂತ್ರ್ಯವನ್ನು ಕೊಟ್ಟಿರುವರಲ್ಲ

ಗಂಗಾ_ ಅವರು. ನಿನಗೆ ಅಷ್ಟೊಂದು ಸ್ನಾತಂತ್ರ್ಯವನ್ನು ಕೊಟ್ಟಿಲ್ಲ. ಕುಲಗೋತ್ರ ಮುಂತಾದುವು ಗಳನ್ನು ಅವರು ಒಪ್ಪಬೇಕು.

ಮಾಧವ__ನಾನಂತೂ ಪ್ರತಿಜ್ಞೆ ಮಾಡಿಬಿಟ್ಟೆ. ಇನ್ನು ನನ್ನ ಜೀವವಿರು ವವರಿಗೂ ಅದಕ್ಕೆ ತಪ್ಪಲಾರೆ.

ಗಂಗಾಬಾಯಿಯು ಸುಮ್ಮನಾದಳು. ಅತ್ತ ಸುಭದ್ರೆಯು ಮನೆಯನ್ಪು ಸೇರಿದಮೇಲೆ ಪುಸ್ತಕವನ್ನು ತೆಗೆದುಕೊಂಡು ಓದುವುದಕ್ಕೆ ಕುಳಿತಳು. ಪುಸ್ತಕವನ್ನು ನೋಡಲಿ, ಆಕಾಶವನ್ನು ನೋಡಲಿ,ಗೋಡೆಯನ್ನು ನೋಡಲಿ, ಒಂದೇರೂಪವಾಗಿ ಕಾಣುತ್ತಿದ್ದಿತು. ಎಲ್ಲಿ ನೋಡಿದರೂ ಆಪರಮಸುಂದರವಾದ ಮುಖ!

ಆನಂತರ ಊಟಕ್ಕೆ ಕುಳಿತಾಗ್ಗೆ ರಮಾಬಾಯಿ ಗಂಡನೊಡನೆ “ರಾಮರಾಯರ ಮನೆಯಲ್ಲಿಮಗಳಿಗೆ ಮದುವೆಯಂತೆ, ಕೇಳಿದಿರಾ?“ ಎಂದಳು.

ವಿಶ್ವನಾಥ__-ನನಗೆ ತಿಳಿದಿರಲಿಲ್ಲ ವರನು ಯಾರು ?

ರಮಾಬಾಯಿ-~ ಪುನಹೆ ಶಂಕರರಾಯರಮಗ ನಂತೆ, ಆ ಹುಡುಗನೂ ಇಲ್ಲಿ. ಬಂದು ಗಂಗಾಬಾಯ ಮ್ಮನವರ ಮ ನೆಯಲ್ಲಿಳಿದಿದ್ದಾನಂತೆ.

ವಿಶ್ವ—ಗಂಗಾಬಾಯಿಯ ಅಕ್ಕನನ್ನೆ ಶಂಕರರಾಯರಿಗೆಕೊ ಟ್ಟಿದುದು. ಅದುದರಿಂದ ಅಲ್ಲಿಗೆ ಬಂದಿರಬಹುದು.

ಸುಭಿದ್ರೆಯು ಒಂದು ತುತ್ತನ್ನು ಬಾಯಿಹತ್ತಿರ ತೆಗೆದು ಕೊಂಡು ಹೋಗಿದ್ದವಳು ಈ ಮಾತು ಕೇಳುತ್ತಲೆ ಚಮಕಿತಳಾಗಿ ಕೆಳಕ್ಕೆ ಬಿಟ್ಟು ಬಿಟ್ಟ್ಗಳು ?

ವಿಶ್ವ-~-ಲಗ್ನ ಯಾವಾಗಲೊ ?

ರಮಾ ___ಕೂಡಲೆ ಆಗಬಹುದು .

ಅಲ್ಲಿಗೆ ಮಾತು ನಿಂತಿತು. ಸುಭದ್ರೆಯಮನಸ್ಸು ವಿಕಾರವನ್ನು ಹೊಂದಿತು. ಅವಳು ತನ್ಮೊಳಗೆತಾನೆ__”ಇದೇನಾಶ್ಚರ್ಯ ? ಕಮ ಲೆಗೆ ಮದುವೆಯಾದರೆ ನನಗೇನು ಸಂಕಟ?” ಎಂದಂದುಕೊಂಡಳು . ಆದರೂ. ಮನಸ್ಸಿನ ವಿಷಾದವು ಹೋಗಲಿಲ್ಲ. ಊಟವು ರುಚಿಸಲಿಲ್ಲ ರಾತ್ರಿ ನಿದ್ರೆಯೂಬರಲಿಲ್ಲ, ಒಂದು ಸಲ ” ಅಯ್ಯೋ! ಹುಚ್ಚ ಳೆ! ನಿನಗೇತಕ್ಕೆ ಬರಿಯಾಸೆ? ತಿಕುಕನು ಕನಸು ಕಂಡಹಾಗೆಯಾವುದೊ ಒಂದು ಉತ್ಕೃಷ್ಟ ಪದಾರ್ಥವನ್ನು ನೆನಸಿಕೊಂಡ ಮಾತ್ರಕ್ಕೆ ನಿನಗೆ ಸಿಕ್ಕಿ ಬಿಡುವುದೆ? ಏತಕ್ಕೆ ವೃಥಾಮನಃಕ್ಲೇಶ“ ಎಂದು ತನ್ನನ್ನು ತಾನೆ ಬೈದುಕೊಳ್ಳುವಳು. ಉತ್ತರ ಕ್ಷಣದಲ್ಲಿಯೇ ಆ ಪ್ರೇಮಪೂರಿತ ವಾದ ವಿಶಾಲನೇತ್ರಗಳೊ ? ಆ ಮಂದಹಾಸಯುಕ್ತವಾದ ಮುಖವೂ? ಇವುಗಳನ್ನು ನಾನು ನೋಡಿದುದು ಸುಳ್ಳೆ “? ಎಂದು ಸಮಾಧಾನಮಾಡಿಕೊಳ್ಳುವಳು. ಹೀಗೆ ಒಂದು. ರಾತ್ರಿಯನ್ನು ಒಂದು ಯುಗವಾಗಿ ಕಳೆದಳು .
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿರ್ವಸ್ತುಭಾವ
Next post ಮುಕ್ತಿ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

cheap jordans|wholesale air max|wholesale jordans|wholesale jewelry|wholesale jerseys